ಕಲಾಕೃತಿಯ ರಚನೆಗೆ ಸ್ಫೂರ್ತಿಯಾದ ಸಾರನಾಥದ ಅಶೋಕ ಸ್ತಂಭ
Team Udayavani, Aug 15, 2017, 8:55 PM IST
ತೆಕ್ಕಟ್ಟೆ: ಭಾರತೀಯ ಕಲಾ ಸಂಸ್ಕೃತಿಗೆ ಇಡೀ ವಿಶ್ವವೇ ಬೆರಗಾಗಿದೆ. ಇಲ್ಲಿನ ಗತ ಕಾಲದ ವೈಭವದ ಶಿಲ್ಪಕಲೆಗಳು ನಮ್ಮ ಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದು ಅದಕ್ಕೆ ಸಾಕ್ಷಿಯೇ ಸಾರನಾಥದಲ್ಲಿರುವ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹಗಳು ಹಾಗೂ ಅದರಲ್ಲಿ ಓಡುತ್ತಿರುವ ಕುದುರೆ, ಎತ್ತು, ಸಿಂಹದ ಆಕೃತಿಗಳು ಜತೆಗೆ ಧರ್ಮದ ಚಕ್ರಗಳು ಅತ್ಯಂತ ಕಲಾತ್ಮಕವಾಗಿ ಕೆತ್ತಲ್ಪಟ್ಟಿದ್ದು ಇಂತಹ ಕಲಾತ್ಮಕವಾದ ಲಾಂಛನದ ಪ್ರತಿಕೃತಿಯ ರಚನೆಯಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದಲೂ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕನ್ನುಕೆರೆ ರಾಮ ದೇವಾಡಿಗ ಇವರು ನಿರತರಾಗಿದ್ದು ಇವರು ರಚಿಸಿದ ಸಿಮೆಂಟ್ ಕಲಾಕೃತಿಗಳಿಗೆ ಆಪಾರ ಬೇಡಿಕೆ ಇದೆ.
ಮೂವತ್ತೆರಡು ವರ್ಷದಿಂದ…
ಕುಂಭಾಶಿ ಕೊರವಡಿಯ ದಿ| ಮಂಜುನಾಥ ಆಚಾರ್ಯ ಇವರ ಬಳಿ ಸಿಮೆಂಟ್ ಕಲಾಕೃತಿಯ ಬಗ್ಗೆ ತರಬೇತಿ ಪಡೆದಿರುವ ಇವರು ಸುಮಾರು 20 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಅನಂತರ ಸ್ವ ಉದ್ಯೋಗದೆಡೆಗೆ ಆಸಕ್ತಿ ತಳೆದಿರುವ ಇವರು ಪ್ರಸ್ತುತ ನೀಲಾವರದಲ್ಲಿ ವಿವಿಧ ಕಲಾ ಪ್ರಕಾರದ ಸಿಮೆಂಟ್ ಕಲಾಕೃತಿಯನ್ನು ರಚಿಸುವ ಮೂಲಕ ಪರಿಸರದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ.
ಕೈನಲ್ಲಿಯೇ ತಯಾರಿ
ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಇಂದಿನ ಸಮುದಾಯಗಳಿಗೆ ವ್ಯತಿರಿಕ್ತವಾಗಿ ಇವರು ಕಲಾಕೃತಿಯ ರಚನೆಗೆ ಯಾವುದೇ ರೀತಿಯ ಅಚ್ಚುಗಳನ್ನು ಬಳಸದೆ ಸ್ವತಃ ಕೈಯಲ್ಲಿಯೇ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹಗಳು, ಓಡುತ್ತಿರುವ ಕುದುರೆ, ಎತ್ತು, ಸಿಂಹದ ಆಕೃತಿಗಳು ಹಾಗೂ ಧರ್ಮದ ಚಕ್ರಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಅತ್ಯಂತ ನಿಪುಣತೆಯಿಂದ ನೈಜತೆಯನ್ನು ಅಭಿವ್ಯಕ್ತಿಸಬಲ್ಲ ಗ್ರಾಮೀಣ ಕಲಾವಿದರಲ್ಲಿ ಕನ್ನುಕೆರೆ ರಾಮ ದೇವಾಡಿಗರು ಒಬ್ಬರು.
ನಲುಗಿದ ಕಲಾ ಬದುಕು
ಆಧುನಿಕತೆಯ ಭರಾಟೆಗೆ ಸಿಲುಕಿ ನಲುಗುತ್ತಿರುವ ನೈಜ್ಯ ಕಲಾ ಪ್ರಕಾರಗಳು ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಇಂತಹ ಕಲೆಯನ್ನೇ ನಂಬಿ ಜೀವನ ನಿರ್ವಹಿಸುವ ಅದೆಷ್ಟೂ ನೈಜ ಗ್ರಾಮೀಣ ಕಲಾವಿದರ ಮೇಲೆ ಕಂಪ್ಯೂಟರ್ ಪ್ರಹಾರಗಳು ಎಡೆಬಿಡದೆ ಸಾಗುವುದರಿಂದ ಅದೆಷ್ಟೊ ಕಲಾವಿದರು ತೆರೆಯ ಮರೆಗೆ ಸರಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಾಸ್ತವ ಸತ್ಯ ಆದ್ದರಿಂದ ಸರಕಾರ ಇಂತಹ ಗ್ರಾಮೀಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.
ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ
ಭಾರತ ಸರಕಾರವು 1950 ಜನವರಿ 26 ರಂದು ಅಧಿಕೃತವಾಗಿ ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹಗಳನ್ನು ತನ್ನ ರಾಷ್ಟ್ರ ಲಾಂಛನವಾಗಿ ಆಯ್ಕೆ ಮಾಡಿಕೊಂಡಿದ್ದು ಈ ಚಿಹ್ನೆಯಲ್ಲಿ ಮೂರು ಮುಖ ಕಾಣಿಸಿದರು ಕೂಡಾ ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದೆ. ಈ ಲಾಂಛನವು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು ನಾಲ್ಕು ಮುಖಗಳ ಸಿಂಹಗಳು, ಓಡುತ್ತಿರುವ ಕುದುರೆ, ಎತ್ತು, ಸಿಂಹದ ಆಕೃತಿಗಳು ಹಾಗೂ ಧರ್ಮದ ಚಕ್ರ ಜತೆಗೆ ಹಾಸುಗಲ್ಲಿನ ಮೇಲೆ ಸತ್ಯಮೇವ ಜಯತೇ ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಇಂತಹ ಕಲಾಕೃತಿಗಳೇ ನಮ್ಮ ಭಾರತದ ಲಾಂಛನವಾಗಿ ಇತಿಹಾಸದ ಗತ ವೈಭವವನ್ನು ಸಾರಿ ಸಾರಿ ಹೇಳುತ್ತಿದೆ.
– ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ