ಧೈರ್ಯಂ ಎಂಬ ಮೈಂಡ್‌ಗೇಮ್‌ ಸಿನಿಮಾ


Team Udayavani, Jul 19, 2017, 10:35 AM IST

dhairyam.jpg

ಅಜೇಯ್‌ ರಾವ್‌ ಅಭಿನಯದ “ಧೈರ್ಯಂ’ ಈ ವಾರ ತೆರೆಗೆ ಬರುತ್ತಿದೆ. “ಮಳೆ’ ಚಿತ್ರ ನಿರ್ದೇಶಿಸಿದ್ದ ಶಿವತೇಜಸ್‌ಗೆ ಇದು ಎರಡನೇ ಸಿನಿಮಾ. ಸಹಜವಾಗಿಯೇ ಚಿತ್ರತಂಡಕ್ಕೆ ಚಿತ್ರದ ಬಗ್ಗೆ ಖುಷಿ ಇದೆ. ಅದಕ್ಕೆ ಕಾರಣ, ಸಿನಿಮಾ ಮೂಡಿಬಂದಿರುವ ರೀತಿ. ಈವರೆಗೆ ಅಜೇಯ್‌ರಾವ್‌ ಲವರ್‌ಬಾಯ್‌ ಆಗಿ ಕಾಣಿಸಿಕೊಂಡಿದ್ದರು.

ಆದರೆ, ಈ “ಧೈರ್ಯಂ’ನಲ್ಲಿ ಅಜೇಯ್‌ರಾವ್‌ ಹೊಸ ಅನುಭವ ಕಟ್ಟಿಕೊಡಲಿದ್ದಾರೆ. ಅಜೇಯ್‌ರಾವ್‌ ಇಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲ, ಪಕ್ಕಾ ಆ್ಯಕ್ಷನ್‌ ಹೀರೋ ಆಗಿ ಮಿಂಚಿದ್ದಾರೆ. ಡಾ.ಕೆ.ರಾಜು ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಅಂದಹಾಗೆ, “ಧೈರ್ಯಂ’ ಸ್ಪೆಷಾಲಿಟಿ ಏನು ಎಂಬ ಕುರಿತು ಒಂದು ರೌಂಡಪ್‌.

ನಿರ್ದೇಶಕ ಶಿವತೇಜಸ್‌ ಅವರ ಎರಡನೇ ಚಿತ್ರವಿದು. ಮೊದಲ ಚಿತ್ರದಲ್ಲೇ ಲವ್‌ಸ್ಟೋರಿ ಕಟ್ಟಿಕೊಟ್ಟಿದ್ದ ಶಿವ ತೇಜಸ್‌, ತಮ್ಮ ಎರಡನೇ ಸಿನಿಮಾದಲ್ಲಿ ಲವ್‌ಸ್ಟೋರಿ ಜೊತೆಗೆ ಆ್ಯಕ್ಷನ್‌ ಸಿನಿಮಾವನ್ನು ಕೊಟ್ಟಿದ್ದಾರೆ. ಅಂದಹಾಗೆ, “ಧೈರ್ಯಂ’ ಸಸ್ಪೆನ್‌, ಥ್ರಿಲ್ಲಿಂಗ್‌ ಸಿನಿಮಾ. ಫ್ಯಾಮಿಲಿ ಆಡಿಯನ್ಸ್‌ ಕೂಡ ಚಿತ್ರ ನೋಡುವಷ್ಟರ ಮಟ್ಟಿಗಿನ ಅಂಶಗಳು ಇಲ್ಲಿವೆ.

ಒಂದು ಮೈಂಡ್‌ಗೆàಮ್‌ ಸಿನಿಮಾದಲ್ಲಿ ನಾಯಕ ಹಾಗೂ ವಿಲನ್‌ ನಡುವಿನ ಹಾವು-ಏಣಿ ಆಟ ಚಿತ್ರದ ಹೈಲೈಟ್‌. ಈ ಚಿತ್ರದಲ್ಲಿ ಅಜೇಯ್‌ರಾವ್‌ಗೆ ನಾಯಕಿಯಾಗಿ ಅದಿತಿ ನಟಿಸಿದ್ದಾರೆ. ಈ ಹಿಂದೆ ಧಾರಾವಾಹಿಯಲ್ಲಿ ನಟಿಸಿದ್ದ ಅದಿತಿಗೆ ನಾಯಕಿಯಾಗಿ “ಧೈರ್ಯಂ’ ಮೊದಲ ಚಿತ್ರ. ಇದೊಂದು ಸಾಮಾನ್ಯ ಹುಡುಗನ ಅಸಾಮಾನ್ಯ ಕಥೆ.

ಇಲ್ಲಿ ಒಂದು ಮಿಡ್ಲ್ ಕ್ಲಾಸ್‌ ಹುಡುಗನೊಬ್ಬನ ಕಥೆಯನ್ನು ವಿಭಿನ್ನವಾಗಿ ಹೇಳಲು ಪ್ರಯತ್ನಿಸಿದ್ದಾರಂತೆ ನಿರ್ದೇಶಕರು. “ಮಧ್ಯಮ ವರ್ಗದ ಕುಟುಂಬದಲ್ಲಿರುವ ಒಬ್ಬ ಬುದ್ಧಿವಂತ ಹುಡುಗನ ಕಥೆ ಇದಾಗಿದ್ದು, ಇಂಜಿನಿಯರಿಂಗ್‌ ಓದುತ್ತಿರುವ ಆ ಹುಡುಗ ಮುಂದೆ ದೊಡ್ಡ ಇಂಜಿನಿಯರ್‌ ಆಗಬೇಕೆಂದು ಕನಸು ಕಟ್ಟಿಕೊಂಡಿರುವ ತಂದೆ-ತಾಯಿ ಒಂದು ಕಡೆಯಾದರೆ, ಪ್ರೀತಿಯಲ್ಲಿ ಬೀಳುವ ಹುಡುಗನ ಹಾದಿ ಮತ್ತೂಂದೆಡೆ ಸಾಗುತ್ತದೆ.

ತನಗೆ ಗೊತ್ತಿಲ್ಲದಂತೆ ಸುತ್ತಿಕೊಳ್ಳುವ ಸಮಸ್ಯೆಯಿಂದ ಆ ಹುಡುಗ ಹೇಗೆ ಹೊರಬರುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಲ್ಲಿ ಮುಖ್ಯವಾಗಿ ಧೈರ್ಯವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದೇ ಚಿತ್ರದ ಸಾರಾಂಶವಂತೆ. ಒಂದು ಕಮರ್ಷಿಯಲ್‌ ಸಿನಿಮಾಗೆ ಏನೇನು ಇರಬೇಕೋ ಅವೆಲ್ಲವೂ ಇಲ್ಲಿದೆ. ಹಾಗಾಗಿ ಇದೊಂದು ಪ್ಯಾಕೇಜ್‌ ಸಿನಿಮಾ ಎಂಬುದು ನಿರ್ದೇಶಕರ ಮಾತು.

ಚಿತ್ರದಲ್ಲಿ ವಿಲನ್‌ ಪಾತ್ರ ಕೂಡಾ ಪ್ರಮುಖವಾಗಿದ್ದು, ರವಿಶಂಕರ್‌ ಇಲ್ಲಿ ಖಡಕ್‌ ವಿಲನ್‌ ಆಗಿ ನಟಿಸಿದ್ದಾರೆ. ನಾಯಕ ಹಾಗೂ ವಿಲನ್‌ ನಡುವಿನ ದೃಶ್ಯಗಳೇ ಚಿತ್ರದ ವಿಶೇಷತೆಯನ್ನು ಹೆಚ್ಚಿಸುತ್ತವೆ. ಅಜೇಯ್‌ ಹಾಗೂ ರವಿಶಂಕರ್‌ ನಡುವಿನ ಚೇಸಿಂಗ್‌ ದೃಶ್ಯಗಳು ಚಿತ್ರದ ವೇಗಕ್ಕೊಂದು ಪ್ಲಸ್‌ ಎನ್ನುತ್ತಾರೆ ಅವರು. ಈಗಾಗಲೇ ಚಿತ್ರದ ಮೋಷನ್‌ ಪೋಸ್ಟರ್‌ ಸದ್ದು ಮಾಡಿದ್ದು, ಅದರಲ್ಲಿರುವ “ಮನಿ ಮನಿ ಮನಿ, ಇದು ದುಡ್ಡಿನ ದುನಿಯಾ.

ಇಲ್ಲಿ ಎಲ್ಲರಿಗೂ ದುಡ್ಡು ಬೇಕು. ಮನುಷ್ಯ ಹುಟ್ಟೋಕು ದುಡ್ಡು ಬೇಕು, ಸತ್ತಮೇಲೂ ಮಣ್ಣಿಗೋಕೋಕು ದುಡ್ಡು ಬೇಕು. ದುಡ್ಡಿದ್ರೆ ಪ್ರೀತ್ಸೋಳು ಹತ್ತಿರ ಬರ್ತಾಳೆ, ಸ್ನೇಹಿತರು ಜತೆಗಿರ್ತಾರೆ. ದುಡ್ಡಿಲ್ಲಾಂದ್ರೆ, ಹೆಂಡತಿನೂ ಬೆನ್ನು ಹಾಕಿ ಮಲಕ್ಕೊತ್ತಾಳೆ. ನಿಯತ್ತಿನಿಂದ ದುಡಿಯೋನಿಗೆ ಮಾತ್ರ ದುಡ್‌ ಒಲಿಯುತ್ತೆ ಅನ್ನೋದು ವೇದಾಂತ. ನೀತಿಗೆಟ್ರೂ ಪರವಾಗಿಲ್ಲ ದುಡ್‌ ಮಾಡ್ಬೇಕು ಅನ್ನೋದು ನನ್ನ ಸಿದ್ಧಾಂತ. ಐ ಯಾಮ್‌ ರೆಡಿ ಟು ಡು ಎನಿಥಿಂಗ್‌ ಫಾರ್‌ ಮನಿ …’  ಎಂಬ ಈ ಡೈಲಾಗ್‌ಗಳು ಚಿತ್ರವನ್ನು ನೋಡುವ ಕುತೂಹಲ ಹೆಚ್ಚಿಸಿವೆ. 

ಇನ್‌ಡೋರ್‌ನಲ್ಲೇ “ಧೈರ್ಯಂ’: ಸಾಮಾನ್ಯವಾಗಿ ಕೆಲವು ಸಿನಿಮಾಗಳ ಹಾಡುಗಳ ಚಿತ್ರೀಕರಣ ಹಚ್ಚ ಹಸಿರಿನ ನಡುವೆ ಅಥವಾ ಇನ್ಯಾವುದೋ ಔಟ್‌ಡೋರ್‌ನಲ್ಲಿ ನಡೆದರೆ “ಧೈಯಂ’ ಚಿತ್ರದ ಹಾಡಿನ ಚಿತ್ರೀಕರಣ ಬಹುತೇಕ ಸೆಟ್‌ಗಳಲ್ಲೇ ನಡೆದಿದೆ. ಅದು ಈ ಚಿತ್ರದ ವಿಶೇಷತೆಗಳಲ್ಲೊಂದು. ಹಾಡುಗಳಿಗಾಗಿಯಏ ಸುಮಾರು ಎಂಟಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಲಾಗಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಹಾಡೊಂದನ್ನು ಮೂರು ವಿಭಿನ್ನ ಶೈಲಿಯ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಇನ್ನು, ರಾಮನಗರದ ಗುಡ್ಡದಲ್ಲೂ ಸೆಟ್‌ ಹಾಕಿ ಹಾಡನ್ನು ಚಿತ್ರೀಕರಿಸಲಾಗಿದೆ.  ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ನಡೆದಿದೆ.  

150 ಚಿತ್ರಮಂದಿರಗಳಲ್ಲಿ ಬಿಡುಗಡೆ: “ಧೈರ್ಯಂ’ ಚಿತ್ರವನ್ನು ನಿರ್ಮಾಪಕ ಡಾ.ಕೆ.ರಾಜು ಅವರು ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲೆಡೆಯಿಂದಲೂ ಚಿತ್ರಕ್ಕೆ ಬೇಡಿಕೆ ಬಂದಿದ್ದು, ಕೆಲವು ಏರಿಯಾಗಳಲ್ಲಿ ಚಿತ್ರ ಸೇಲ್‌ ಆಗಿದೆ. ಚಿತ್ರದ ಆಡಿಯೋ ಹಾಗೂ ಟ್ರೇಲರ್‌ ನೋಡಿ, ಚಿತ್ರದ ಬೇಡಿಕೆ ಹೆಚ್ಚಾಗಿತ್ತು.

ಅದರಂತೆ, ನಿರ್ಮಾಪಕರು ಒಳ್ಳೆಯ ಮೊತ್ತಕ್ಕೆ ಕೆಲವು ಏರಿಯಾಗಳಲ್ಲಿ ಮಾತ್ರ ಸೇಲ್‌ ಮಾಡಿದ್ದಾರೆ. ಅದು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ವಿಶೇಷ. ಸದ್ಯಕ್ಕೆ 150 ಚಿತ್ರಗಳಲ್ಲಿ ಬಿಡುಗಡೆ ಮಾಡುವ ಗುರಿ ಇಟ್ಟುಕೊಂಡಿರುವ ನಿರ್ಮಾಪಕರು, ಇನ್ನೂ ಬೇಡಿಕೆ ಹೆಚ್ಚಾದರೆ, ಇನ್ನಷ್ಟು ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರೆ.

ಅಂದಹಾಗೆ, ಈ ಚಿತ್ರಕ್ಕೆ ಎಮಿಲ್‌ ಸಂಗೀತ ನೀಡಿದ್ದಾರೆ. ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಎಮಿಲ್‌ಗ‌ೂ ಹೊಸ ಲೈಫ್ ಸಿಗಲಿದೆಯಂತೆ. ಕಲರ್‌ಫ‌ುಲ್‌ ಸೆಟ್‌ನಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಸಾಧು ಕೋಕಿಲ, ಜೈಜಗದೀಶ್‌, ರವಿಶಂಕರ್‌ ಸೇರಿದಂತೆ ಅನೇಕರು ನಟಿಸಿದ್ದು, ಶೇಖರ್‌ ಚಂದ್ರ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿದೆ.

ಟಾಪ್ ನ್ಯೂಸ್

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rangasthala kannada movie

Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್‌ ಲಾಂಚ್‌

jasti preethi kannada movie

Jasti Preethi; ಫೇಸ್ ಬುಕ್ ಪೋಸ್ಟ್ ಸಿನಿಮಾವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳಿಗೆ ಅಮುಲ್‌ ಪ್ರಾಯೋಜನೆ

T20 World Cup: ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳಿಗೆ ಅಮುಲ್‌ ಪ್ರಾಯೋಜನೆ

1-wwqewqe

Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.