ಮೋದಿಯಿಂದ ಪ್ರಚಾರ ಪಥ
Team Udayavani, Aug 14, 2017, 6:35 AM IST
ಮುಂಬಯಿ: ಈಗಾಗಲೇ ಮೂರು ವರ್ಷಗಳ ಅವಧಿ ಪೂರೈಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ಡಿಎ ಸರಕಾರ ಉಳಿದ ಎರಡು ವರ್ಷಗಳಲ್ಲಿ ಯಾವುದೇ ಸುಧಾರಣೆ ಕ್ರಮಗಳನ್ನು ಪರಿಚಯಿಸುವುದಿಲ್ಲ. ಬದಲಿಗೆ ಈಗಾಗಲೇ ತಾನು ಜಾರಿ ಗೊಳಿಸಿರುವ ಯೋಜನೆಗಳು, ಸಾಧನೆಗಳನ್ನು ಪ್ರಚಾರ ಮಾಡಿ, ಆ ಮೂಲಕ ಹೆಚ್ಚು “ಜನಸ್ನೇಹಿ’ ಯಾಗುವತ್ತ ಗಮನಹರಿಸಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
“ಪ್ರಸ್ತುತ 2019ರ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ಸರ್ಕಾರ ಇನ್ನು ಹೊಸ ಪ್ರಯತ್ನಗಳಿಗೆ ಕೈಹಾಕಲಾರದು. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ತಾವು ಆರಂಭಿಸಿರುವ ಮೂಲ ಸೌಲಭ್ಯ ಯೋಜನೆಗಳು ಹಾಗೂ ಕೈಗೊಂಡಿರುವ ನೋಟು ಅಮಾನ್ಯ ರೀತಿಯ ಸುಧಾರಣಾ ಕ್ರಮಗಳ ಯಶಸ್ಸಿನ ಕುರಿತು ಹೆಚ್ಚು ಮಾತನಾಡುವ ಮೂಲಕ ಜನರ ಮನಗೆಲ್ಲುವ ನಿರೀಕ್ಷೆಯಿದೆ. ಹಾಗೇ ಮುಖ್ಯವಾಗಿ ಆಡಳಿತ ಉತ್ತಮಗೊಳಿಸುವತ್ತ ಗಮನಹರಿಸಲಿರುವ ಸರಕಾರ, ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ ಘೋಷಿಸುವ, ಕಾನೂನು ರೂಪಿಸುವ ಪ್ರಯತ್ನಕ್ಕೆ ಕೈಹಾಕಲಾರದು’ ಎಂದು ಬಾರ್ಕ್ಲೇಸ್ ಇಂಡಿಯಾದ ಪ್ರಮುಖ ಆರ್ಥಿಕ ತಜ್ಞ ಸಿದ್ಧಾರ್ಥ ಸನ್ಯಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
“ಇದೇ ವೇಳೆ 2019ರ ಚುನಾವಣೆ ಸಮೀ ಪಿ ಸಿದಂತೆ ಬಿಜೆಪಿಯ ‘ರಾಷ್ಟ್ರೀಯವಾದ’ವನ್ನು ಹೆಚ್ಚು ಪ್ರಚುರಪಡಿಸಲು ಗಮನಹರಿಸಲಿರುವ ಪ್ರಧಾನಿ ಮೋದಿ, ಸರಕಾರದ ಈವರೆಗಿನ “ಸುಧಾರಣಾವಾದ’ದ ದೃಷ್ಟಿಕೋನವನ್ನು ಸ್ವಲ್ಪ ದಿನಗಳ ಮಟ್ಟಿಗೆ ಬದಿಗಿರಿಸಲಿದ್ದಾರೆ’ ಎಂದು ಸಿದ್ಧಾರ್ಥ ಸನ್ಯಾಲ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್