ಮರವಂತೆ: ಬಿರುಸುಗೊಂಡ ಕಡಲ್ಕೊರೆತ
Team Udayavani, Jul 6, 2017, 3:45 AM IST
ಕುಂದಾಪುರ: ಮರವಂತೆ ಗ್ರಾಮದಲ್ಲಿ ಕಾಮಗಾರಿ ನಡೆಯುತ್ತಿರುವ ಕೇರಳ ಮಾದರಿಯ ಹೊರ ಬಂದರು ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚುತ್ತಿದ್ದು ಬ್ರೇಕ್ ವಾಟರ್ ಒಳಗಡೆ ಇರುವ ಮನೆಗಳು ಅಪಾಯದಂಚಿನಲ್ಲಿವೆ.
ಕಡಲಿಗೆ ತಡೆಗೋಡೆಗಾಗಿ ಹಾಕಿದ ಕಲ್ಲುಗಳು ಜಾರುತ್ತಿದ್ದು, ಅನೇಕ ಮರಗಳು ಹಾಗೂ ಶೆಡ್ಗಳು ಈಗಾಗಲೇ ಸಮುದ್ರಪಾಲಾಗಿವೆ. ಇದಕ್ಕೆ ಹೊಂದಿ ಕೊಂಡು ಇರುವ ಫಿಶರೀಸ್ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ವಾಹನಗಳ ಸಂಚಾರ ಕಷ್ಟಕರವಾಗಿದೆ.