ಸೌದಿಯಲ್ಲಿ ಕೊಪ್ಪಳದ ಮಹಿಳೆಗೆ ಕಿರುಕುಳ


Team Udayavani, Jul 31, 2017, 3:26 PM IST

31-KOPPALA-1.jpg

ಕೊಪ್ಪಳ: ಸೌದಿ ಅರೆಬಿಯಾದಲ್ಲಿ ಖುರಹಾನ್‌ ಪಠಣ ಮಾಡುವ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಪತ್ನಿಯನ್ನು ಉಡುಪಿ ಏಜೆಂಟ್‌ ಮೂಲಕ ಕರೆದುಕೊಂಡು ಹೋಗಿದ್ದು, ಅಲ್ಲಿ ನನ್ನ ಪತ್ನಿಗೆ ಮಾನಸಿಕ, ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಪತಿ ಬಾಬುಸಾಬ್‌ ಬಾಬಣ್ಣನವರ್‌ ರವಿವಾರ ನಗರದ ಸಂಸದರ ನಿವಾಸದ ಬಳಿ ಗೋಳಾಡಿದರು.

ಪತ್ನಿ ಚಾಂದಸಾಬ್‌ ಬಾಬಣ್ಣವರ್‌ ಸೌದಿ ಅರೆಬಿಯಾದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ನನ್ನನ್ನು ಇಲ್ಲಿಂದ ಬೇಗ ಕರೆದುಕೊಂಡು ಹೋಗಿ, ನನಗೆ ಇಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಊಟವನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದು ಗೋಗರೆಯುತ್ತಿದ್ದಾಳೆ. ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ ಎಂದು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ನನಗೆ ದಿಕ್ಕೇ ತೋಚದಂತಾಗಿದೆ. ನನ್ನ ಪತ್ನಿ ರಕ್ಷಿಸಿ ಭಾರತಕ್ಕೆ ಕರೆ ತರಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಪತಿ ಬಾಬುಸಾಬ್‌ ಕಣ್ಣೀರಿಟ್ಟರು.

ಏನಿದು ಘಟನೆ ?: ಬಾಬುಸಾಬ ಬಾಬಣ್ಣನವರ್‌ ಕೊಪ್ಪಳದ ನಿರ್ಮಿತಿ ಕೇಂದ್ರದ ಬಡಾವಣೆಯ ನಿವಾಸಿ. ಈತನ ಪತ್ನಿ ಚಾಂದ ಸುಲ್ತಾನ್‌ ಖುರಾನ್‌ ಪಠಣ ಮಾಡುತ್ತಿದ್ದಳು. ಈ ಮಾಹಿತಿ ಪಡೆದ ಉಡುಪಿ ಮೂಲದ ಶೆಮ್‌ಷೇರ್‌ ಎನ್ನುವ ಏಜೆಂಟ್‌ ಈ ಕುಟುಂಬ ಪತ್ತೆ ಮಾಡಿ ಸೌದಿ ಅರೇಬ್ಬಿಯಾದಲ್ಲಿ
ಪ್ರತಿ ತಿಂಗಳು 40 ಸಾವಿರ ವೇತನ ಕೊಡಲಾಗುತ್ತೆ. ಅಲ್ಲಿನ ಮಕ್ಕಳಿಗೆ ಖುರಹಾನ್‌ ಪಠಣ ಮಾಡಿಸಲು ಚಾಂದ್‌ ಸುಲ್ತಾನ್‌ ಅವರನ್ನು ಕಳುಹಿಸಿಕೊಡುವಂತೆ ಈ ಕುಟುಂಬಕ್ಕೆ ಪುಸಲಾಯಿಸಿದ್ದಾನೆ. ಇದಕ್ಕೆ ಒಪ್ಪಿದ ಬಾಬುಸಾಬ್‌ ತನ್ನ ಪತ್ನಿಯನ್ನು 3 ತಿಂಗಳ ಹಿಂದೆ ಸೌದಿ ಅರಬಿಯಾಗೆ ಕಳುಹಿಸಿದ್ದಾನೆ. ಸೌದಿ ಅರೆಬಿಯಾದ ಏಜೆಂಟ್‌ ಆರೀಫ್‌ ಮೂಲಕ ರಿಯಾಜ್‌ ಎನ್ನುವ ಏರಿಯಾದಲ್ಲಿನ ಫರೀದ್‌ಸಾಬ್‌ ಎನ್ನುವ ಮನೆ ಮಾಲೀಕರ ಮನೆಯಲ್ಲಿ ಚಾಂದ ಸುಲ್ತಾನ್‌ ಅವರನ್ನು ಕೆಲಸಕ್ಕೆ ಇರಿಸಿದ್ದಾರೆ. ಆದರೆ ನನ್ನ ಪತ್ನಿಗೆ ಖುರಹಾನ್‌ ಪಠಣ ಕೆಲಸ ಕೊಡಿಸುವುದು ಬಿಟ್ಟು ಶೌಚಾಲಯ
ಸ್ವತ್ಛತೆ, ಮನೆ ಸ್ವತ್ಛತೆಗೆ ಇಟ್ಟುಕೊಂಡಿದ್ದಾರೆ.

ತಿಂಗಳಿಗೊಮ್ಮೆ ನನಗೆ ಕರೆ ಮಾಡಿ, ನನಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ. ನನಗೆ ಊಟ ಕೊಡುತ್ತಿಲ್ಲ. ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ನನ್ನನ್ನು ಕೂಡಲೇ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ದೂರವಾಣಿ ಮೂಲಕ ಕೊಪ್ಪಳದ ತನ್ನ ಪತಿ ಬಾಬುಸಾಬ್‌ಗ ಕರೆ ಮಾಡಿದ್ದಾಳೆ. ಇದರಿಂದ ವಿಚಲಿನಾದ ಪತಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಗೋಳಾಡಿ ಕಣ್ಣೀರಿಟ್ಟಿದ್ದಲ್ಲದೆ ನನ್ನ ಪತ್ನಿಯನ್ನು ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದರು.

ಬಾಬಾಸಾಬ್‌ ತನ್ನ ಸಮಸ್ಯೆಯನ್ನು ನನ್ನ ಮುಂದೆ ಹೇಳಿದ್ದಾನೆ. ನಾನು ದೆಹಲಿಗೆ ಹೊರಟಿದ್ದೇನೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಪ್ರಸ್ತಾಪಿಸಿ ಗಮನಕ್ಕೆ ತರುವೆ. ನೊಂದ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.
 ಸಂಗಣ್ಣ ಕರಡಿ, ಸಂಸದ

ನನ್ನ ಪತ್ನಿಗೆ ಸೌದಿ ಅರೇಬಿಯಾದಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮನೆಯೊಂದರಲ್ಲಿ ಕೂಡಿ ಹಾಕಿದ್ದಾರಂತೆ. ನನ್ನ ಪತ್ನಿ ರಸ್ತೆ ಪಕ್ಕ ಹೊರಟಿದ್ದ ಯುವಕನಿಂದ ಕಿಟಕಿ ಮೂಲಕ ಫೋನ್‌ ಪಡೆದು ನನಗೆ ವಿಷಯ ತಿಳಿಸಿದ್ದಾಳೆ. ನನ್ನ ಪತ್ನಿ ಸಂಕಷ್ಟದಲ್ಲಿದ್ದಾಳೆ. ರಕ್ಷಿಸಲು ಸಂಸದರಿಗೆ ಮನವಿ ಮಾಡಿದ್ದೇನೆ.
 ಬಾಬುಸಾಬ್‌ ಬಾಬಣ್ಣನವರ್‌, ಪತಿ 

ಟಾಪ್ ನ್ಯೂಸ್

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

5-uv-fusion

Summer Holidays: ರಜಾದಿನ ಹೀಗಿರಲಿ

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

4-uv-fusion

Cricket: ವಿಶ್ವ ಕ್ರಿಕೆಟನ್ನಾಳಿದ ದೈತ್ಯ: ವೆಸ್ಟ್‌ ಇಂಡೀಸ್‌

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

Koppal Lok Sabha Constituency: ಹಿಟ್ನಾಳ್‌ಗೆ ಹೊಸ ಮುಖ ಡಾ| ಕ್ಯಾವಟರ್‌ ಸವಾಲು

Koppal Lok Sabha Constituency: ಹಿಟ್ನಾಳ್‌ಗೆ ಹೊಸ ಮುಖ ಡಾ| ಕ್ಯಾವಟರ್‌ ಸವಾಲು

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ

Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ

5-uv-fusion

Summer Holidays: ರಜಾದಿನ ಹೀಗಿರಲಿ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.