ಪ್ರತ್ಯೇಕ ಧರ್ಮಕ್ಕಾಗಿ ಈಗ ಮಾನ್ಯತೆ ಅಸ್ತ್ರ​​​​​​​; ರೆಡ್ಡಿ ಪ್ರವಾಸ


Team Udayavani, Jul 25, 2017, 6:00 AM IST

dfghjkl;.jpg

ಬೆಂಗಳೂರು: ಲಿಂಗಾಯತ ಸಮುದಾಯದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ “ಟಾಂಗ್‌’ ನೀಡಲು ಹೊರಟಿರುವ ಕಾಂಗ್ರೆಸ್‌, ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ “ಅಸ್ತ್ರ’ ಪ್ರಯೋಗಕ್ಕೆ  ಮುಂದಾಗಿದೆ.

ಅಷ್ಟೇ ಅಲ್ಲ, ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ ಮುಸ್ಲಿಂ, ಸಿಖ್‌, ಬೌದ್ಧ, ಜೈನರಂತೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗುತ್ತದೆ. ಸರ್ಕಾರದ ಸವಲತ್ತು, ಮೀಸಲಾತಿಯೂ ಲಭ್ಯವಾಗುತ್ತದೆ ಎಂಬ “ಆಸೆ’ ತೋರಿಸಲಾಗುತ್ತಿದೆ.

ಇದರ ಮುಂದಾಳತ್ವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ವಹಿಸಿಕೊಂಡಿದ್ದು, ಎಸ್‌.ಎಸ್‌.ಮಲ್ಲಿಕಾರ್ಜುನ್‌, ಡಾ.ಶರಣ್‌ಪ್ರಕಾಶ್‌ ಪಾಟೀಲ್‌, ವಿನಯ ಕುಲಕರ್ಣಿ, ಈಶ್ವರ್‌ಖಂಡ್ರೆ ಅವರನ್ನು ಜತೆಗೂಡಿಸಿಕೊಂಡು ರಾಜ್ಯಪ್ರವಾಸಕ್ಕೂ ರೂಪು-ರೇಷೆ ಸಿದ್ಧವಾಗಿದೆ.ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿ ಆಗಸ್ಟ್‌ 22 ರಂದು ಬೆಳಗಾವಿ ಚಲೋ, ಸೆಪ್ಟೆಂಬರ್‌ 3 ಕ್ಕೆ ಲಾತೂರ್‌ ಚಲೋ ಸಹ ಹಮ್ಮಿಕೊಳ್ಳಲಾಗಿದೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದುತ್ವ ವ್ಯಾಪ್ತಿಗೆ ಲಿಂಗಾಯತ ಸಮುದಾಯ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರೊಬ್ಬ ಆರ್‌ಎಸ್‌ಎಸ್‌ ನಾಯಕರಾಗಿ ಮನುಸ್ಮತಿ ಒಪ್ಪಿ ಅದನ್ನೇ ಪ್ರತಿಪಾದಿಸುತ್ತಾರೆ. ಆದರೆ, ವೀರಶೈವ-ಲಿಂಗಾಯತರ ಆಚಾರ ವಿಚಾರಕ್ಕೂ, ಹಿಂದುತ್ವಕ್ಕೂ ವ್ಯತ್ಯಾಸವಿದೆ. ಹೀಗಾಗಿ, ಈ ಬಗ್ಗೆ ಜಾಗೃತಿ ಮೂಡಿಸಲು ನಾವು ನಾಲ್ವರು ಸಚಿವರು ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ ಎಂದು ಹೇಳಿದರು.

ವೀರಶೈವ ಮಹಾಸಭಾ ಹಾಗೂ ಹಲವಾರು ಮಠಾಧೀಶರು ನಮ್ಮ ಜತೆಗೂಡಲಿದ್ದಾರೆ. ಇದೊಂದು ಜಾಗೃತಿ ಮೂಡಿಸುವ ವಿಚಾರವೂ ಆಗಲಿದೆ ಎಂದು ತಿಳಿಸಿದರು.

ಖಾಸಗಿ ಪ್ರವಾಸ: ರಾಜ್ಯ ಸರ್ಕಾರದ ಸಚಿವರಾಗಿ ಒಂದು ಸಮುದಾಯದ ಪರ ಪ್ರವಾಸ ಮಾಡುವುದು ಸರಿಯೇ ಎಂದಾಗ ನಾವು ಸಚಿವರಾಗಿ ಅಲ್ಲ ಸಮುದಾಯದ ನಾಯಕರಾಗಿ ವೀರಶೈವ ಮಹಾಸಭಾದ ಮುಂದಾಳತ್ವದಲ್ಲೇ ಖಾಸಗಿಯಾಗಿ ಪ್ರವಾಸ ಕೈಗೊಳ್ಳುತ್ತೇವೆ ಎಂದು ತೇಲಿಸಿದರು.

ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಅಲ್ಪಸಂಖ್ಯಾತ ಸ್ಥಾನಮಾನವೂ ದೊರೆಯುತ್ತದೆ. ಇದು ಒಂದು ರೀತಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಹಾಗೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ವ್ಯಾಖ್ಯಾನಿಸಿದರು.

ರಂಭಾಪುರಿ ಶ್ರೀಗಳು ಪ್ರತ್ಯೇಕ ಧರ್ಮದ ಮಾನ್ಯತೆಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರಶ್ನಿಸಿದಾಗ, ವಿಚಾರ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ಹೀಗಾಗಿ, ನಾವು ಪ್ರವಾಸ ಕೈಗೊಂಡು ಎಲ್ಲರ ಜತೆ ಚರ್ಚೆ ಮಾಡಿ ಸಹಮತ ಮೂಡಿಸುತ್ತೇವೆ ಎಂದು ಹೇಳಿದರು.

ಹಿಂದೂಧರ್ಮ ಸ್ಥಾಪನೆಯ ಮೂಲ ಗೊತ್ತಿಲ್ಲ
ಹಿಂದೂಧರ್ಮ ಸ್ಥಾಪನೆಯ ಮೂಲ ಯಾರು ಎಂಬುದೇ ಗೊತ್ತಿಲ್ಲ ಎಂದು ಪ್ರತಿಪಾದಿಸಿದ ಬಸವರಾಜ ರಾಯರೆಡ್ಡಿ,  ಇಸ್ಲಾಂ, ಕ್ರಿಶ್ಚಿಯನ್‌, ಸಿಖ್‌, ಬೌದ್ಧ, ಜೈನ ಹೀಗೆ ಎಲ್ಲ ಧರ್ಮಗಳ ಸ್ಥಾಪನೆಯ ಮೂಲ ಗೊತ್ತಿದೆ. ಹಿಂದೂಧರ್ಮ ಸ್ಥಾಪಿಸಿದ್ದು ಯಾರು ಎಂಬುದೇ ಗೊತ್ತಿಲ್ಲ. ಹಿಂದೂಧರ್ಮದ ಭಾಗ ಎಂಬ ಹೆಸರಿನಲ್ಲಿ ಹಿಂದುತ್ವದಡಿ ಲಿಂಗಾಯತರನ್ನು ಸೆಳೆಯುವ ಕೆಲಸ ಯಡಿಯೂರಪ್ಪ ಮಾಡುತ್ತಿದ್ದಾರೆ.  ಅವರಿಗೆ ಲಿಂಗಾಯತರ ವಿಚಾರವೇ ಗೊತ್ತಿಲ್ಲ. ವೀರಶೈವ-ಲಿಂಗಾಯತ ಸಮಾಜ ವಿಚಾರದಲ್ಲಿ ಪ್ರತ್ಯೇಕ ಧರ್ಮವಾಗಿ ಗುರುತಿಸಬೇಕು ಎಂಬ ಚರ್ಚೆಯಿದೆ. ಆದರೆ, ಇದರ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ,  ಈ ರೀತಿಯ ಬೇಡಿಕೆ ಇಟ್ಟಿರುವುದು ಸಮುದಾಯದ ಮುಖಂಡರ ನಿಯೋಗ. ಅದರಲ್ಲಿ ನಾನೂ ಇದ್ದೆ. ಯಡಿಯೂರಪ್ಪ ಇದನ್ನು ಅರ್ಥಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಎಂದೂ ಜಾತಿ ಮಾಡಿಲ್ಲ. ಮೂರು ದಶಕಗಳಿಂದ ಅವರನ್ನು ಬಲ್ಲೆ, ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

*ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಹಾಕುವುದಕ್ಕೂ ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುತ್ತಿರುವುದಕ್ಕೂ, ಮುಂದಿನ ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ವಿಚಾರದ ಬಗ್ಗೆ ಜಾಗೃತಿ ಮೂಡಿಸುವುದಷ್ಟೇ ನಮ್ಮ ಉದ್ದೇಶ. ಲಿಂಗಾಯತ ಸಮುದಾಯ ಒಂದು ಪಕ್ಷದ ಆಸ್ತಿಯೂ ಅಲ್ಲ.
-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ

ಟಾಪ್ ನ್ಯೂಸ್

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

June. 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

June 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

kejriwal

AAP ಆರೋಪ; ಸಿಎಂ ಕೇಜ್ರಿಗೆ ಜೈಲಿನಲ್ಲಿ ಕೂಲರ್‌ ನೀಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡವರು ಶಾಮೀಲು: ವಿಜಯೇಂದ್ರ ಆರೋಪ

ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡವರು ಶಾಮೀಲು: ವಿಜಯೇಂದ್ರ ಆರೋಪ

ಮಹಿಳೆಯರಿಂದ ವಿಚಾರಣೆಗೆ ಪ್ರಜ್ವಲ್‌ ಆಕ್ಷೇಪ

ಮಹಿಳೆಯರಿಂದ ವಿಚಾರಣೆಗೆ ಪ್ರಜ್ವಲ್‌ ಆಕ್ಷೇಪ

CM Siddaramaiah ನಾಗೇಂದ್ರ ರಾಜೀನಾಮೆ ಬಗ್ಗೆ ವರದಿ ಬಳಿಕ ನಿರ್ಧಾರ

CM Siddaramaiah ನಾಗೇಂದ್ರ ರಾಜೀನಾಮೆ ಬಗ್ಗೆ ವರದಿ ಬಳಿಕ ನಿರ್ಧಾರ

ಡಿಕೆಶಿ ಕಡೆ ನೋಡದ ಎಚ್‌ಡಿಕೆ; ಸಿದ್ದರಾಮಯ್ಯಗೆ ನಮಸ್ಕರಿಸಿ ತೆರಳಿದ ಎಚ್‌ಡಿಕೆ

ಡಿಕೆಶಿ ಕಡೆ ನೋಡದ ಎಚ್‌ಡಿಕೆ; ಸಿದ್ದರಾಮಯ್ಯಗೆ ನಮಸ್ಕರಿಸಿ ತೆರಳಿದ ಎಚ್‌ಡಿಕೆ

ನಿರೀಕ್ಷಣ ಜಾಮೀನು ಕೋರಿ ಭವಾನಿ ಹೈಕೋರ್ಟ್‌ಗೆ ಅರ್ಜಿ

ನಿರೀಕ್ಷಣ ಜಾಮೀನು ಕೋರಿ ಭವಾನಿ ಹೈಕೋರ್ಟ್‌ಗೆ ಅರ್ಜಿ

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

Amit Shah

FIR ನಿಂದ ಅಮಿತ್‌ ಶಾ ಹೆಸರು ಕೈಬಿಟ್ಟ ಪೊಲೀಸರು

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

NIA (2)

ISIS ಜತೆ ನಂಟು: 17 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.