ಬಹುಭಾಷಾ ನಟಿಯ ಅಪಹರಣ ಪ್ರಕರಣ ದಿಲೀಪ್‌ ವಿರುದ್ಧ ಆರೋಪಪಟ್ಟಿ


Team Udayavani, Aug 6, 2017, 7:00 AM IST

dilip.jpg

ಕೊಚ್ಚಿ : ಬಹುಭಾಷಾ ನಟಿಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿರುವ ನಟ ದಿಲೀಪ್‌ ವಿರುದ್ಧ ಪೊಲೀಸರು ಶೀಘ್ರದಲ್ಲಿಯೇ ಆರೋಪಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ. 

ಫೆ. 17ರಂದು  ನಡೆದ  ಈ  ಪ್ರಕರಣದಲ್ಲಿ  ಒಟ್ಟು  13 ಮಂದಿ  ಆರೋಪಿಗಳನ್ನು  ಹೆಸರಿಸಲಾಗಿದ್ದು  ನಟ ದಿಲೀಪ್‌ನನ್ನು ಎರಡನೇ ಆರೋಪಿ ಎಂದು  ಪೊಲೀಸರು  ಹೆಸರಿಸಿ ದ್ದಾರೆ.  ಪ್ರಕರಣದ  ಪ್ರಮುಖ ಆರೋಪಿಯಾಗಿರುವ  ಪಲ್ಸರ್‌ ಸುನಿ ವಿರುದ್ಧ  ಸಾಮೂಹಿಕ ಅತ್ಯಾಚಾರದ  ಸಹಿತ  ವಿವಿಧ ಪ್ರಕರಣಗಳನ್ನು  ದಾಖಲಿಸಲಾಗಿದ್ದರೆ  ನಟ ದಿಲೀಪ್‌ ವಿರುದ್ಧ ಲೈಂಗಿಕ ಹಲ್ಲೆಯ ಸಂಚು ರೂಪಿಸಿದ ಆರೋಪವನ್ನು  ಹೊರಿಸಲಾಗಿದೆ.  ಈ ಆರೋಪ ಸಾಬೀತಾದದ್ದೇ ಆದಲ್ಲಿ 20ವರ್ಷಗಳ  ಜೈಲು ಶಿಕ್ಷೆಯನ್ನು  ದಿಲೀಪ್‌ ಅನುಭವಿಸುವ ಸಾಧ್ಯತೆಗಳಿವೆ. 

ಪ್ರಕರಣಕ್ಕೆ  ಸಂಬಂಧಿಸಿದಂತೆ  ಪೊಲೀಸರು  ಸಲ್ಲಿಸಿರುವ  ಪ್ರಾಥಮಿಕ ಆರೋಪಪಟ್ಟಿಯಲ್ಲಿ  ಪಲ್ಸರ್‌ ಸುನಿ, ಕಾರು ಚಾಲಕ ಮಾರ್ಟಿನ್‌ ಆಂಟೋನಿ, ಮಣಿಕಂಠನ್‌, ವಿಜೇಶ್‌, ಪ್ರದೀಪ್‌  ಮತ್ತು ಚಾರ್ಲ್ಸ್‌ ಆಂಟೋನಿಯನ್ನು ಆರೋಪಿಗಳಾಗಿ  ಹೆಸರಿಸಲಾಗಿದ್ದರೆ  ಪೂರಕ ಆರೋಪ ಪಟ್ಟಿಯಲ್ಲಿ  ಮೇಸಿŒ ಸುನಿಲ್‌, ವಿಷ್ಣು, ವಿಪಿನ್‌ ಲಾಲ್‌ ಮತ್ತು ದಿಲೀಪ್‌ನನ್ನೂ  ಆರೋಪಿಗಳನ್ನಾಗಿ ಹೆಸರಿಸುವ ಸಾಧ್ಯತೆಗಳಿವೆ. ಸದ್ಯ  ಪೊಲೀಸರು  ತನಿಖೆಯ  ಅಂತಿಮ ಹಂತಕ್ಕೆ ಬಂದಿದ್ದು  ಆರೋಪಿಗಳನ್ನು  ಪ್ರಶ್ನಿಸುವ  ಮತ್ತು ಅವರಿಂದ  ಹೇಳಿಕೆಗಳನ್ನು  ದಾಖಲಿಸಿಕೊಳ್ಳುವ  ಕಾರ್ಯದಲ್ಲಿ ನಿರತರಾಗಿದ್ದು  ತಿಂಗಳ ಒಳಗಾಗಿ  ಆರೋಪಪಟ್ಟಿ  ಸಲ್ಲಿಸುವ ಸಾಧ್ಯತೆಗಳಿವೆ. 

ಇನ್ನೀರ್ವರು ಆರೋಪಿಗಳ  ಬಂಧನ ಸಾಧ್ಯತೆ
ಈ  ಪ್ರಕರಣಕ್ಕೆ  ಸಂಬಂಧಿಸಿದಂತೆ  ಪೊಲೀಸರು ಮುಂದಿನ ಕೆಲವೇ ದಿನಗಳಲ್ಲಿ  ಇನ್ನೀರ್ವರು  ಆರೋಪಿಗಳನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಈ ಈರ್ವರು ಆರೋಪಿಗಳ ಬಗೆಗೆ  ಹೆಚ್ಚಿನ ಮಾಹಿತಿಯನ್ನು ನೀಡಲು  ಪೊಲೀಸರು  ನಿರಾಕರಿಸಿದ್ದಾರೆ. 

ಆದರೆ ನಟಿಗೆ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗಿದ್ದ ಮೊಬೈಲ್‌ ಫೋನ್‌ನ್ನು ಪತ್ತೆ ಹಚ್ಚಲು ಪೊಲೀಸರಿಗೆ ಈ ವರೆಗೆ  ಸಾಧ್ಯವಾಗಿಲ್ಲ.  

ಏತನ್ಮಧ್ಯೆ  ನಟ ದಿಲೀಪ್‌ ಜಾಮೀನು  ಕೋರಿ  ಸೋಮವಾರದಂದು ಮತ್ತೆ ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸುವ ಸಾಧ್ಯತೆ  ಇದೆ.

ಟಾಪ್ ನ್ಯೂಸ್

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.