ವೃತ್ತಿ-ನಿವೃತ್ತಿ ನಾಣ್ಯದ ಎರಡು ಮುಖ: ಮೂಜಗು
Team Udayavani, Aug 1, 2017, 12:22 PM IST
ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ವೃತ್ತಿ ಮತ್ತು ನಿವೃತ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮಗೆ ಇನ್ನೊಬ್ಬರು ನಿವೃತ್ತಿ ತಂದುಕೊಡುವ ಮೊದಲೇ ನಾವೇ ನಿವೃತ್ತಿ ಹೊಂದಿದರೆ ಅದು ನೆಮ್ಮದಿಯ ಜೀವನ ತಂದುಕೊಡುತ್ತದೆ ಎಂದು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಹು-ಧಾ ಪೊಲೀಸ್ ಕಮೀಷನರೇಟ್ ಘಟಕದ ಸ್ನೇಹಕೂಟ ಹಾಗೂ ಬೀಟ್ ಸಿಬ್ಬಂದಿಯು ಸೋಮವಾರ ಹಮ್ಮಿಕೊಂಡಿದ್ದ ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಪಿ.ಎಚ್. ರಾಣೆ ಅವರು ಹು-ಧಾ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಎಲ್ಲರೊಂದಿಗೆ ಆತ್ಮೀಯತೆ ಹಾಗೂ ಸರಳ ಸಜ್ಜನಿಕೆ ಹೊಂದಿದ್ದರು. ಎಲ್ಲ ಧರ್ಮಗುರುಗಳ ಮೇಲೆ ವಿಶ್ವಾಸ, ಶ್ರದ್ಧೆ ಹೊಂದಿದ್ದರು. ಆ ಮೂಲಕ ತಮ್ಮ ಅಧಿಕಾರಾವಧಿ ಗೆದ್ದರು ಎಂದರು.
ಪೊಲೀಸ್ ಇಲಾಖೆ ಇನ್ನುಮುಂದೆ ಶಾಂತಿ ಸಭೆ ಎಂದು ಕರೆಯುವ ಬದಲು ಸ್ನೇಹಕೂಟ ಸಭೆಯನ್ನಾಗಿ ಏರ್ಪಡಿಸಬೇಕೆಂದು ಆಯುಕ್ತರಿಗೆ ಉಪದೇಶಿಸಿದ್ದೆ ಎಂದು ಹೇಳಿದರು. ಪಾಂಡುರಂಗ ರಾಣೆ ಮಾತನಾಡಿ, ನಾವು ನಿಮ್ಮವರು ನೀವು ನಮ್ಮವರು ಎಂಬ ಸಂಬಂಧ ಮುಂದುವರಿಸಿಕೊಂಡು ಹೋಗಬೇಕು.
ಮೂರುಸಾವಿರ ಮಠದ ಶ್ರೀಗಳ ಉಪದೇಶದಂತೆ ಶಾಂತಿ ಸಭೆ ಬದಲು ಸ್ನೇಹಕೂಟ ಸಭೆ ಕರೆಯಲಾಗುತ್ತಿದೆ. ಸೇವೆಯಲ್ಲಿದ್ದವರಿಗೆ ನಿವೃತ್ತಿ ಅನಿವಾರ್ಯ. ಆದರೆ ಅವಳಿ ನಗರದ ಜನರ ಪ್ರೀತಿ, ಗೌರವವು ಮಾನ್ಯತೆ ನೀಡಿದಂತಾಗಿದೆ. ಈಗ ನಾನು ಸಂತೃಪ್ತಿಯಿಂದ ಸೇವಾ ನಿವೃತ್ತಿಯಾಗುತ್ತಿದ್ದೇನೆ ಎಂದರು.
ತಾಜುದ್ದೀನ ಖಾದ್ರಿ, ರೆ. ಉಳ್ಳಾಗಡ್ಡಿ, ಗ್ಯಾನಿಸಿಂಗ್, ಮಹಾಪೌರ ಡಿ.ಕೆ. ಚವ್ಹಾಣ, ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಡಿಸಿಪಿಗಳಾದ ರೇಣುಕಾ ಸುಕುಮಾರ, ಬಿ.ಎಸ್. ನೇಮಗೌಡ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳವರು, ಪೊಲೀಸ್ ಸಿಬ್ಬಂದಿ ರಾಣೆ ಅವರನ್ನು ಸತ್ಕರಿಸಿದರು. ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ಪ್ರಾರ್ಥಿಸಿದರು. ಎಸಿಪಿ ದಾವೂದಖಾನ್ ಸ್ವಾಗತಿಸಿದರು. ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ