ಡಿಕೆಶಿ ಬ್ರದರ್ ದಬ್ಟಾಳಿಕೆಗೆ ಚುನಾವಣೆಯಲ್ಲಿ ಉತ್ತರ
Team Udayavani, Oct 23, 2017, 7:10 AM IST
ಚನ್ನಪಟ್ಟಣ: “ಡಿಕೆಶಿ ಸಹೋದರರ ದಬ್ಟಾಳಿಕೆಗೆ ತಾಲೂಕಿನ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ’ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಸ್ವಾಭಿಮಾನಿ, ಪ್ರಗತಿಪರ ಚಿಂತಕರ ಸಭೆಯಲ್ಲಿ ಅವರು ಮಾತನಾಡಿದರು. “ನನಗೆ ಡಿಕೆಶಿ ಸಹೋದರರ ಮೇಲೆ ಯಾವ ಹಗೆತನವೂ ಇಲ್ಲ. ಆದರೂ ಅವರು ನನ್ನನ್ನು ರಾಜಕೀಯವಾಗಿ ಪ್ರತಿ ಹಂತದಲ್ಲೂ ತುಳಿಯುತ್ತಾ ಬಂದಿದ್ದಾರೆ. ನನ್ನ ಸಂಯಮವನ್ನು ಪರೀಕ್ಷೆ ಮಾಡುತ್ತಲೇ ಬಂದಿದ್ದಾರೆ’ ಎಂದು ದೂರಿದರು.
ಸಚಿವ ಸ್ಥಾನಕ್ಕೆ ಕತ್ತರಿ: 20-20 ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡುವುದಾಗಿ ಘೋಷಣೆಯಾಗಿ ನನ್ನನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದರು. ಆದರೆ ಡಿಕೆಶಿ ಬೆಳಗಿನ ವೇಳೆಗೆ ನನ್ನ ಸಚಿವ ಸ್ಥಾನಕ್ಕೆ ಕತ್ತರಿ ಹಾಕಿದ್ದರು. ಜೊತೆಗೆ 2013ರ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಿ, ಟಿಕೆಟ್ ಬೇಡ ಎಂದ ಮಾಜಿ ಶಾಸಕ ಸಾದತ್ ಆಲಿಖಾನ್ಗೆ ನೀಡಿದ್ದರು. ಆದರೂ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದಾಗ ಮತದಾರರು ನನ್ನ ಕೈಹಿಡಿದರು ಎಂದು ಯೋಗೇಶ್ವರ್ ಹೇಳಿದರು.
ಇದೇ ವೇಳೆ, ಆಗಾಗ ಬಿಜೆಪಿ ಮಂತ್ರ ಪಠಿಸುತ್ತಾ ಬಿಜೆಪಿ ಸೇರುವ ಮುನ್ಸೂಚನೆಯನ್ನೂ ಯೋಗೇಶ್ವರ್ ನೀಡಿದರು. ಶೀಘ್ರದಲ್ಲೇ ಇದೇ ಸ್ಥಳದಲ್ಲಿ ಮತ್ತೂಂದು ಸಭೆ ಕರೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ