ಜಿಲ್ಲಾಧಿಕಾರಿ ವರ್ಗಾವಣೆಗೆ ಸಸಿನೆಟ್ಟು ಸಂಭ್ರಮಿಸಿದ ಎನ್ಇಸಿಎಫ್
Team Udayavani, Oct 12, 2017, 12:59 PM IST
ಮಹಾನಗರ: ಜಿಲ್ಲೆಯಿಂದ ವರ್ಗಾವಣೆಯಾಗುತ್ತಿರುವ ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್ ಅವರು ಪರಿಸರ ಕಾಳಜಿ ಹೊಂದಿರಲಿಲ್ಲ ಹಾಗೂ ಮರಳು ಮಾಫಿಯಾವನ್ನು ಮಟ್ಟಹಾಕುವಲ್ಲಿ ಸಂಪೂರ್ಣ ವಿಫಲರಾಗಿದ್ದರು ಎಂದು ಆರೋಪಿಸಿರುವ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟವು, ತನ್ನ ಕಾರ್ಯದರ್ಶಿ ಶಶಿಧರ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಸಿ ನೆಡುವ ಮೂಲಕ ವರ್ಗಾವಣೆಗೆ ಸಂಭ್ರಮ ವ್ಯಕ್ತಪಡಿಸಿತು.
ಶಶಿಧರ ಶೆಟ್ಟಿ ಮಾತನಾಡಿ, ಮರಳು ಮಾಫಿಯಾವನ್ನು ಮಟ್ಟ ಹಾಕುವಲ್ಲಿ ದ.ಕ. ಜಿಲ್ಲಾಧಿಕಾರಿಯಾಗಿ ಈಗ ವರ್ಗಾವಣೆಗೊಂಡಿರುವವರು ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಯ ಸಮಸ್ತ ಬೆಳವಣಿಗೆಯ ಆಶಯ ಇರಿಸಬೇಕಾಗಿದ್ದ ಅವರು ಮೊಂಡುತನದ ಧೋರಣೆ ಪ್ರದರ್ಶಿಸಿ ಪರಿಸರ ಸಂಬಂಧಿತ ಹೋರಾಟಕ್ಕೆ ನಿರಾಕರಣೆಯ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಬೀಳ್ಕೊಡುಗೆ ಸಂದರ್ಭದಲ್ಲಿ ಸಮ್ಮಾನಿಸಿ ಕಳುಹಿಸಬೇಕಾದ ನಾವು ಇಂದು ಗಿಡ ನೆಡುವ ಮೂಲಕ ಸಂಭ್ರಮಿಸುವಂತಾಗಿದೆ ಎಂದರು.
ದಿನೇಶ್ ಹೊಳ್ಳ, ರಾಜೇಂದ್ರ, ರೋಜಿ ಮರಿಯಾ ಡಿ’ ಸೋಜಾ, ಲೋಹಿತ್, ಪ್ರವೀಣ್ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ…
Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್ ಅಂಡರ್ಪಾಸ್
Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ
Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?
Delhi Police; ಮರದ ಪುಡಿ, ಕೆಮಿಕಲ್ ಬಳಸಿ ಮಸಾಲೆ ಪದಾರ್ಥ ತಯಾರು; ಮೂವರ ಬಂಧನ