“ಕುಟುಂಬದಲ್ಲಿ ಮಹಿಳೆಯರ ಪಾತ್ರ ಹಿರಿದು’
Team Udayavani, Aug 22, 2017, 7:55 AM IST
ಬೆಳ್ತಂಗಡಿ : ಕುಟುಂಬದಲ್ಲಿ ಮಹಿಳೆಯ ಪಾತ್ರ ಹಿರಿದಾದುದು. ಕ್ಷಣಿಕ ಆಕರ್ಷಣೆಯ ಬದುಕಿಗೆ ಮಾರು ಹೋಗಿ ಸ್ತ್ರೀ ಜೀವನದ ಶ್ರೇಷ್ಠತೆಯನ್ನು ಕಳೆದುಕೊಳ್ಳಬಾರದು. ಸಾಮಾಜಿಕ ಜೀವನದಲ್ಲಿ ನೈತಿಕ ಜವಾಬಾœರಿಯನ್ನು ಅರಿತು ನಡೆಯಬೇಕು ಎಂದು ಬಂಗಾಡಿ ಸ್ಪಂದನಾ ಕ್ಲಿನಿಕ್ನ ವೈದ್ಯೆ ಡಾ| ವಾಣಿ ಸುಗುಣಕುಮಾರ್ ಹೇಳಿದರು.
ಅವರು ಶ್ರೀ ಗುರುದೇವ ಪ.ಪೂ. ಕಾಲೇಜಿನಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ನಡೆದ “ಹದಿಹರೆಯದ ಸಮಸ್ಯೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ವಹಿಸಿ ಯಾವ ಮನಸ್ಸು ಹತೋಟಿಯಲ್ಲಿರುತ್ತದೋ ಅಂತಹವರು ಶ್ರೇಷ್ಠ ಸಾಧಕರಾಗಲು ಸಾಧ್ಯ. ಹದಿಹರೆಯದ ವಯಸ್ಸಿನಲ್ಲಿ ತೆಗೆದುಕೊಳ್ಳುವ ಉತ್ತಮ ನಿರ್ಧಾರ ಅತ್ಯುತ್ತಮ ಭವಿಷ್ಯಕ್ಕೆ ಬುನಾದಿಯಾಗುತ್ತದೆ ಎಂದರು.
ಆಂಗ್ಲ ಭಾಷಾ ಉಪನ್ಯಾಸಕಿ ಶ್ರುತಿ ಜೆ.ಎಸ್. ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಹೇಮಾವತಿ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಶ್ರುತಿ ವಂದಿಸಿದರು.