ಕೂದಲು ಕತ್ತರಿಸೋರು ಯಾರು?
Team Udayavani, Jul 7, 2017, 3:45 AM IST
ಜೈಪುರ: ರಾಜಸ್ಥಾನದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಅಲ್ಲಿನ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ತಲೆ ಕೂದಲುಗಳನ್ನು ರಾತೋರಾತ್ರಿ ಕತ್ತರಿಸಲಾಗುತ್ತಿದೆ. ಆದರೆ ಹೀಗೆ ಕೂದಲು ಕತ್ತರಿಸಿಕೊಂಡು ಹೋಗುವವರು ಯಾರು ಎಂಬುದು ಮಾತ್ರ ನಿಗೂಢ!
“ಅಂದು ರಾತ್ರಿ ನಮ್ಮ ಮಗಳು ನಮ್ಮೊಂದಿಗೇ ಮಲಗಿದ್ದಳು. ಬೆಳಗ್ಗೆದ್ದು ನೋಡಿದಾಗ ದಟ್ಟವಾಗಿದ್ದ ಅವಳ ತಲೆ ಕೂದಲುಗಳನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದರು. ನಮ್ಮನ್ನು ಬಿಟ್ಟು ಬೇರಾರೂ ಮನೆಯಲ್ಲಿರಲಿಲ್ಲ. ಯಾರು ಬಂದು ಕೂದಲು ಕತ್ತರಿಸಿಕೊಂಡು ಹೋಗಿದ್ದಾರೋ ತಿಳಿಯದು. ಬಹುಶಃ ಯಾವುದೋ ದೈವಿಕ ಶಕ್ತಿಯ ಕೆಲಸವಿರಬೇಕು’ ಎನ್ನುತ್ತಾರೆ ಬಾಬೂರಾಮ್.
ಇದು ಬಾಬೂರಾಮ್ ಒಬ್ಬರಿಗೇ ಆದ ಅನುಭವವಲ್ಲ. ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಮಂದಿಗೆ ಇಂಥ ಅನುಭವವಾಗಿದೆ. ತಾರಕ್ಚಂದ್ ಲಖನ್ ಅವರಿಗಾದ ಅನುಭವ ಇನ್ನೂ ವಿಚಿತ್ರ. “ಮನೆಯವರೆಲ್ಲ ಟಿವಿ ನೋಡುತ್ತಾ ಕುಳಿತಿದ್ದಾಗ ಏರ್ ಕೂಲರ್ನಿಂದ ಏನೋ ವಾಸನೆ ಬಂತು. ತತ್ಕ್ಷಣ ಎಲ್ಲರೂ ಮೂಛೆì ಹೋದೆವು. ಎಚ್ಚರವಾದಾಗ ನನ್ನ 15 ವರ್ಷದ ಮಗಳ ಕೂದಲುಗಳನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದರು,’ ಎನ್ನುತ್ತಾರೆ ಲಖನ್.
ಕೆಲವರು “ದೇವದೂತ’ ಬಂದು ಕೂದಲು ಕತ್ತರಿಸಿಕೊಂಡು ಹೋಗುತ್ತಿದ್ದಾನೆ ಎಂದು ಕೈಮುಗಿದರೆ, ಮತ್ತೆ ಕೆಲವರು
ಮೌಡ್ಯ ಪಕ್ಕಕ್ಕಿಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ. 15 ದಿನಗಳಲ್ಲಿ ಇಂತಹ 12 ದೂರುಗಳು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆದರೆ ಈ ವರೆಗೆ ಕೂದಲ ಕಳ್ಳ ಸಿಕ್ಕಿಬಿದ್ದಿಲ್ಲ. ಇಂಥ ಘಟನೆಗಳು ರಾಜಸ್ಥಾನದಲ್ಲಿ ಪದೇ ಪದೆ ಮರುಕಳಿಸುತ್ತಿದ್ದು, ಇದು ದೇವರ ಆಟವೋ ದೆವ್ವದ ಕಾಟವೋ ಎಂದು ತಿಳಿಯದೆ ಜನ ಗೊಂದಲಕ್ಕೆ ಸಿಲುಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ