Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Team Udayavani, May 6, 2024, 11:46 AM IST
ಹೈದರಾಬಾದ್: 2 ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ತೆಲಂಗಾಣದ ಜಾನಪದ ಕಲಾವಿದ ದರ್ಶನಮ್ ಮೊಗಿಲಯ್ಯ ಈಗ ತಮ್ಮ ಜೀವನ ನಿರ್ವಹಣೆಗಾಗಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ.
ಇದನ್ನೂ ಓದಿ:Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
ಪದ್ಮಶ್ರೀ ಪ್ರಶಸ್ತಿ ಬಳಿಕ ತೆಲಂಗಾಣ ಸರಕಾರ ಇವರಿಗೆ 1 ಕೋಟಿ ರೂ. ನೀಡಿತ್ತು. ಅವೆಲ್ಲವನ್ನೂ ಮಕ್ಕಳ ಮದುವೆ ಹಾಗೂ ಕುಟುಂಬದ ಮತ್ತಿತರ ಕೆಲಸಕ್ಕೆ ಬಳಸಿದ್ದೇನೆ ಎಂದು ಮೊಗಿಲಯ್ಯ ತಿಳಿಸಿದ್ದಾರೆ.
ಮೊಗಿಲಯ್ಯಗೆ 9 ಮಂದಿ ಮಕ್ಕಳಿದ್ದು ಅದರಲ್ಲಿ ಮೂವರು ಮರಣ ಹೊಂದಿದ್ದಾರೆ. ಜತೆಗೆ ಮತ್ತೂಬ್ಬ ಮಗನ ಆರೋಗ್ಯ ಸ್ಥಿತಿಯೂ ಸರಿಯಿಲ್ಲದ ಕಾರಣ ಬದುಕು ಸಾಗಿಸಲು ದಿನಗೂಲಿ ಕೆಲಸ ಮಾಡುತ್ತಿದ್ದಾರೆ.
ಮುಸ್ಲಿಮ್ ಮೀಸಲಾತಿ ನಿಲ್ಲಿಸಲ್ಲ: ಬಿಜೆಪಿ ಮಿತ್ರ ಪಕ್ಷ ಟಿಡಿಪಿ ಘೋಷಣೆ!
ಅಮರಾವತಿ: ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ನಾಯಕರು ಮುಸ್ಲಿಂ ಮೀಸಲಾತಿ ಯನ್ನು ವಿರೋಧಿಸುತ್ತಿದ್ದರೆ, ಇತ್ತ ಆಂಧ್ರಪ್ರದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮುಸ್ಲಿಮರ ಶೇ.4 ಮೀಸಲಾತಿಯನ್ನು ಬೆಂಬಲಿಸುವುದಾಗಿ ಎನ್ಡಿಎ ಮಿತ್ರಪಕ್ಷದ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಧರ್ಮಾವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, “ಮೊದಲಿನಿಂದಲೂ ನಾವು ಮುಸ್ಲಿಂ ಮೀಸಲು ಬೆಂಬಲಿಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಅದು ಮುಂದುವರಿಯಲಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿ ಮುಸ್ಲಿಮರ ಪಾಲಾಗಲು ಬಿಡುವುದಿಲ್ಲ ಎಂದಿದ್ದರು. ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ.