ಪ್ರೇಮಂನ ಸಾಯಿ ಪಲ್ಲವಿ ಬಂದ್ರೂ ಬರಬಹುದು …
Team Udayavani, Aug 6, 2017, 10:25 AM IST
ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ಹೀರೋ ಆಗುತ್ತಿರೋದು, ಆ ಚಿತ್ರಕ್ಕೆ “ನವೆಂಬರ್ನಲ್ಲಿ ನಾನು ಅವಳು’ ಎಂದು ಟೈಟಲ್ ಇಟ್ಟಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರದ ಪೂರ್ವತಯಾರಿ ಜೋರಾಗಿ ನಡೆಯುತ್ತಿದೆ. ಮೊದಲ ಹಂತವಾಗಿ ಚಿತ್ರಕ್ಕೆ ನಾಯಕಿಯನ್ನು ಅಂತಿಮಗೊಳಿಸುವಲ್ಲಿ ಚಿತ್ರತಂಡ ಬಿಝಿಯಾಗಿದೆ. ಈ ಹಿಂದೆ ಚಿತ್ರಕ್ಕೆ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ನಾಯಕಿಯಾಗುತ್ತಾರೆಂಬ ಸುದ್ದಿ ಓಡಾಡುತ್ತಿತ್ತು.
ಆದರೆ, ಅಕ್ಷರಾ ಹಾಸನ್ ಈಗ ಈ ಚಿತ್ರದಲ್ಲಿ ನಟಿಸೋದು ಡೌಟು ಎಂಬ ಮಾತು ಕೇಳಿಬರುತ್ತಿದ್ದು, ಅವರ ಜಾಗಕ್ಕೆ ಹೊಸ ನಾಯಕಿಯ ಹೆಸರು ಓಡಾಡುತ್ತಿದೆ. ಅದು ಸಾಯಿ ಪಲ್ಲವಿ. ಯಾರು ಈ ಸಾಯಿ ಪಲ್ಲವಿ ಎಂದರೆ ನಿಮಗೆ ಮಲಯಾಳಂನ ಯಶಸ್ವಿ ಚಿತ್ರ “ಪ್ರೇಮಂ’ ಬಗ್ಗೆ ಹೇಳಬೇಕಾಗುತ್ತದೆ. “ಪ್ರೇಮಂ’ ಸಿನಿಮಾದಲ್ಲಿ ಮಲರಾ ಎಂಬ ಲೆಕ್ಚರರ್ ಪಾತ್ರ ಮಾಡಿ, ಆ ಪಾತ್ರದ ಮೂಲಕ ಮೋಡಿ ಮಾಡಿದ ಬೆಡಗಿ ಸಾಯಿ ಪಲ್ಲವಿ.
ಈಗಾಗಲೇ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಸಾಯಿ ಪಲ್ಲವಿಯನ್ನು ನಿರ್ದೇಶಕ ನಾಗಶೇಖರ್ ಸಂಪರ್ಕಿಸಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಸಾಯಿಪಲ್ಲವಿ “ನವೆಂಬರ್ನಲ್ಲಿ ನಾನು ಅವಳು’ ನಾಯಕಿಯಾಗಿ ವಿಕ್ರಮ್ ಜೊತೆ ಡ್ಯುಯೆಟ್ ಹಾಡಬಹುದು. ಇನ್ನು, ಚಿತ್ರದ ತಯಾರಿ ಜೋರಾಗಿದ್ದು, ಸೋಮವಾರ ವಿಕ್ರಮ್ ಅವರ ಫೋಟೋಶೂಟ್ ಮಿನರ್ವ ಮಿಲ್ನಲ್ಲಿ ನಡೆಯಲಿದೆ.
ತುಂಬಾ ಅದ್ಧೂರಿ ಹಾಗೂ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಆಗಸ್ಟ್ 16ರಂದು ವಿಕ್ರಮ್ ಹುಟ್ಟುಹಬ್ಬವಿದ್ದು, ಅಂದು ಚಿತ್ರದ ಟೀಸರ್ ಹಾಗೂ ಫಸ್ಟ್ಲುಕ್ ರಿಲೀಸ್ ಆಗಲಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ತಮಿಳಿನಲ್ಲಿ “ಅವಳುಂ ನಾನುಂ ಅಲೆಯುಂ ಕಡಲಂ’ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ “ಅಪ್ಪುಡಪ್ಪುಡು’ ಹಾಗೂ ಮಲಯಾಳಂ ಭಾಷೆಯಲ್ಲಿ ರೆಡಿಯಾಗುವ ಚಿತ್ರಕ್ಕೆ “ನಾನುಂ ಅವಳುಂ’ ಎಂದು ಹೆಸರಿಡಲಾಗಿದೆ.
ಚಿತ್ರದಲ್ಲಿ ತಮಿಳಿನ ಶರತ್ಕುಮಾರ್, ನಾಜರ್, ಸುಹಾಸಿನಿ ಮಣಿರತ್ನಂ, ಕನ್ನಡದ ಸಾಧು ಕೋಕಿಲ, ಚಿಕ್ಕಣ್ಣ, ತೆಲುಗಿನ ಅಜಯ್ ಮತ್ತು ಸಪ್ತಗಿರಿ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವನ್ನು ಸುಮಾರು 50 ದಿನಗಳ ಕಾಲ ಕರ್ನಾಟಕ ಮತ್ತು ತಮಿಳು ನಾಡು ಸುತ್ತಮುತ್ತ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣವನ್ನು ಸ್ಕಾಟ್ಲೆಂಡ್, ಇಂಗ್ಲೆಂಡ್ ಮತ್ತು ಐರೆಲಂಡ್ನಲ್ಲಿ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ