ಗೂಳಿ ಕೊಂಬು ಮುರಿದ ಕಾಶಿಲಿಂಗ್
Team Udayavani, Sep 29, 2017, 6:10 AM IST
ಹೊಸದಿಲ್ಲಿ: ಸಂಘಟಿತ ಹೋರಾಟದ ಕೊರತೆ ಎದುರಿಸಿದ ಬೆಂಗಳೂರು ಬುಲ್ಸ್ ಮತ್ತೂಂದು ಸೋಲು ಕಂಡಿದೆ. ಬುಲ್ಸ್ 42-30 ಅಂತರದಿಂದ ಯು ಮುಂಬಾಗೆ ಶರಣಾಯಿತು.
ಗುರುವಾರ ತ್ಯಾಗರಾಜ್ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಡೆಲ್ಲಿ ಚರಣದ ಕೊನೆಯ ದಿನದ ಮೊದಲ ಪಂದ್ಯದಲ್ಲಿ ಬುಲ್ಸ್ ಗೆದ್ದು ಮತ್ತೆ ಫಾರ್ಮ್ಗೆಮರಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬೆಂಗಳೂರು ಜಾದೂ ಮಾಡಲಿಲ್ಲ. ಇನ್ನೊಂದು ಬಾರಿ ಕಳಪೆ ಪ್ರದರ್ಶನ ನೀಡಿತು. ಸತತ 3ನೇ ಸೋಲು ಅನುಭವಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ತಂಡವು ತೆಲುಗು ಟೈಟಾನ್ಸ್ಗೆ ಸೋತು ನಿರಾಶೆ ಅನುಭವಿಸಿತು. ಈ ಮೂಲಕ ಡೆಲ್ಲಿ ತವರಿನಲ್ಲಿ ಸತತ ಆರನೇ ಪಂದ್ಯದಲ್ಲಿಯೂ ಸೋತಿತು.
ಬುಲ್ಸ್ ಪರ ರೋಹಿತ್ ಕುಮಾರ್ (12 ಅಂಕ) ಮಾಡಿದ್ದು ಬಿಟ್ಟರೆ ರೈಡರ್ ಹರೀಶ್ ನಾಯ್ಕ (3 ಅಂಕ) ಭಾರೀ ವೈಫಲ್ಯ ಅನುಭವಿಸಿದರು. ಜತೆಗೆ ಡಿಫೆಂಡರ್ಗಳು ಸಂಪೂರ್ಣ ವಿಫಲವಾಗಿದ್ದು ಬುಲ್ಸ್ ಸೋಲಿಗೆ ಪ್ರಮುಖ ಕಾರಣವಾಯಿತು.
ಮುಂಬಾ ಗೆಲುವಿನಲ್ಲಿ ಕಾಶಿಲಿಂಗ್ ಅಡಕೆ (17 ರೈಡಿಂಗ್ ಅಂಕ) ಹಾಗೂ ಸುರೀಂದರ್ ಸಿಂಗ್ (6 ಟ್ಯಾಕ್ಲಿಂಗ್ ಅಂಕ) ಪ್ರಮುಖ ಪಾತ್ರವಹಿಸಿದರು.
ಬುಲ್ಸ್ ನಾಯಕ ರೋಹಿತ್ ವೈಫಲ್ಯ
2ನೇ ಅವಧಿಯ ಆಟ ಆರಂಭವಾದ ಮೂರು ನಿಮಿಷ ದಲ್ಲಿ ಬೆಂಗಳೂರು ಮತ್ತೂಂದು ಸಲ ಆಲೌಟಾಯಿತು. ಆಗ ಮುಂಬಾ 29-17ರಿಂದ ಮುಂದಿತ್ತು. ಆದರೆ 2ನೇ ಅವಧಿಯಲ್ಲಿ ರೋಹಿತ್ 2 ಸಲ ಸೂಪರ್ ರೈಡಿಂಗ್ ಮಾಡಿದರು. ಆದರೆ ಪಂದ್ಯದ 9ನೇ ನಿಮಿಷ ಆಗಿದ್ದಾಗ ಸೂಪರ್ ಟ್ಯಾಕಲ್ಗೆ ರೋಹಿತ್ ಬಲಿಯಾದರು. ಇದ ರೊಂದಿಗೆ ಬೆಂಗಳೂರು ಮತ್ತೂಮ್ಮೆ ಆಲೌಟ್ಗೊಳಗಾಗುವ ಭೀತಿಗೆ ಸಿಲುಕಿತ್ತು. ಜತೆಗೆ ಸೋಲಿನ ಮುನ್ಸೂಚನೆಯೂ ದೊರೆತಿತ್ತು.
ಮೊದಲ ಅವಧಿಯಲ್ಲಿ ಕಾಶಿಲಿಂಗ್ ಮಿಂಚು:
ಮೊದಲ ಅವಧಿಯ ಆರಂಭದಲ್ಲಿ ಎರಡೂ ತಂಡಗಳಿಂದ ಸಮಾನ ಹೋರಾಟ ಕಂಡು ಬಂತು. ಆದರೆ ಬರುಬರುತ್ತಾ ಮುಂಬಾ ಬಲಿಷ್ಠವಾಗ ತೊಡಗಿತು. ಮೊದಲ ಅವಧಿ 14ನೇ ನಿಮಿಷದಲ್ಲಿ ಬೆಂಗಳೂರು ತಂಡ ಆಲೌಟ್ ಆಯಿತು. ಈ ಅವಧಿಯಲ್ಲಿ ಬೆಂಗಳೂರು 13-23 ಅಂಕದಿಂದ ಹಿಂದಿತ್ತು. ಯು ಮುಂಬಾ ಮುನ್ನಡೆ ಪಡೆದುಕೊಂಡು ಗೆಲುವಿನ ಅತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಅದರಲ್ಲೂ ಕಾಶಿಲಿಂಗ್ ಅಡಕೆ ಮೊದಲ ಅವಧಿಯ 11ನೇ ನಿಮಿಷದಲ್ಲಿ 3 ಅಂಕ ಹಾಗೂ ಅದೇ ಅವಧಿಯ 18ನೇ ನಿಮಿಷದಲ್ಲಿ 4 ರೈಡಿಂಗ್ ಅಂಕ ಪಡೆಯುವ ಮೂಲಕ ಬುಲ್ಸ್ ಬೆವರಿಳಿಸಿದರು. ಇಲ್ಲಿಂದ ಮುಂಬಾ ಭಾರೀ ಮುನ್ನಡೆ ಪಡೆದುಕೊಂಡಿತು. ಮೊದಲ ಅವಧಿಯಲ್ಲಿ ರೋಹಿತ್ ಬೆಂಗಳೂರು ಪರ ರೈಡಿಂಗ್ನಿಂದ 6 ಅಂಕ ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಬೆಂಗಳೂರು ಬುಲ್ಸ್ ರಕ್ಷಣಾ ವಿಭಾಗ ಮತ್ತೂಮ್ಮೆ ಸಂಪೂರ್ಣ ಕೈಕೊಟ್ಟಿತು.
ಇಂದಿನಿಂದ ಚೆನ್ನೈ ಚರಣ ಆರಂಭ
ಶುಕ್ರವಾರದಿಂದ ಪ್ರೊ ಕಬಡ್ಡಿ ಚೆನ್ನೈ ಚರಣ ಆರಂಭ ವಾಗಲಿದ್ದು ಆತಿಥೇಯ ತಮಿಳ್ ತಲೈವಾಸ್ ತಂಡಕ್ಕೆ ತವರಿನಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
MUST WATCH
ಹೊಸ ಸೇರ್ಪಡೆ
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!