ಅಪಹೃತ ಭಾರತೀಯರ ಬಿಡುಗಡೆಗೆ ಮಾತುಕತೆ
Team Udayavani, Jul 11, 2017, 11:19 AM IST
ಮೊಸೂಲ್/ಹೊಸದಿಲ್ಲಿ: ಹಲವು ತಿಂಗಳ ಸತತ ಹೋರಾಟದ ಬಳಿಕ ಐಸಿಸ್(ಇಸ್ಲಾಮಿಕ್ ಸ್ಟೇಟ್) ಉಗ್ರರಕಪಿ ಮುಷ್ಟಿಯಿಂದ ಮೊಸೂಲ್ ನಗರವನ್ನು ವಶಪಡಿಸಿಕೊಂಡಿದ್ದೇವೆ ಎಂದು ಇರಾಕ್ ಸೇನೆ ಘೋಷಿಸಿದ ಬೆನ್ನಲ್ಲೇ ಉಗ್ರರಿಂದ ಅಪಹರಣಕ್ಕೀಡಾದ ಭಾರತೀಯರ ಕುರಿತ ಪ್ರಸ್ತಾಪ ಮುನ್ನಲೆಗೆ ಬಂದಿದೆ.
2014ರಲ್ಲಿ ಮೊಸೂಲ್ ನಗರದಲ್ಲಿ ಉಗ್ರರು 39 ಮಂದಿ ಭಾರತೀಯರನ್ನು (ಈ ಪೈಕಿ ಬಹು ತೇಕ ಮಂದಿ ಪಂಜಾಬ್ನವರು) ಅಪಹರಿಸಿದ್ದರು. 3 ವರ್ಷಗಳಾದರೂ ಒತ್ತೆಯಾಳುಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೀಗ ಮೊಸೂಲ್ ನಗರವು ಇರಾಕ್ ಸೇನೆಯ ವಶಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಇರಾಕ್ ಸರಕಾರವನ್ನು ಸಂಪರ್ಕಿಸಿ, ಭಾರತೀಯರ ಪತ್ತೆ ಹಾಗೂ ಬಿಡುಗಡೆ ಕುರಿತು ಪ್ರಸ್ತಾಪಿಸಿದೆ. ಇವರ ಬಿಡುಗಡೆಗೆ ಎಲ್ಲ ರೀತಿ ನೆರವು ನೀಡುವುದಾಗಿ ಇರಾಕ್ ಸರಕಾರ ಭರವಸೆ ನೀಡಿದೆ ಎಂದು ಸೋಮವಾರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಇದೇ ವೇಳೆ, ವಿದೇಶಾಂಗ ಇಲಾಖೆ ಸಹಾ ಯಕ ಸಚಿವ ಜ.ವಿ.ಕೆ.ಸಿಂಗ್ ಸೋಮವಾರವೇ ಇರಾಕ್ನ ಎರ್ಬಿಲ್ನತ್ತ ಪ್ರಯಾಣ ಬೆಳೆಸಿದ್ದಾರೆ.
ಸುಷ್ಮಾಗೆ ಒತ್ತಾಯ: ಇದಕ್ಕೂ ಮುನ್ನ, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಭಾರತೀಯ ಅಪಹೃತರ ಬಿಡುಗಡೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸುಷ್ಮಾ, “39 ಭಾರತೀಯರನ್ನೂ ಕರೆತರಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಭರವಸೆ ನೀಡಿದ್ದರು.
ಟೈಗ್ರಿಸ್ ನದಿಗೆ ಹಾರಿದ ಐಸಿಸ್ ಉಗ್ರರು!
ಇರಾಕ್ನ ಪ್ರಮುಖ ನಗರ ಮೊಸೂಲ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡು ಕೇಕೆ ಹಾಕುತ್ತಿದ್ದ ಐಸಿಸ್ ಉಗ್ರರಿಗೆ ರವಿವಾರ ಆಘಾತ ಕಾದಿತ್ತು. ಇರಾಕ್ ಸೇನೆಯು ಮೊಸೂಲ್ ನಗರವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ, ಸೋಲಿನ ರುಚಿ ಕಂಡ ಉಗ್ರರು ದಿಕ್ಕಾಪಾಲಾಗಿ ಓಡಿದರು. ವಿಶೇಷವೆಂದರೆ, ಹಲವು ಉಗ್ರಗಾಮಿಗಳು ರಣಾಂಗಣದಿಂದ ಹಿಂದೆ ಸರಿದಿದ್ದಲ್ಲದೆ, ಟೈಗ್ರಿಸ್ ನದಿಗೆ ಹಾರಿ ಪ್ರಾಣ ಬಿಟ್ಟರು ಎಂದು ಸೇನೆ ಹೇಳಿದೆ. ಈಜಲು ಗೊತ್ತಿದ್ದ ಕೆಲವರು ನದಿಯಲ್ಲಿ ಈಜಿ ಬಚಾವಾಗಲು ಯತ್ನಿಸಿದ್ದು, 30 ಮಂದಿ ಉಗ್ರರನ್ನು ಸೇನೆ ಸದೆಬಡಿದಿದೆ. ಸತತ 8 ತಿಂಗಳ ಹೋರಾಟದ ಬಳಿಕ ಸೇನೆ ರವಿವಾರ ಕೊನೆಯ ಹಂತದ ಕಾರ್ಯಾಚರಣೆಯಾಗಿ ಗುಂಡಿನ ದಾಳಿ ಹಾಗೂ ವೈಮಾನಿಕ ದಾಳಿ ನಡೆಸಿತ್ತು. ಉಗ್ರರ ದಮನದ ಬಳಿಕ ಟೈಗ್ರಿಸ್ ನದಿ ತಟದಲ್ಲಿ ಇರಾಕ್ ಧ್ವಜವನ್ನು ಹಾರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ