ಒಳಚರಂಡಿ ಒಡೆದು ರಸ್ತೆಯೆಲ್ಲ ಕೊಳಚೆ
Team Udayavani, Jul 6, 2017, 3:24 PM IST
ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ರಸ್ತೆಯ ಆನಂದ ಹೊಟೇಲ್ ಬಳಿ ಬುಧವಾರ ಒಳಚರಂಡಿ ಒಡೆದು ಕೊಳಚೆ ನೀರು ಮುಖ್ಯ ರಸ್ತೆಯಲ್ಲಿ ಪ್ರವಾಹೋಪಾದಿಯಲ್ಲಿ ಹರಿದ ಪರಿಣಾಮ ವಾಹನ ಸವಾರರು ತೀವ್ರ
ಸಂಕಷ್ಟಕ್ಕೆ ಒಳಗಾದರು.
ನಗರದಲ್ಲಿ ಆನಂದ ಹೋಟೆಲ್ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಿಲ್ಲಾ ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಹಾಗೂ ಶ್ರೀ ಶರಣಬಸವೇಶ್ವರ ಕಾಲೇಜು, ಸಾರ್ವಜನಿಕ ಉದ್ಯಾನವನ,
ನೂತನ ವಿದ್ಯಾಲಯ ಮುಂತಾದ ಶಾಲೆ, ಕಾಲೇಜುಗಳು, ಕಚೇರಿಗಳು ಇದ್ದುದರಿಂದ ಕೊಳಚೆ ಪ್ರವಾಹದಲ್ಲಿಯೇ
ಜನರು, ವಿದ್ಯಾರ್ಥಿಗಳು, ವರ್ತಕರು ಹಾಗೂ ಸಾರ್ವಜನಿಕರು ಸಂಚರಿಸುವಂತಾಗಿತ್ತು. ನಗರ ಸಾರಿಗೆ ಬಸ್ಗಳು, ಆಟೋಗಳು ಕೊಳಚೆ ಹರಿಯುವ ಪ್ರವಾಹದಲ್ಲಿಯೇ ನಿಲುಗಡೆ ಆಗಿದ್ದರಿಂದ ಕೆಟ್ಟ ವಾಸನೆಯಿಂದಾಗಿ ಪ್ರಯಾಣಿಕರು ಕೆಲ
ಹೊತ್ತಿನವರಿಗೆ ಪರದಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ ಅವರ ನಿವಾಸದ ಬಲಬದಿಯ ಮೂಲೆಯಲ್ಲಿಯೇ ಒಳಚರಂಡಿ ಒಡೆದು, ಅದರ ಕೊಳಚೆ ನೀರು ಕಾರಂಜಿಯಂತೆ ಚಿಮ್ಮಿ ಆನಂದ ಹೊಟೇಲ್ ಮಾರ್ಗವನ್ನು ಪ್ರವಾಹಪೀಡಿತವನ್ನಾಗಿ ಮಾಡಿತು. ಸುದ್ದಿ ತಿಳಿದು ಸುಮಾರು ಒಂದು ತಾಸಿನ ನಂತರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಳಚರಂಡಿ ದುರಸ್ತಿಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ