ಈ ಬಾರಿ ಎರಡು ಕ್ರೀಡಾ ರತ್ನಗಳು
Team Udayavani, Aug 23, 2017, 9:15 AM IST
ಹೊಸದಿಲ್ಲಿ: ದೇಶದ ಅತ್ಯಂತ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನ ಸೇರಿದಂತೆ ಈ ಬಾರಿಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಸರಕಾರ ಮಂಗಳವಾರ ಬಿಡುಗಡೆ ಮಾಡಿದೆ. ಪ್ಯಾರಾಲಿಂಪಿಕ್ನಲ್ಲಿ ಎರಡು ಚಿನ್ನ ಗೆದ್ದಿರುವ ದೇವೇಂದ್ರ ಜಜಾರಿಯಾ, ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಖೇಲ್ ರತ್ನಕ್ಕೆ ಆಯ್ಕೆಯಾಗಿದ್ದಾರೆ. ಮತ್ತೂಂದು ಕಡೆ ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಹಾಕಿ ತಾರೆ ಎಸ್.ವಿ. ಸುನೀಲ್, ಶೂಟರ್ ಪಿ.ಎನ್. ಪ್ರಕಾಶ್ ಆಯ್ಕೆಯಾಗಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದ್ದಾರೆ.
2 ಖೇಲ್ರತ್ನ, 3 ಧ್ಯಾನ್ಚಂದ್, 7 ದ್ರೋಣಾಚಾರ್ಯ, 17 ಅರ್ಜುನ ಪ್ರಶಸ್ತಿ ವಿಜೇತರು ಸೇರಿ ಒಟ್ಟು 29 ಮಂದಿಯ ಪಟ್ಟಿ ಹೊರಬಿದ್ದಿದೆ. ನಿರೀಕ್ಷೆಯಂತೆ ಶಿಫಾರಸು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವರೇ ಇಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅರ್ಜುನಕ್ಕೆ ಆಯ್ಕೆಯಾಗಿರುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್ಪ್ರೀತ್ ಕೌರ್, ಕ್ರಿಕೆಟಿಗ ಚೇತೇಶ್ವರ ಪೂಜಾರ, ಬಾಕ್ಸಿಂಗ್ ತಾರೆ ಲೈಶ್ರಾಮ್ ದೇವೇಂದೊÅ ಸಿಂಗ್, ಪ್ಯಾರಾಲಿಂಪಿಕ್ ಎತ್ತರ ಜಿಗಿತ ತಾರೆಯರಾದ ಮರಿಯಪ್ಪನ್ ತಂಗವೇಲು, ವರುಣ್ ಭಾಟಿ ಸಿಂಗ್ ಪ್ರಮುಖ ಹೆಸರುಗಳಾಗಿವೆ.
ಇದನ್ನು ಹೊರತುಪಡಿಸಿ ವೇಗದ ನಡಿಗೆಯಲ್ಲಿ ಖ್ಯಾತಿ ಪಡೆದಿರುವ ಖುಶಿºàರ್ ಕೌರ್, ಆ್ಯತ್ಲೀಟ್ ರಾಜೀವ್ ಅರೋಕಿಯಾ, ಪ್ರೊ ಕಬಡ್ಡಿ ತಾರೆ ಜಸ್ವೀರ್ ಸಿಂಗ್ ಮತ್ತಿತರ ಪ್ರಮುಖ ಹೆಸರುಗಳಾಗಿವೆ.
ಮಿಥಾಲಿಗೆ ತಪ್ಪಿತು ಖೇಲ್ರತ್ನ
ಈ ಬಾರಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಖೇಲ್ರತ್ನ ಪಡೆಯುವ ಎಲ್ಲ ಅವಕಾಶವಿತ್ತು. ಆದರೆ ಇದು ತಪ್ಪಿದೆ ಎನ್ನುವುದು ವಿಷಾದದ ಸಂಗತಿ. ಬಿಸಿಸಿಐ ಆಕೆಯ ಹೆಸರನ್ನು ಖೇಲ್ರತ್ನಕ್ಕೆ ಶಿಫಾರಸೇ ಮಾಡದಿರುವುದು ಇದಕ್ಕೆ ಕಾರಣವೆನ್ನುವುದು ಅನಂತರ ತಿಳಿದುಬಂದ ಸಂಗತಿ. ಏಕದಿನ ಕ್ರಿಕೆಟ್ನಲ್ಲಿ ಹಲವು ವಿಶ್ವ ದಾಖಲೆಗಳ ಒಡತಿಯಾಗಿರುವ ಆಕೆಯ ನೇತೃತ್ವದಲ್ಲೇ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಫೈನಲ್ ಕೂಡ ತಲುಪಿದೆ ಎನ್ನುವುದು ಗಮನಿಸಬೇಕಾದ ಅಂಶ.
ಬೋಪಣ್ಣಗೆ ತಪ್ಪಿದ ಅರ್ಜುನ
ಈ ಬಾರಿ ಅರ್ಜುನ ತಪ್ಪಿಸಿಕೊಂಡ ಪ್ರಮುಖ ಹೆಸರು ರಾಜ್ಯದ ಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ. ಇವರ ಹೆಸರನ್ನು ಮುಗಿದ ಮೇಲೆ ಶಿಫಾರಸು ಮಾಡಿದೆ ಎಂಬ ಕಾರಣಕ್ಕೆ ಅರ್ಜುನ ತಪ್ಪಿಹೋಗಿದೆ. ಈ ಬಾರಿ ಜೂನ್ ತಿಂಗಳಲ್ಲಿ ಬೋಪಣ್ಣ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ