ಮಾಲೇಗಾಂವ್ ಬ್ಲಾಸ್ಟ್ ಕೇಸ್: ಕ| ಪುರೋಹಿತ್ಗೆ ಸುಪ್ರೀಂ ಜಾಮೀನು
Team Udayavani, Aug 21, 2017, 11:20 AM IST
ಹೊಸದಿಲ್ಲಿ : 2008ರ ಮಾಲೇಗಾಂವ್ ಬ್ಲಾಸ್ಟ್ ಕೇಸಿನ ಆರೋಪಿಯಾಗಿರುವ ಲೆ| ಕ| ಶ್ರೀಕಾಂತ್ ಪ್ರಸಾದ್ ಪುರೋಹಿತ್ ಗೆ ಸುಪ್ರೀಂ ಕೋರ್ಟ್ ಇಂದು ಸೋಮವಾರ, ಮುಂಬಯಿ ಹೈಕೋರ್ಟ್ ನ ಈ ಮೊದಲಿನ ಆದೇಶವನ್ನು ಬದಿಗಿರಿಸಿ, ಜಾಮೀನು ಮಂಜೂರು ಮಾಡಿದೆ.
ಪುರೋಹಿತ್ ಗೆ ಮಂಜೂರು ಮಾಡಿರುವ ಜಾಮೀನಿಗೆ ಸುಪ್ರಿಂ ಕೋರ್ಟ್ ಶರತ್ತುಗಳನ್ನು ನಮೂದಿಸಿದೆ ಎಂದು ತಿಳಿದು ಬಂದಿದೆ.
“ನಾನು ರಾಜಕೀಯದಾಟದ ಬಲಿಪಶುವಾಗಿದ್ದೇನೆ. ಕಳೆದ ಒಂಬತ್ತು ವರ್ಷಗಳಿಂದ ನಾನು ಜೈಲಿನಲ್ಲಿದ್ದೇನೆ. ಆದರೆ ಈ ವರೆಗೂ ಪ್ರಾಸಿಕ್ಯೂಶನ್ ನನ್ನ ವಿರುದ್ಧ ದೋಷಾರೋಪ ದಾಖಲಿಸಿಲ್ಲ’ ಎಂದು ಕ| ಪುರೋಹಿತ್ ಕಳೆದ ಆಗಸ್ಟ್ 17ರಂದು ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ಕ| ಪುರೋಹಿತ್ ಅವರ ವಕೀಲ ಹರೀಶ್ ಸಾಳ್ವೆ ಅವರಿಂದು ಪುರೋಹಿತ್ ಪರವಾಗಿ ಕೋರ್ಟಿನಲ್ಲಿ ಹಾಜರಾಗಿ ಜಾಮೀನು ಕೋರಿಕೆ ವಿಷಯದಲ್ಲಿ ವಾದಿಸಿದರು.