18 ತ.ನಾ.ಶಾಸಕರು ಅನರ್ಹ:ಸ್ಪೀಕರ್ ಕ್ರಮ, ದಿನಕರನ್ಗೆ ಹಿನ್ನಡೆ
Team Udayavani, Sep 18, 2017, 3:43 PM IST
ಚೆನ್ನೈ : ಉಚ್ಚಾಟಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರಿಗೆ ಒದಗಿರುವ ಭಾರೀ ಹಿನ್ನಡೆ ಎಂದು ತಿಳಿಯಲಾಗಿರುವ ವಿದ್ಯಮಾನದಲ್ಲಿ, ತಮಿಳು ನಾಡು ಅಸೆಂಬ್ಲಿ ಸ್ಪೀಕರ್ ಪಿ ಧನಪಾಲ್ ಅವರು ಇಂದು ಸೋಮವಾರ ದಿನಕರನ್ಗೆ ನಿಷ್ಠರಿರುವ 18 ಶಾಸಕರನ್ನು ಅನರ್ಹಗೊಳಿಸಿದರು.
ಈ ಬೆಳವಣಿಗೆಯನ್ನು ದೃಢಪಡಿಸಿರುವ ಎಎನ್ಐ ಸುದ್ದಿ ಸಂಸ್ಥೆ, ಅಸೆಂಬ್ಲಿ ಸ್ಪೀಕರ್ ಧನಪಾಲ್ ಅವರಿಂದ ಅನರ್ಹತೆಯ ಶಿಸ್ತು ಕ್ರಮಕ್ಕೆ ಗುರಿಯಾಗಿರುವ 18 ಶಾಸಕರ ಹೆಸರನ್ನು ಪ್ರಕಟಿಸಿದೆ.
ಈ ಹೆಸರುಗಳಲ್ಲಿ ಮುಖ್ಯವಾಗಿ ಕಾಣಿಸಿರುವ ಹೆಸರುಗಳೆಂದರೆ ತಂಗ ತಮಿಳ್ಸೆಲ್ವನ್, ಸೆಂಥಿಲ್ ಬಾಲಾಜಿ, ಪಿ. ವೆಟ್ರಿವೇಲ್ ಮತ್ತು ಕೆ ಮರಿಯಪ್ಪನ್.
ದಿನಕರನ್ ಅವರನ್ನು ಬೆಂಬಲಿಸುತ್ತಿದ್ದ ಈ 18 ಶಾಸಕರು ಇಂದಿನಿಂದ ಜಾರಿಗೆ ಬರುವಂತೆ ಅನರ್ಹರಾಗಿರುತ್ತಾರೆ. ಇದು 1986ರ ತಮಿಳು ನಾಡು ಅಸೆಂಬ್ಲಿ ಸದಸ್ಯರ ಪಕ್ಷಾಂತರ ಕಾನೂನು ಪ್ರಕಾರ ಕೈಗೊಳ್ಳಲಾದ ಶಿಸ್ತು ಕ್ರಮವಾಗಿದೆ.
ದಿನಕರನ್ಗೆ ನಿಷ್ಠರಿರುವ ಈ 18 ಮಂದಿ ಶಾಸಕರು ತಮಿಳು ನಾಡು ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ ಅವರ ಉಚ್ಚಾಟನೆಯನ್ನು ಆಗ್ರಹಿಸುತ್ತಲೇ ಬಂದಿದ್ದಾರೆ.
ಸ್ಪೀಕರ್ ಅವರು ಈ ರೀತಿಯ ಅನರ್ಹತಾ ಶಿಸ್ತು ಕ್ರಮ ಕೈಗೊಳ್ಳಬಹುದೆಂಬ ಶಂಕೆಯಲ್ಲಿ ದಿನಕರನ್ ಈ ಮೊದಲೇ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು. ಸೆ.20ರ ತನಕ ವಿಶ್ವಾಸ ಮತ ನಡೆಯಕೂಡದೆಂದು ಮದ್ರಾಸ್ ಹೈಕೋರ್ಟ್ ಅಪ್ಪಣೆ ಕೊಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ
ಪತ್ನಿ ಹತ್ಯೆಗೈದು ಶವದೊಂದಿಗೆ ಸೆಲ್ಫಿ: ಸಂಬಂಧಿಕರಿಗೆ ಫೋಟೋ ಕಳುಹಿಸಿ ತಾನೂ ನೇಣಿಗೆ ಶರಣಾದ
Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು
Nehru ಕಾಲದಲ್ಲಿ ಕಬಳಿಸಿದ್ದ ಹಳ್ಳಿಯಲ್ಲಿ ಚೀನ ಗ್ರಾಮ: ಸಚಿವ ಜೈಶಂಕರ್ ತಿರುಗೇಟು
BHU; ಕೊವ್ಯಾಕ್ಸಿನ್ನಿಂದ ಶೇ. 33 ಜನರಿಗೆ ಅಡ್ಡಪರಿಣಾಮ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ
Re Release; ಭರ್ಜರಿ ಓಪನಿಂಗ್ ಪಡೆದ ಉಪ್ಪಿ ‘ಎ’
ಪತ್ನಿ ಹತ್ಯೆಗೈದು ಶವದೊಂದಿಗೆ ಸೆಲ್ಫಿ: ಸಂಬಂಧಿಕರಿಗೆ ಫೋಟೋ ಕಳುಹಿಸಿ ತಾನೂ ನೇಣಿಗೆ ಶರಣಾದ
Gurucharan Singh: ನಾಪತ್ತೆಯಾಗಿದ್ದ ಕಿರುತೆರೆ ನಟ ಮನೆಗೆ ವಾಪಾಸ್; ಹೋಗಿದ್ದೆಲ್ಲಿಗೆ?
Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ