ಕಾತ್ರಜ್ ಅಯ್ಯಪ್ಪ ಮಂದಿರ: ಗೌರವಾರ್ಪಣೆ
Team Udayavani, Aug 1, 2017, 4:13 PM IST
ಪುಣೆ: ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ ಕಾತ್ರಜ್ ಇಲ್ಲಿ ನಾಗರ ಪಂಚಮಿಯನ್ನು ಜು. 27 ರಂದು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಂದಿರದ ಪ್ರಧಾನ ಅರ್ಚಕರಾದ ಹರೀಶ್ ಭಟ್ ಅವರ ಪೌರೋಹಿತ್ಯದಲ್ಲಿ ನಾಗ ದೇವರಿಗೆ ತನು ತಂಬಿಲ, ಆಶ್ಲೇಷ ಬಲಿ ಪೂಜೆ, ಪ್ರಧಾನ ಹೋಮ, ಪ್ರಸನ್ನ ಕಲೊ³àಕ್ತ ಪೂಜೆ, ಮಹಾ ಪೂಜೆ ನಡೆಯಿತು.
ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಅನ್ನಸಂತರ್ಪಣೆಯು ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯಿಂದ ಜರಗಿತು. ಈ ಸಂದರ್ಭದಲ್ಲಿ ಬಂಟರ ದಕ್ಷಿಣ ವಲಯದ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಮತ್ತು ಪದಾಧಿಕಾರಿಗಳನ್ನು ಅರ್ಚಕ ಹರೀಶ್ ಭಟ… ಮತ್ತು ಮಂದಿರದ ವಿಶ್ವಸ್ತ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ ಮತ್ತು ಪದಾಧಿಕಾರಿಗಳು ಶ್ರೀಗಂಧ ಪ್ರಸಾದವನ್ನಿತ್ತು ಗೌರವಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಮಹಿಳಾ ಸಮಿತಿಯವರು ತಮ್ಮ ತಿಂಗಳ ಚಂದಾ ರೂಪ ದಲ್ಲಿ ಜಮಾ ಮಾಡಲಾದ ಸುಮಾರು 60 ಸಾವಿರ ರೂ. ಗಳನ್ನು ದೇವಸ್ಥಾನದ ಟ್ರಸ್ಟಿಗೆ ಸಮರ್ಪಿಸಿದರು.