ನಿವೃತ್ತಿ ಅಂಚಿನಲ್ಲಿರುವ ಕೇಂದ್ರ ನೌಕರರಿಗೆ ಪಿಂಚಣಿ ಆ್ಯಪ್
Team Udayavani, Sep 19, 2017, 3:03 PM IST
ಹೊಸದಿಲ್ಲಿ : ಇದೀಗ ನಿವೃತ್ತಿಯ ಸನಿಹದಲ್ಲಿರುವ ಕೇಂದ್ರ ಸರಕಾರಿ ನೌಕರರಿಗೆ ತಮ್ಮ ಪೆನ್ಶನ್ ಮತ್ತಿತರ ಪ್ರಕರಣಗಳ ವಿಲೇವಾರಿ ಕುರಿತ ವಿಷಯಗಳ ತಾಜಾ ಮಾಹಿತಿಗಳನ್ನು ಕೈಬೆರಳ ತುದಿಯಲ್ಲೇ ಪಡೆಯಲು ಅನುಕೂಲಿಸುವ ಮೊಬೈಲ್ ಅಪ್ಲಿಕೇಶನ್ ನಾಳೆ ಬುಧವಾರ ಬಿಡುಗಡೆಗೊಳ್ಳಲಿದೆ.
ಪೆನ್ಶನ್ ಲೆಕ್ಕಾಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ಯಾವುದೇ ದೂರುದುಮ್ಮಾನಗಳನ್ನು ಸರಕಾರಕ್ಕೆ ತಿಳಿಸಲು ಅನುಕೂಲವಿರುವ ಈ ನೂತನ ಆ್ಯಪ್ ನಿವೃತ್ತರಾಗಲಿರುವ ಕೇಂದ್ರ ಸರಕಾರಿ ನೌಕರರಿಗೆ ತುಂಬಾ ಪ್ರಯೋಜನಕಾರಿಯಾಗಬಲ್ಲುದು ಎಂದು ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್ಶನ್ ಸಚಿವಾಲಯದ ಅಧಿಕೃತ ಪ್ರಕಟನೆ ತಿಳಿಸಿದೆ.
ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್ಶನ್ ಖಾತೆಯ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್ ಅವರು ಈ ನೂತನ ಆ್ಯಪನ್ನು ನಾಳೆ ಬುಧವಾರ ಬಿಡುಗಡೆ ಮಾಡಲಿರುವರು. ಈ ಆ್ಯಪ್ ಈಗ ತತ್ಕ್ಷಣಕ್ಕೆ ನಿವೃತ್ತರಾಗಲಿರುವ ಕೇಂದ್ರ ಸರಕಾರದ ಸುಮಾರು 300ಕ್ಕೂ ಅಧಿಕ ನೌಕರರಿಗೆ ಪ್ರಯೋಜನವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ