ಕೆಡಿಪಿ ಸಭೆ ಮಧ್ಯೆ ಬಂತು ಸಾವಿನ ಸುದ್ದಿ
Team Udayavani, Jul 28, 2017, 1:04 PM IST
ಕಲಬುರಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಿಧನದ ಮಾಹಿತಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|ಶರಣಪ್ರಕಾಶ ಪಾಟೀಲರಿಗೆ ಮೊದಲು ಬಂತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಕೆಡಿಪಿ ಸಭೆ ಆರಂಭವಾಗಿತ್ತು. ಕಲಾಪ ಶುರುವಾಗಿ ಸರಿಯಾಗಿ 9 ನಿಮಿಷವಾಗಿತ್ತು. ಅಷ್ಟೊತ್ತಿಗೆ ಸಚಿವರಿಗೆ ಕರೆಯೊಂದು ಬಂದಿತ್ತು. ಅದು ಧರ್ಮಸಿಂಗ್ ಹಠಾತ್ ನಿಧನದ ಮಾಹಿತಿಯಾಗಿತ್ತು. ಇದೇ ಸಮಯಕ್ಕೆ ಪಕ್ಕದಲ್ಲಿದ್ದ ಮಹಾಪೌರ ಶರಣು ಮೋದಿ ಅವರಿಗೂ ಕರೆ ಬಂದಿತ್ತು. ಇದರಿಂದ ಗಾಬರಿಯಾದ ಸಚಿವರು, ಸದನದ ಗಮನಕ್ಕೆ ವಿಷಯ ತಂದು ಸಭೆ ಮುಂದೂಡಲಾಗಿದೆ ಎಂದು ಎರಡು ನಿಮಿಷಗಳ ಮೌನಾಚರಣೆಗೆ ಮುಂದಾದರು. ಧರ್ಮಸಿಂಗ್ ಅವರ ನಿಧನದಿಂದ ಹೈದ್ರಾಬಾದ ಕರ್ನಾಟಕವಲ್ಲದೇ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅನಾಥ ಪ್ರಜ್ಞೆ ಎದುರಾಗಿದೆ ಎಂದು ಸಚಿವ ಡಾ|ಪಾಟೀಲ, ಶಾಸಕರಾದ ಖಮರುಲ್ ಇಸ್ಲಾಂ, ಕೆ.ಬಿ. ಶಾಣಪ್ಪ ಅವರು ಕಂಬನಿ ಮಿಡಿದರು. ಇನ್ನೊಂದೆಡೆ ಸಚಿವ ಡಾ| ಪಾಟೀಲ ಅವರು ಬುಧವಾರವಷ್ಟೇ ಧರ್ಮಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ