ಪರವಾನಗಿ ರಹಿತ ವಾಹನ ಚಾಲನೆ ಮಾಡದಿರಲು ಸಲಹೆ
Team Udayavani, Nov 3, 2017, 1:07 PM IST
ಬೀದರ: ಮನ್ನಳ್ಳಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ರೈತ ಸಾರಥಿ ಯೋಜನೆಯಡಿ ಟ್ರ್ಯಾಕ್ಟರ್ ಚಾಲಕರಿಗಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಸಾರಿಗೆ ಇಲಾಖೆಯ ಅಧಿಕಾರಿ ಕೆ.ಟಿ. ವಿಶ್ವನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ರೈತರು ಚಾಲನಾ ಪತ್ರ ಪಡೆಯಬೇಕು. ಪರವಾನಗಿ ಇಲ್ಲದೇ ವಾಹನ ನಡೆಸುವುದು ಸರಿಯಲ್ಲ. ಅಪಘಾತಕ್ಕೆ ಒಳಗಾದಾಗ ಯಾವುದೇ ವಿಮೆ ಕಂಪನಿಯು ವಿಮಾ ಇನ್ಸೂರೆನ್ಸ್ ಕೊಡುವುದಿಲ್ಲ. ಹಾಗೂ ಚಾಲಕರಿಗೂ ಯಾವುದೇ ಸೌಲಭ್ಯಗಳು ದೊರಕುವುದಿಲ್ಲ. ಆದ್ದರಿಂದ ಎಲ್ಲರೂ ಪ್ರಾದೇಶಿಕ ಸಾರಿಗೆ ಇಲಾಖೆಗೆ ಭೇಟಿ ನೀಡಿ ಪರವಾನಿಗೆ ಪಡೆಯಬೇಕು ಎಂದರು. ಎಲ್ಲಾ ಹೋಬಳಿ ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಪಿಎಸ್ಐ ಪ್ರಕಾಶ ಯಾತನೂರ ಮಾತನಾಡಿ, ಎಲ್ಲರೂ ತಪ್ಪದೇ ಕಡ್ಡಾಯವಾಗಿ ದ್ವಿಚಕ್ರ ವಾಹನದ ಪರವಾನಗಿ ಪಡೆದು, ಹೆಲ್ಮೇಟ್ ಧರಿಸಿ ತಮ್ಮ ಜೀವನ ಪಾಡಿಕೊಳ್ಳಬೇಕು. ದ್ವಿಚಕ್ರ ವಾಹನದ ಮೇಲೆ ಚಲಿಸುವಾಗ ಮೊಬೈಲ್, ಹೆಡ್ ಫೋನ್ ಬಳಸಬೇಡಿ. ಮದ್ಯಪಾನ, ಧೂಪಮಾನ ಮಾಡಬೇಡಿ ಎಂದು ಹೇಳಿದರು.
ವಾಹನ ಚಾಲಕರು ಪೊಲೀಸರಿಗೆ ದಂಡ ಕೊಡುವ ಬದಲು ಆ ಹಣದಲ್ಲಿ ಹೆಲ್ಮೇಟ್ ಹಾಗೂ ವಿಮೆ ಮಾಡಿಸಿಕೊಂಡು
ತಮ್ಮನ್ನು ತಾವು ಸಂರಕ್ಷಿಸಿಕೊಳ್ಳರ್ಬಕು ಎಂದು ಸಲಹೆ ನೀಡಿದರು. ಡ್ರೈವಿಂಗ್ ಸ್ಕೂಲ್ನ ಪ್ರಾಚಾರ್ಯ ಶಿವರಾಜ ಜಮಾದಾರ ಮಾತನಾಡಿದರು. ಎಎಸ್ಐಗಳಾದ ಶಿವರಾಜ ರಾಂಮಪುರೆ, ನಾಗನಾಥ ಕಮಠಾಣೆ, ರಮೇಶ ಜಮಾದಾರ, ಸಂಜುಕುಮಾರ, ಮಲ್ಲಿಕಾರ್ಜುನ ಸಿಂದೋಲ, ಉಮೇಶ ಪಾತರಪಳ್ಳಿ, ಮೌಲಾನ ಬರೂರ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. ಪ್ರಾದೇಶಿಕ ಸಾರಿಗೆ ಇಲಾಖೆ, ಮನ್ನಳ್ಳಿ ಪೊಲೀಸ್ ಠಾಣೆ ಹಾಗೂ ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ