ಸುದೀಪ್ ವಿರುದ್ಧ ದೂರು ದಾಖಲು
Team Udayavani, Jul 13, 2017, 2:45 AM IST
ಚಿಕ್ಕಮಗಳೂರು: ಚಿತ್ರೀಕರಣಕ್ಕೆ ಬಳಸಿಕೊಂಡಿದ್ದ ಮನೆಗೆ ಬಾಡಿಗೆ ನೀಡದಿರುವುದು ಹಾಗೂ ಚಿತ್ರೀಕರಣದ ವೇಳೆ ತೋಟವನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ಖ್ಯಾತ ನಟ ಕಿಚ್ಚ ಸುದೀಪ ವಿರುದ್ಧ ಮನೆಯ ಮಾಲೀಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಜೊತೆಗೆ ತಮ್ಮ ವಕೀಲರ ಮೂಲಕ ನೋಟಿಸ್ ಅನ್ನು ಜಾರಿಗೊಳಿಸಿದ್ದಾರೆ.
ಸುದೀಪ ನಿರ್ಮಾಣದ “ವಾರಸಾªರ’ ಧಾರಾವಾಹಿಯ ಚಿತ್ರೀಕರಣವನ್ನು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಅವರ ಮನೆ ಹಾಗೂ ಕಾμ ತೋಟದಲ್ಲಿ ಮಾಡಲಾಗಿತ್ತು. ಚಿತ್ರೀಕರಣ ಮುಗಿದ ನಂತರ ಮನೆ ಬಾಡಿಗೆ ನೀಡಿಲ್ಲ ಮತ್ತು ಚಿತ್ರೀಕರಣದ ವೇಳೆ ತೋಟವನ್ನು ಹಾಳು ಮಾಡಲಾಗಿದೆ ಎಂದು ದೀಪಕ್ ಮಯೂರ್ ನಿರ್ಮಾಪಕ ಕಿಚ್ಚ ಸುದೀಪ ಹಾಗೂ ಸಹ ನಿರ್ಮಾಪಕ ಮಹೇಶ್, ನಿರ್ದೇಶಕ ಗಡ್ಡ ವಿಜಿ ವಿರುದ್ಧ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕಚೇರಿಗೆ
ದೂರು ಸಲ್ಲಿಸಿದ್ದಾರೆ. ಇದಲ್ಲದೆ ಮೂವರಿಗೂ ವಕೀಲರ ಮೂಲಕ ನೋಟಿಸ್ ಜಾರಿಯಾಗಿದೆ. ಕಾμ ತೋಟದಲ್ಲಿ “ವಾರಸಾªರ’ ಧಾರಾವಾಹಿಯ ಚಿತ್ರೀಕರಣ 40 ದಿನ ನಡೆದಿತ್ತು. ಮನೆ ಬಾಡಿಗೆ ದಿನಕ್ಕೆ 6 ಸಾವಿರದಂತೆ ನೀಡುವುದಾಗಿ ಹೇಳಲಾಗಿತ್ತು.
ಆದರೆ ಒಟ್ಟು ಬಾಡಿಗೆ ಹಣ 1.50 ಲಕ್ಷ ರೂ. ನೀಡಿಲ್ಲ. ಅಲ್ಲದೆ ಚಿತ್ರೀಕರಣದ ವೇಳೆ ತೋಟದಲ್ಲಿನ ಬೆಳೆ ನಾಶವಾಗಿದೆ. ಇದರ ನಷ್ಟವನ್ನು ಭರಿಸಿಕೊಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. ಧಾರಾವಾಹಿಯ ನಿರ್ಮಾಪಕ ಮಹೇಶ್ ಹಾಗೂ ಗಡ್ಡ ವಿಜಿ ಅವರನ್ನು ಕರೆಸಿ ಹೇಳಿಕೆ ಪಡೆದು ಲೋಪವಾಗಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್
MUST WATCH
ಹೊಸ ಸೇರ್ಪಡೆ
Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ
LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ