ತಂಬಾಕು ಬಿಟ್ರೆ 2 ಕಪ್ ಹಾಲು
Team Udayavani, Oct 4, 2017, 9:20 AM IST
ಅಲಹಾಬಾದ್: ಜನರ ತಂಬಾಕು ಚಟ ಬಿಡಿಸಲು ಸರಕಾರ ಹಾಗೂ ಎನ್ಜಿಒಗಳು ಎಷ್ಟೇ ಜಾಗೃತಿ ಕಾರ್ಯಕ್ರಮ ನಡೆಸಿದರೂ ಅವು ಯಶಸ್ವಿಯಾಗುವುದು ಅತಿ ವಿರಳ. ಆದರೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲಾ ಕಾರಾಗೃಹದ ಸುಪರಿಂಟೆಂ ಡೆಂಟ್ ಮಾಡಿದ ಉಪಾಯಕ್ಕೆ ಇಡೀ ಜೈಲು “ತಂಬಾಕು ಮುಕ್ತ’ವಾಗುವತ್ತ ಹೆಜ್ಜೆ ಇರಿಸಿದೆ.
ಜೈಲಲ್ಲಿ ಬೀಡಿ ಸೇದುವ, ತಂಬಾಕು ಜಗಿ ಯುವ ಕೈದಿಗಳ ಸಂಖ್ಯೆ ಹೆಚ್ಚಿದ್ದನ್ನು ಗಮ ನಿಸಿದ ಮೇಲ್ವಿಚಾರಕ, “ತಂಬಾಕು ತ್ಯಜಿಸಿ, ದಿನಕ್ಕೆ ಎರಡು ಕಪ್ ಹಾಲು ಪಡೆಯಿರಿ’ ಎಂಬ ಡೀಲ್ ಒಂದನ್ನು ಕೈದಿಗಳ ಮುಂದಿ ಟ್ಟರು. ಅದರಂತೆ ತಂಬಾಕು ಚಟ ತ್ಯಜಿಸಿದ ಕೈದಿಗಳಿಗೆ ದಿನಕ್ಕೆ ಅರ್ಧ ಲೀಟರ್ ಹಾಲು ಕೊಡಲು ಆರಂಭಿಸಿದರು. ಪರಿಣಾಮ ಬಹುತೇಕ ಕೈದಿಗಳು ತಂಬಾಕು ಬಿಟ್ಟು ಹಾಲು ಕುಡಿಯುವ “ಡೀಲ್’ ಅಪ್ಪಿಕೊಂಡಿದ್ದಾರೆ.
ಕೌಶಂಬಿ ಜೈಲಿನಲ್ಲಿ 642 ಕೈದಿಗಳಿದ್ದು, ಇವರಲ್ಲಿ ಶೇ.70 ಮಂದಿ ತಂಬಾಕು ಸೇವಿಸು ತ್ತಾರೆ. ಇದರಿಂದ ಚಟ ಇರುವವರ ಆರೋಗ್ಯ ಹಾಳಾಗು ವುದಷ್ಟೇ ಅಲ್ಲದೆ, ದುರಭ್ಯಾಸ ಹೊಂದಿರದ ಶೇ.30ರಷ್ಟು ಕೈದಿಗಳ ಆರೋ ಗ್ಯದ ಮೇಲೂ ದುಷ್ಪರಿಣಾಮ ಉಂಟಾಗು ತ್ತಿತ್ತು. “ಈ ವಿಷಯ ಗಮನಕ್ಕೆ ಬಂದ ಕೂಡಲೆ, ತಂಬಾಕು ಸೇವಿಸುವವರು ಮತ್ತು ಸೇವನೆ ಮಾಡದವರ ಪ್ರತ್ಯೇಕ ಸಾಲು ಮಾಡಿಸಿದೆ. ದುರಭ್ಯಾಸ ಇಲ್ಲದವರಿಗೆ ಅರ್ಧ ಲೀ. ಹಾಲು ಕೊಡಲಾ ರಂಭಿಸಿದೆ. ಚಟ ಬಿಟ್ಟರೆ ನಿಮಗೂ ಹಾಲು ಕೊಡುತ್ತೇನೆ ಎಂದು ವ್ಯಸನಿ ಗಳಿಗೆ ಹೇಳಿದೆ. ಪ್ರಸ್ತುತ ಅರ್ಧದಷ್ಟು ಕೈದಿ ಗಳು ತಂಬಾಕು ತ್ಯಜಿಸಿದ್ದಾರೆ. ವ್ಯಸನಿಗಳ ಸಾಲಿಗಿಂತ ಹಾಲು ಕುಡಿಯುವವರ ಸಾಲು ದೊಡ್ಡ ದಾಗಿದೆ’ ಎನ್ನುತ್ತಾರೆ ಜೈಲು ಮೇಲ್ವಿಚಾರಕ ಮುಕುಂದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ