10ರ ಬಾಲಕನನ್ನು ಕೊಂದು ಶವ ಕೆರೆಯಲ್ಲಿ ಬಿಸುಟ ದುಷ್ಕರ್ಮಿಗಳು
Team Udayavani, Sep 27, 2017, 11:16 AM IST
ಥಾಣೆ : ನೆರೆಯ ಪಾಲಗಢ ಜಿಲ್ಲೆಯ ಸರೋವರವೊಂದರಲ್ಲಿ 10 ವರ್ಷ ಪ್ರಾಯದ ಬಾಲಕನ ಮೃತ ದೇಹ ತೇಲುತ್ತಿರುವುದು ಕಂಡು ಬಂದಿದೆ. ಹಂತಕರು ಬಾಲಕನನ್ನು ಎಲ್ಲೋ ಒಂದೆಡೆ ಕೊಂದು ಬಳಿಕ ಆತನ ಶವವನ್ನು ಈ ಕೆರೆಗೆ ಎಸೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಐದನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನನ್ನು ಆತನ ತಂದೆ ಮೊನ್ನೆ ಸೋಮವಾರ ಶಾಲೆಯಿಂದ ಮಧ್ಯಾಹ್ನ 12.30ಕ್ಕೆ ಕರೆದೊಯ್ದಿದ್ದರು. ಆದರೆ ಅವರಿಬ್ಬರೂ ಮನೆ ತಲುಪಿಲ್ಲ ಎಂದು ಬಾಲಕನ ತಾಯಿ ಪೊಲೀಸರಿಗೆ ನೀಡಿದ್ದರು.
ಕೆರೆಯಲ್ಲಿ ಪತ್ತೆಯಾಗಿರುವ ಬಾಲಕನ ಶವದ ಬಾಯಿಯನ್ನು ಪ್ಲಾಸ್ಟರ್ನಿಂದ ಬಿಗಿದು ಮುಚ್ಚಲಾಗಿದ್ದು ಅದು ದಹೀಸರ್ ಪ್ರದೇಶದ ಕೆರೆಯಲ್ಲಿ ನಿನ್ನೆ ಮಂಗಳವಾರ ತೇಲುತ್ತಿದ್ದಾಗ ಪತ್ತೆಯಾಯಿತು. ಬಾಲಕನ ತಂದೆ ಇನ್ನೂ ನಾಪತ್ತೆಯಾಗಿದ್ದಾರೆ. ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಡಿವೈಎಸ್ಪಿ (ವಿರಾರ್) ಜಯಂತ ಬಜಬಲೆ ತಿಳಿಸಿದ್ದಾರೆ.
ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆ.302(ಕೊಲೆ), 201 (ಸಾಕ್ಷ್ಯ ನಾಶ) ಅಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ
Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ…
Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ
Delhi Police; ಮರದ ಪುಡಿ, ಕೆಮಿಕಲ್ ಬಳಸಿ ಮಸಾಲೆ ಪದಾರ್ಥ ತಯಾರು; ಮೂವರ ಬಂಧನ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
MUST WATCH
ಹೊಸ ಸೇರ್ಪಡೆ
BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ
Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ
ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ
Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ…
Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್ ಅಂಡರ್ಪಾಸ್