ತನ್ನದೇ ಕಂಚಿನ ಪ್ರತಿಮೆ ಉದ್ಘಾಟಿಸಿದ ಗಂಗೂಲಿ
Team Udayavani, Jul 16, 2017, 3:50 AM IST
ಕೋಲ್ಕತಾ: ತನ್ನದೇ ಕಂಚಿನ ಪ್ರತಿಮೆಯೊಂದನ್ನು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಶನಿವಾರ ಅನಾವರಣಗೊಳಿಸಿದರು. ಪಶ್ಚಿಮ ಬಂಗಾಲದ ಬಾಲೂರ್ಘಾಟ್ನ “ಬಿಕಾಸ್ ಮೈದಾನ್’ದಲ್ಲಿ ಈ ಸಮಾ ರಂಭ ನೆರವೇರಿತು.
ಇದು 8 ಅಡಿಯ ಕಂಚಿನ ಪ್ರತಿಮೆಯಾಗಿದ್ದು, ಗಂಗೂಲಿ ಶತಕ ಬಾರಿ ಸಿದ ಬಳಿಕ ಬ್ಯಾಟ್ ಮೇಲೆ ಎತ್ತಿ ಸಂಭ್ರಮಿಸಿದ ಮಾದರಿಯಲ್ಲಿದೆ. 7 ಲಕ್ಷ ರೂ. ಮೌಲ್ಯದ ಈ ಪ್ರತಿಮೆಯನ್ನು ನಿರ್ಮಿಸಿದವರು ಸಿಲಿ ಗುರಿಯ ಶಿಲ್ಪಿ ಸುಸಾಂತ್ ಪಾಲ್.
ಈ ಸಮಾರಂಭಕ್ಕಾಗಿ ಗಂಗೂಲಿ ರೈಲಿನಲ್ಲಿ ಆಗಮಿಸಿದ್ದರು. ಸ್ವಲ್ಪ ಹೊತ್ತು ಗೆಸ್ಟ್ಹೌಸ್ನಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರು ನೇರವಾಗಿ ಸಮಾರಂಭ ಸ್ಥಳಕ್ಕೆ ಬಂದರು.
ಇದು ಪಶ್ಚಿಮ ಬಂಗಾಲದಲ್ಲಿ ನಿರ್ಮಾಣಗೊಂಡ ಗಂಗೂಲಿ ಅವರ 2ನೇ ಪ್ರತಿಮೆ. ಮೊದಲನೆಯದು ಕೋಲ್ಕತಾದಲ್ಲಿದೆ.
ಗಂಗೂಲಿ ಸೀಟಿಗೆ ಲಗ್ಗೆ !
ಈ ಸಮಾರಂಭಕ್ಕೆ ಆಗಮಿಸಲು ಗಂಗೂಲಿ ಸೀಲ್ದಾಹ್ ನಿಲ್ದಾಣದಿಂದ “ಪದಾತಿಕ್ ಎಕ್ಸ್ಪ್ರೆಸ್’ ರೈಲನ್ನೇರಿ ದ್ದರು. 15 ವರ್ಷಗಳ ಬಳಿಕ ರೈಲು ಪ್ರಯಾಣದ ಸಂಭ್ರಮದಲ್ಲಿದ್ದರು ದಾದಾ. ತಮಗಾಗಿ ಕಾದಿರಿಸಲಾಗಿದ್ದ ಎಸಿ ಫಸ್ಟ್ಕ್ಲಾಸ್ ಕಂಪಾರ್ಟ್ ಮೆಂಟ್ಗೆ ಆಗಮಿಸಿದಾಗ ಅಚ್ಚರಿ ಯೊಂದು ಕಾದಿತ್ತು. ಅವರ ಜಾಗ ವನ್ನು ಮತ್ತೂಬ್ಬ ಪ್ರಯಾಣಿಕ ಆಕ್ರ ಮಿಸಿಕೊಂಡಿದ್ದ. ಜಾಗ ಬಿಡುವಂತೆ ವಿನಂತಿಸಿಕೊಂಡರೂ ಆತ ಕೇಳಲಿಲ್ಲ. ಗಂಗೂಲಿ ಜತೆ ಜಗಳಕ್ಕೇ ಇಳಿದ. ಅನ್ಯ ಮಾರ್ಗವಿಲ್ಲದೆ ಗಂಗೂಲಿ ರೈಲಿನಿಂದ ಕೆಳಗಿಳಿದರು.
ಗಂಗೂಲಿಯನ್ನು ಕಂಡೊಡನೆ ಪ್ರಯಾಣಿಕರೆಲ್ಲ ಮುತ್ತಿಕೊಂಡರು. ಇವರಿಂದ ಗಂಗೂಲಿಯನ್ನು ಪಾರು ಮಾಡಲು ಆರ್ಪಿಎಫ್ನವ ರೇನೋ ಯಶಸ್ವಿಯಾದರು, ಆದರೆ ಗಂಗೂಲಿ ಸೀಟಿನ ಸಮಸ್ಯೆ ಮಾತ್ರ ಬಗೆ ಹರಿಯಲಿಲ್ಲ. ಕೊನೆಗೆ ಎಸಿ 2-ಟೈರ್ನಲ್ಲಿ ದಾದಾಗೆ ಸೀಟೊಂ ದನ್ನು ವ್ಯವಸ್ಥೆಗೊಳಿಸಲಾಯಿತು. ಹೀಗೆ ಸಾಗಿತ್ತು ಸೌರವ್ ಗಂಗೂಲಿ ರೈಲು ಪ್ರಯಾಣ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್