ಪಂಚಕುಲ ಮಾಸ್ಟರ್ ಮೈಂಡ್ ನಾನೇ: ಹನಿಪ್ರೀತ್ ತಪ್ಪೊಪ್ಪಿಗೆ
Team Udayavani, Oct 11, 2017, 11:37 AM IST
ಚಂಡೀಗಢ : 38 ಜೀವಗಳನ್ನು ಬಲಿಪಡೆದಿದ್ದ ಪಂಚಕುಲ ಹಿಂಸೆಯ ಮಾಸ್ಟರ್ ಮೈಂಡ್ ನಾನೇ ಎಂದು ಡೇರಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ನ ವಿವಾದಾತ್ಮಕ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಒಪ್ಪಿಕೊಂಡಿರುವುದಾಗಿ ಆಕೆಯನ್ನು ಪ್ರಶ್ನಿಸುತ್ತಿರುವ ಹರಿಯಾಣ ಪೊಲೀಸ್ನ ಎಸ್ಐಟಿ ತಂಡ ಹೇಳಿದೆ.
ಪಂಚಕುಲದಲ್ಲಿ ಹಿಂಸೆಯನ್ನು ಸೃಷ್ಟಿಸುವ ಹೊಣೆಗಾರಿಕೆಯನ್ನು ಡೇರಾ ಕಾರ್ಯಕರ್ತರಿಗೆ ನೀಡಲಾಗಿತ್ತು ಮತ್ತು ಅದಕ್ಕಾಗಿ ಹಣವನ್ನು ಪಾವತಿಸುವಂತೆಯೂ ಸೂಚಿಸಲಾಗಿತ್ತು ಎಂದಾಕೆ ಹೇಳಿದ್ದಾಳೆ.
ಪಂಚಕುಲ ಹಿಂಸೆ ಮತ್ತು ಡೇರಾ ಅಕ್ರಮಗಳ ಕುರಿತಾದ ಎಲ್ಲ ಮಾಹಿತಿಗಳು ಹನಿಪ್ರೀತ್ ಳ ಲ್ಯಾಪ್ ಟಾಪ್ನಲ್ಲಿ ದಾಖಲಾಗಿದ್ದು ತಾವು ಅದನ್ನು ಶೀಘ್ರವೇ ವಶಪಡಿಸಿಕೊಳ್ಳಲಿದ್ದೇವೆ ಎಂದು ಹರಿಯಾಣ ಪೊಲೀಸರು ಕೋರ್ಟಿಗೆ ತಿಳಿಸಿದ್ದಾರೆ.
ಆಗಸ್ಟ್ 25ರಂದು ಪಂಚಕುಲದಲ್ಲಿ ಹಿಂಸೆಯನ್ನು ಭುಗಿಲೇಳಿಸಬೇಕೆಂಬ ನಿರ್ಧಾರವನ್ನು ಆಗಸ್ಟ್ 17ರ ಡೇರಾ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2002ರ ರೇಪ್ ಕೇಸ್ ನಲ್ಲಿ ಡೇರಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ ಅಪರಾಧಿಯೆಂದು ಕೋರ್ಟ್ ಘೋಷಿಸುವುದಕ್ಕೆ ಮುನ್ನ ಪಂಚಕುಲದಲ್ಲಿ ಹಿಂಸೆ ಭುಗಿಲೇಳಿಸಲು ನಿರ್ಧರಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
MUST WATCH
ಹೊಸ ಸೇರ್ಪಡೆ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ