ಒಡಿಶಾ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಸಾವು, 20 ಮಂದಿಗೆ ಗಾಯ
Team Udayavani, Oct 19, 2017, 10:51 AM IST
ಭುವನೇಶ್ವರ : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿನ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಉಂಟಾದ ಭೀಕರ ಸ್ಫೋಟಕೆ ಕನಿಷ್ಠ ಎಂಟು ಮಂದಿ ಬಲಿಯಾಗಿ ಇತರ 20 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಾಲಸೋರ್ ಪಟಾಕಿ ಕಾರ್ಖಾನೆಯಲ್ಲಿನ ಈ ದುರಂತಕ್ಕೆ ಕಾರಣವಾದ ಸ್ಫೋಟವು ಯಾವುದರಿಂದಾಗಿ ಸಂಭವಿಸಿತೆಂದು ತಿಳಿದು ಬಂದಿಲ್ಲ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಬುಧವಾರ ರೂರ್ಕೆಲ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಓರ್ವ ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದರು.
ದೀಪಾವಳಿ ಹಬ್ಬ ಸಾಗುತ್ತಿರುವಂತೆಯೇ ದೇಶದ ವಿವಿಧೆಡೆಗಳಿಂದ ಒಂದೊಂದಾಗಿ ಬೆಂಕಿ ಆಕಸ್ಮಿಕ ದುರಂತಗಳು ವರದಿಯಾಗುತ್ತಿವೆ.