ಮಳೆಗೆ ಮನೆಗಳು ಜಲಾವೃತ: ಪರದಾಟ
Team Udayavani, Oct 20, 2017, 12:02 PM IST
ಮಹದೇವಪುರ: ಸುಮಾರು 17 ವರ್ಷಗಳಿಂದ ಕೆರೆಯಂಚಿನಲ್ಲಿ ಜೀವಿಸುತ್ತಿದ್ದ 150ಕ್ಕೂ ಹೆಚ್ಚು ಬಡ ಕುಟುಂಬಗಳ ಮನೆಗಳು ಮಳೆಯಿಂದ ಸಂಪೂರ್ಣ ಜಲವೃತ್ತವಾಗಿದ್ದು ಮೂಲಭೂತ ಸೌಲಭ್ಯಗಳಿಲ್ಲದೆ ಬೀದಿ ಪಾಲಾಗಿವೆ, ಕೆರೆಯಂಚಿನಲ್ಲಿ ನೆಲೆಸಿರುವ ಹಿನ್ನೆಲೆ ಸರ್ಕಾರವೂ ಸಹ ಕೈಬಿಟ್ಟಿರುವುದು ಕಂಟಕವಾಗಿದೆ.
ಕ್ಷೇತ್ರದ ದೊಡ್ಡಬನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಬನಹಳ್ಳಿ ಕಾಲೋನಿಯು ಕೆರೆಯಂಚಿನಲ್ಲಿದ್ದು ಕಳೆದ 17 ವರ್ಷಗಳಿಂದ 300 ಕ್ಕೂ ಹೆಚ್ಚು ಬಡ ಕುಟುಂಬಗಳು ಇಲ್ಲಿ ನೆಲೆಸಿವೆ, ಆಗಸ್ಟ್ನಿಂದ ಎರಡು ತಿಂಗಳ ಕಾಲ ಸುರಿದ ಬಾರಿ ಮಳೆಗೆ ಕಾಲೋನಿಯ 150ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಗಂಜಿ ಕೆಂದ್ರಗಳಲ್ಲಿ ನೆಲೆಸುವಂತಹ ಸ್ಥಿತಿ ಇದೆ.
ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಹೇಳಿದ ನಂತರ ಗಂಜಿ ಕೇಂದ್ರ ನಿರ್ಮಿಸಿದೆ. ಮೂಲಸೌಲಭ್ಯವಿಲ್ಲದೆ ಜನರು ಶೌಚಾಲಯಕ್ಕೆ ಹೋಗಲೂ ಪರದಾಡುವ ಸ್ಥಿತಿಯಿದೆ. ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಸುಮಾರು 17ವರ್ಷದ ಹಿಂದೆ ಕೆರೆ ಪ್ರದೇಶವೆಂದು ತಿಳಿಯದೆ ವಾಸಿಸುತ್ತಿದ್ದೇವೆ. ಶಾಲಾ ಮಕ್ಕಳು ತಿಂಗಳಿಂದ ಶಾಲೆಗೆ ಹೋಗುವುದು ಅಸಾಧ್ಯವಾಗಿದೆ ಮಹಿಳೆಯರು, ವೃದ್ಧರಿಗೆ ತೀವ್ರ ಸಂಕಷ್ಟವಾಗಿದೆ ತಾಲೂಕು ಕಚೇರಿ ಮುಂದೆ ಸಮೂಹಿಕ ಅತ್ಮಹತ್ಯಯೇ ಒಂದೆ ಇರುವುದು ನಮ್ಮಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಚಿಕ್ಕಬನಹಳ್ಳಿ ಕಾಲೋನಿ ಸ್ಥಳೀಯರಾದ ವಸಂತ ಅಳಲುತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು