ಮಣಿಪಾಲದಲ್ಲಿ   ರಸ್ತೆಯ ಗುಂಡಿ ನುಂಗಿತ್ತಾ …


Team Udayavani, Aug 30, 2017, 9:00 AM IST

road.jpg

ಮಣಿಪಾಲ: ಶಿಕ್ಷಣ, ಮುದ್ರಣ, ಬ್ಯಾಂಕಿಂಗ್‌ ಮತ್ತು ವೈದ್ಯಕೀಯ ಕ್ಷೇತ್ರಗಳಿಂದ ವಿಶ್ವವಿಖ್ಯಾತಿಯನ್ನು ಹೊಂದಿದ ಮಣಿಪಾಲ, ಹೊಂಡ ಮಯವಾದ ರಸ್ತೆಗಳಿಂದ ತತ್ತರಿಸಿಹೋಗಿದೆ. ಮಲ್ಪೆ-ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯೇ ಕಾಣದಷ್ಟು ಹೊಂಡಗಳು ತುಂಬಿ ಹೋಗಿವೆ.

ವಿಶ್ವದ ವಿವಿಧ ದೇಶಗಳ ವಿದ್ಯಾರ್ಥಿಗಳನ್ನು, ಉದ್ಯಮಿಗಳನ್ನು, ಅಂತಾರಾಷ್ಟ್ರೀಯ ನಾಯಕರನ್ನು,ಕಲಾವಿದರನ್ನು ಆಕರ್ಷಿಸುವ ಮಣಿಪಾಲ ಇಂದು ಹೊಂಡ-ಗುಂಡಿಯಾದ ರಸ್ತೆಗಳಿಂದ ಜನಜನಿತವಾಗುತ್ತಿದೆ.

ಮೂಲಭೂತ ಸೌಕರ್ಯಗಳಿಂದ ನಗರದ ಆರೋಗ್ಯವನ್ನು ಅಳೆಯುವವರಿಗೆ ಮಣಿಪಾಲ ಪೇಚಿಗೆ ಸಿಲುಕಿಸುತ್ತಿದೆ. ಮಣಿಪಾಲನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಡಾಮರು ರಸ್ತೆ ಇದೆ ಎಚ್ಚರಿಕೆ ಎಂದು ಫ‌ಲಕವನ್ನು ಹಾಕಿ ಎಂದು ಸ್ಥಳೀಯರು ವಿಡಂಬನೆಯನ್ನು ಮಾಡುತ್ತಿದ್ದಾರೆ. 

ಸುಮಾರು ಒಂದರಿಂದ ಎರಡೂವರೆ ಅಡಿಯಾ ಆಳದ ಗುಂಡಿಗಳು ಮಣಿಪಾಲದವರನ್ನು ಬೆಚ್ಚಿ ಬೀಳಿಸಿವೆ. ಆಳದ ಅರಿವಿಲ್ಲದೆ ಹೊಂಡಕ್ಕಿಳಿಯುವ ಅನೇಕ ಕಾರುಗಳು ತಮ್ಮ ಬಾಡಿಯ ಶೇಪ್‌ಅನ್ನೇ ಬದಲಾಯಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ತೀರ ಕಡಿಮೆ ಗ್ರೌಂಡ್‌ ಕ್ಲಿಯರೆನ್ಸ್‌ ಇರುವ ವಾಹನಗಳಂತೂ ಮುಂದೆಯೂ ಹೊಗೆದೆ ಹಿಂದೆಯೂ ಬಾರದೆ ಟ್ರಾಫಿಕ್‌ ಜಾಮ್‌ ಸೃಷ್ಟಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಹೋಗಿದೆ. ರಿಕ್ಷಾ, ಬಸ್‌ಗಳ ಮಾಲಕರು ತಮ್ಮ ವಾಹನಗಳು ಹೊಂಡದಲ್ಲಿ ಬಿದ್ದು ಎದ್ದು ಹಾಳಾಗಿ ವಾಹನದ ಬಿಡಿಭಾಗಗಳಿಗೆ ಹಣವನ್ನು ಹಾಕಿ ಹಾಕಿ ಬಸವಳಿದಿದ್ದಾರೆ.

ತಿದ್ದಿಕೊಳ್ಳಲು ಎಷ್ಟು ಅವಕಾಶ ಬೇಕು?
ಮಣಿಪಾಲದ ಪ್ರಮುಖ ಭಾಗಗಳಾದ ಸಿಂಡಿಕೇಟ್‌ ವೃತ್ತ, ಟೈಗರ್‌ ವೃತ್ತ ಮತ್ತು ಎಂಐಟಿ ವೃತ್ತ ಸಮೀಪದ ರಸ್ತೆಗಳು ಪ್ರತೀ ವರ್ಷ ಮಳೆಗಾಲದಲ್ಲಿ ಹಾಳಾಗುತ್ತವೆ. ಹಾಗಾಗಿ ಇವುಗಳನ್ನು ಅವಲೋಕಿಸಿದ ತೀರಾ ಸಾಮಾನ್ಯರಿಗೂ ಈ ಸ್ಥಳಗಳು ಡಾಮರು ರಸ್ತೆಗೆ ಯೋಗ್ಯವಲ್ಲವೆಂದು ತಿಳಿಯುತ್ತದೆ ಆದರೆ ಎಂಜಿನಿಯರ್‌ಗಳಿಗೆ ಏಕೆ ಹೊಳೆಯುವುದಿಲ್ಲ?ವೆಂಬುದು ಸಾಮಾನ್ಯರ ಪ್ರಶ್ನೆ.

ಸುಮಾರು ಹದಿನೈದು ವರ್ಷಗಳಲ್ಲಿ ಈ ರಸ್ತೆ ದುರಸ್ಥಿಗೆ ಹಾಕಿದ ಮೊತ್ತದಿಂದ ಒಂದು ಉತ್ತಮವಾದ ಕಾಂಕ್ರಿಟ್‌ ರಸ್ತೆಯನ್ನೇ ನಿರ್ಮಿಸಬಹುದಾಗಿತ್ತು ಎಂದು ಎಂಐಟಿಯ ಪ್ರಾಧ್ಯಾಪಕರು ಹೇಳುತ್ತಾರೆ.

ಪದೇ ಪದೇ ತೆರಿಗೆದಾರರ ಹಣವು ರಸ್ತೆ ದುರಸ್ಥಿಯ ಹೆಸರಲ್ಲಿ ಪೋಲಾಗುತ್ತಿರುವುದು ನೋಡಿದಾಗ ತೆರಿಗೆದಾರನ ಅಸಹಾಯಕ ಸ್ಥಿತಿ ಕಾಣುತ್ತದೆ. ಈ ನಿಟ್ಟಿನಲ್ಲಿ ರಾಜಕೀಯವನ್ನು ಬಿಟ್ಟು ಸಮಗ್ರತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಶಾಶ್ವತ ಕಾರ್ಯದತ್ತ ಮುಂದಾಗುವ ಕಾಲ ಸನ್ನಿಹಿತವಾಗಿದೆ.

ಇನ್ನೆಷ್ಟು ಬಲಿ ಬೇಕು?
ಜೀವಉಳಸಿಕೊಳ್ಳಲು ಕೆಎಂಸಿಗೆ ಬರುವ ರೋಗಿಯಯೋರ್ವರು ಈ ರಸ್ತೆ ಹೊಂಡವನ್ನು ತಪ್ಪಿಸಿಕೊಂಡು ಆಸ್ಪತ್ರೆ ಸೇರುವ ಮುನ್ನವೇ ಅಸುನೀಗಿದ ಘಟನೆ ಇತ್ತೀಚೆಗಷ್ಟೆ ನಡೆದಿದೆ. ರಾ.ಹೆ.ಯ ಈ ಸ್ಥಿತಿಯನ್ನು ಕಂಡು ಎರಡು ವಾರಗಳ ಹಿಂದೆಯಷ್ಟೆ ಸಾಮಾಜಿಕ ಕಾರ್ಯಕರ್ತರು ವಿಚಿತ್ರವಾಗಿ ಪ್ರತಿಭಟನೆ ಮಾಡಿ ಗಮನಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಂಕ್ರೀಟ್‌ ರಸ್ತೆಯೇ ಪರಿಹಾರ
ಕಳೆದ ಒಂದೂವರೆ ದಶಕಗಳಿಂದ ಮಣಿಪಾಲದ ಟೈಗರ್‌ ಸರ್ಕಲ್‌ ಮತ್ತು ಮಾಧವಕೃಪಾ ಶಾಲಾ ತಿರುವು ಪ್ರದೇಶದ ರಸ್ತೆಯು ಹಾನಿಗೀಡಾಗುವುದನ್ನು ಅವಲೋಕಿಸಿದ ಎಂಜಿನಿಯರ್‌ಗಳು ಈ ಪ್ರದೇಶದಲ್ಲಿ ಜೌಗು ಮಣ್ಣಿದ್ದು ಅದಕ್ಕೆ ಕಾಂಕ್ರೀಟ್‌ ರಸ್ತೆ ಮಾತ್ರ ಪರಿಹಾರವೆಂದೂ ತಿಳಿಸಿದ್ದಾರಂತೆ. ಆದರೂ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ತೇಪೆ ಹಾಕುವುದರಲ್ಲಿಯೇ ಎಲ್ಲರೂ ಮಗ್ನರಾಗಿದ್ದಾರೆ. ಇದರಿಂದ ಯಾರಿಗೂ ಶಾಶ್ವತ ಪರಿಹಾರ ಬೇಡವೆಂಬುದು ಧ್ವನಿಸುತ್ತದೆ. 

ಸಂಸದರೆಲ್ಲಿ?
ಮಲ್ಪೆ-ಮೊಣಕಾಲ್ಮೂರು ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಯಾವುದೇ ಜವಾಬ್ದಾರಿಗಳಿಲ್ಲ. ಆದರೆ ಇದಕ್ಕೆ ಪೂರಕವಾಗಿ ರಾ.ಹೆ. ಇಲಾಖೆಯಲ್ಲೂ ಈ ರಸ್ತೆಯನ್ನು ದುರಸ್ತಿಮಾಡಲು ಹಣವಿಲ್ಲ. ಈ ಅತಂತ್ರ ಸ್ಥಿತಿಗೆ ಪರಿಹಾರ ಕೊಡುವ ಉಡುಪಿ-ಚಿಕ್ಕಮಗಳೂರು ಸಂಸದರು ಎಲ್ಲಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಟಾಪ್ ನ್ಯೂಸ್

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.