ವಿಶ್ವಶಕ್ತಿ-ವ್ಯಕ್ತಿಯ ಸಂಪರ್ಕ= ಪೂಜೆ


Team Udayavani, Aug 22, 2017, 7:10 AM IST

ganapa.jpg

ಮಳೆಗಾಲದಲ್ಲಿ ಮಳೆ ಆರಂಭವಾದ ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರುತ್ತದೆ. ಇದೊಂದು ಅಪ್ಪಟ ಪ್ರಕೃತಿ ಆರಾಧನೆಯ ಹಬ್ಬ. ವರ್ಷಾರಂಭದಲ್ಲಿಯೇ ಪ್ರಕೃತಿ ನಮಗಾಗಿ ಕೊಡುತ್ತಿರುವ ಎಲ್ಲ ಸವಲತ್ತುಗಳಿಗಾಗಿ ಕೃತಜ್ಞತಾರ್ಪಣೆ. ಪೂಜೆ ಅಂದರೆ ಕೃತಜ್ಞತಾರ್ಪಣೆ. ಆದರೆ ಸದ್ದುಗದ್ದಲದ ನಡುವೆ ಕೆಲವು ಬಾರಿ ಮೂಲ ಉದ್ದೇಶ ಮರೆಯುವ ಸಾಧ್ಯತೆ ಇರುತ್ತದೆ. 

ಭಾದ್ರಪದ ಮಾಸದಲ್ಲಿ ಗಣೇಶನ ಹಬ್ಬ ಬರುತ್ತದೆ. ನಾಗನ ಸ್ಥಾನದಲ್ಲಿ ಸುಬ್ರಹ್ಮಣ್ಯನನ್ನು ಪೂಜಿಸುವ ಕ್ರಮವೂ ಇದೆ. ಅನಂತರ ಗಣೇಶನಿಗೆ ಪೂಜೆ. 

ಪ್ರಾಚೀನ ಕಾಲದಲ್ಲಿ ಜನರೆಲ್ಲ ಇರುತ್ತಿದ್ದುದು ನದಿ ತಟಗಳಲ್ಲಿ. ಇದಕ್ಕೆ ಮುಖ್ಯ ಕಾರಣ ನೀರಿನ ಆಶ್ರಯ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವಾಗ ಕೇವಲ ನೀರಲ್ಲ, ಗುಡ್ಡ ಬೆಟ್ಟಗಳಿಂದ ಔಷಧೀಯ ಸಸ್ಯಗಳ ಸಂಪರ್ಕ ಹೊಂದಿದ ನೀರಾಗಿ ಹರಿಯುತ್ತದೆ. ಇದರ ಜೊತೆ ತಾಜಾ ಗುಣಮಟ್ಟದ ಮಣ್ಣೂ ಶೇಖರಣೆಯಾಗುತ್ತದೆ. ಈ ತಾಜಾ ಔಷಧೀಯ ಗುಣದ ಮಣ್ಣನ್ನು ತಂದು ಗಣಪತಿ ವಿಗ್ರಹ ತಯಾರಿಸುವುದು ಕ್ರಮವಾಗಿತ್ತು. ವಿಗ್ರಹ ತಯಾರಿಸುವಾಗ ಅಂದ ಚೆಂದದ ಪ್ರಶ್ನೆ ಮುಖ್ಯವಾಗಿರದೆ, ಪ್ರತಿಯೊಬ್ಬನಲ್ಲಿರುವ ಕಲಾವಂತನಿಗೆ ಒಂದು ವೇದಿಕೆಯಾಗಿರುತ್ತಿತ್ತು. ಒಟ್ಟಾರೆ ಮಣ್ಣಿನಲ್ಲಿ ದೇವನನ್ನು ಕಾಣುವ ಸಂಸ್ಕೃತಿಯಾಗಿತ್ತು. 

ಗಣೇಶ ಮನೆಗೆ ಬರುವುದೆಂದರೆ ಅದು ಸಂಭ್ರಮದ ದಿನ. ಇಲ್ಲಿ ವೈಭವ ಮುಖ್ಯವಲ್ಲ, ಪ್ರೀತಿಯ ಹೃದಯ ಮುಖ್ಯ. ಅದು ದೇವನ ದರ್ಶನ, ಪ್ರದರ್ಶನವಲ್ಲ. 

ವಿಗ್ರಹಕ್ಕೆ ಶುದ್ಧ ಅರಿಶಿನ ಮತ್ತು ಕುಂಕುಮದ ಲೇಪನವೇ ಬಣ್ಣವಾಗಿತ್ತು. ತೇದಿದ ಶ್ರೀಗಂಧದ ಬಳಕೆ ಇದ್ದೇ ಇರುತ್ತದೆ. ತಮ್ಮದೇ ವಠಾರದಲ್ಲಿ ಬೆಳೆದ ಅಕ್ಕಿ ಇತ್ಯಾದಿ ಧಾನ್ಯಗಳಿಂದ ಅಡುಗೆ ತಯಾರಿ ನಡೆಯುತ್ತಿತ್ತು. ಇದೆಲ್ಲವೂ ನಿಸರ್ಗದತ್ತವಾಗಿತ್ತು/ ಸಹಜವಾಗಿತ್ತು. ಕುಂಕುಮ, ಅರಶಿನ, ಶ್ರೀಗಂಧಕ್ಕೆ ಔಷಧೀಯ ಗುಣವಿದೆ. ಇದರ ಲೇಪನ, ಸ್ವೀಕರಣವೂ ಆರೋಗ್ಯದಾಯಿ. ಕುಂಕುಮ, ಅರಶಿನ ಲಕ್ಷಣದ ಸಂಕೇತವೂ ಹೌದು. ಒಟ್ಟಾರೆಯಾಗಿ ಪ್ರಕೃತಿಯಿಂದ ಬಂದ ಇವೆಲ್ಲ ವಸ್ತುಗಳು ನಮ್ಮಲ್ಲಿ ಒಂಥರ ಏಕತೆಯನ್ನು ತರಲೋಸುಗ ಹಬ್ಬಗಳ ಆಚರಣೆ ಬಂದಿರಬೇಕೆಂದೆನಿಸುತ್ತದೆ. ಯಾವುದೇ ರಾಸಾಯನಿಕ ಸಂಪರ್ಕವಿಲ್ಲದೆ ತಯಾರಿಸಿದ ಅಕ್ಕಿ, ಕಬ್ಬು, ಅರಳು, ಬೆಲ್ಲ, ಎಳ್ಳು ಇತ್ಯಾದಿಗಳನ್ನು ಸೇರಿಸಿದ ಅಡುಗೆ ತಯಾರಿಸಿದರೆ ಅದರ ರುಚಿಗಿಂತ ಔಷಧೀಯ ಗುಣ ಹೇಗಿರಲಿಕ್ಕಿಲ್ಲ? ಆಹಾರ ಮತ್ತು ಔಷಧ ಜತೆಜತೆಯಾಗಿದ್ದ ದಿನಗಳು ಅವು.

ಯಾವುದೇ ಒಂದು ವಿಷಯ ಸಹಜವಾಗಿರುತ್ತಿದ್ದರೆ ಅದರ ಪಾವಿತ್ರ್ಯ ಸಹಜವಾಗಿಯೇ ಅನುಭವಕ್ಕೆ ಬರುತ್ತದೆಯೋ ಏನೋ! ಅಸಹಜ ಅರ್ಥಾತ್‌ ಕೃತಕ ಪ್ರಯತ್ನಗಳಾದಲ್ಲಿ ಪಾವಿತ್ರ್ಯ ಅನ್ನೋದು ಅನುಭವಕ್ಕೆ ಬರುವುದೂ ಕಷ್ಟ. ಅಂದರೆ ಮನಸ್ಸುಗಳಿರಬಹುದು, ವಸ್ತುಗಳಿರಬಹುದು. ಅಸಹಜಗಳು ಜಾಸ್ತಿಯಾದಲ್ಲಿ ಪಾವಿತ್ರ್ಯದ ಸೃಷ್ಟಿಯೇ ಸಂಶಯಾತ್ಮಕ ಅಶುದ್ಧ ಮನಸ್ಸುಗಳು, ಅಶುದ್ಧ ವಸ್ತುಗಳನ್ನು ಇರಿಸಿಕೊಂಡು ಉತ್ತಮ ಫ‌ಲಿತಾಂಶ ನಿರೀಕ್ಷಿಸಿದರೆ…! ಸಹಜ ವಸ್ತುಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವಾಗ ತನ್ನೊಳಗೂ ದೇವನನ್ನು ಪ್ರತಿಷ್ಠಾಪನೆ ಮಾಡುವುದು ಸುಲಭ ಸಾಧ್ಯವಾಗಬಹುದು. ಪೂಜೆ ಅಂದರೆ ಕೊನೆಗೂ ವಿಶ್ವಶಕ್ತಿಗೂ (ಯುನಿವರ್ಸಲ್‌ ಎನರ್ಜಿ) ತನಗೂ ಏನೋ ಒಂದು ಸಂಬಂಧದ ಹುಟ್ಟುಹಾಕುವಿಕೆಯಲ್ಲವೆ? ಈ ದೃಷ್ಟಿಯಲ್ಲಿ ಗಣೇಶನ ಹಬ್ಬ ಬರುತ್ತಿದೆ.

- ಸ್ವಾಮಿ

Also Read This…
►Part 1►ಮಾನವ ಪ್ರಪಂಚಕ್ಕೆ ಪ್ರಾಣಿಪ್ರಿಯ ಶಿವ ಸಂದೇಶ : http://bit.ly/2xm3x0G
►Part 2►ಗಣಗಳ ಪತಿಯಾಗಿ ಗಣಪತಿಯ ಸಂದೇಶ: http://bit.ly/2v0gC2U

ಟಾಪ್ ನ್ಯೂಸ್

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ

ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸವಿತಾ ಹಿರೇಮಠ

ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸವಿತಾ ಹಿರೇಮಠ

The Safest Online Gaming Sites: Shielding Your Gaming Experience

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.