ಕ್ರಿಕೆಟಿಗರ ಉದ್ದೀಪನ ಪರೀಕ್ಷೆ ನ. 3ಕ್ಕೆ ಬಿಸಿಸಿಐ ತುರ್ತು ಸಭೆ
Team Udayavani, Oct 31, 2017, 6:50 AM IST
ಹೊಸದಿಲ್ಲಿ: ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಭಾರತೀಯ ಕ್ರಿಕೆಟಿಗರನ್ನು ಮುಕ್ತವಾಗಿ ಉದ್ದೀಪನ ಪರೀಕ್ಷೆಗೆ ಒಳಪಡಿಸಿ ಎಂದು ನಾಡಾಕ್ಕೆ (ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ)ಆದೇಶಿಸಿದ ಬೆನ್ನಲ್ಲೇ ಬಿಸಿಸಿಐ ನ. 3ಕ್ಕೆ ತುರ್ತು ಸಭೆ ಕರೆದಿದೆ.
ಬಿಸಿಸಿಐ ಆರಂಭದಿಂದಲೂ ಕ್ರಿಕೆಟಿಗರಿಗೆ ಉದ್ದೀಪನ ಪರೀಕ್ಷೆ ವಿರೋಧಿಸುತ್ತಲೇ ಬಂದಿದೆ. ಆದರೆ ನಾಡಾವನ್ನು ವಿಶ್ವ ಮಟ್ಟದಿಂದ ಅಮಾನ್ಯಗೊಳಿಸಲಾಗುವುದು ಎಂದು ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಕ್ರೀಡಾ ಸಚಿವರಿಗೆ ಪತ್ರ ಬರೆದಿತ್ತು. ಇದರಿಂದ ಭಾರತದ ಆ್ಯತ್ಲೀಟ್ಗಳ ಭವಿಷ್ಯ ಅತಂತ್ರವಾಗುವ ಆತಂಕ ಎದುರಾಗಿತ್ತು. ಈ ಹಂತವನ್ನು ಸೂಕ್ಷ್ಮವಾಗಿ ಗಮನಿಸಿದ ಕ್ರೀಡಾ ಸಚಿವರು, ಕ್ರಿಕೆಟಿಗರಿಗೆ ಉದ್ದೀಪನ ಪರೀಕ್ಷೆ ನಡೆಸಲು ನಾಡಾಕ್ಕೆ ಸೂಚನೆ ನೀಡಿದ್ದರು.