ಇಂದು ಮೂಡಬಿದಿರೆ ಕೋಟಿ ಚೆನ್ನಯ ಕಂಬಳ 


Team Udayavani, Nov 11, 2017, 9:50 AM IST

11-Nov-1.jpg

ಮೂಡಬಿದಿರೆ: ಹಲವು ಅಡ್ಡಿ ಆತಂಕ, ಹೋರಾಟಗಳ ನಡುವೆ ಹೊಯ್ದಾಡಿದ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಸುಮಾರು 1 ವರ್ಷ 8 ತಿಂಗಳ ಬಳಿಕ ಮತ್ತೆ ನಿಶಾನಿಗೆ ನೀರು ಹಾಯಿಸಲು ಅವಕಾಶ ಲಭಿಸಿದೆ. ಮೂಡಬಿದಿರೆಯ ಕಡಲಕೆರೆ ನಿಸರ್ಗ ಧಾಮದಲ್ಲಿ ಶನಿವಾರ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಯಲು ಸರ್ವ ಸಿದ್ಧತೆ ನಡೆದಿದೆ.

ನಾಗಭೂಷಣ ಕಾಮತ್‌ವೇದಿಕೆ
ಕೋಟಿ ಚೆನ್ನಯ ಕಂಬಳದೊಂದಿಗೆ ಅಭಿಮಾನಿ ಸ್ವಯಂಸೇವಕನಾಗಿ ಗುರುತಿಸಿಕೊಂಡು, ಓದುತ್ತಿರುವಾಗಲೂ ಉದ್ಯೋಗ ದೊರೆತ ಬಳಿಕವೂ ಬಿಡದೆ ಕಂಬಳಕ್ಕೆ ಬಂದು ತನ್ನ ಸೇವೆಯಿಂದ ಗಮನ ಸೆಳೆದಿದ್ದ ನಾಗಭೂಷಣ ಕಾಮತ್‌ ಇತ್ತೀಚೆಗೆ ನಿಧನ ಹೊಂದಿದ್ದು, ಈ ಬಾರಿ ವೇದಿಕೆಗೆಅವರ ಹೆಸರಿಡಲಾಗಿದೆ.

ಜೋಡುಕರೆಗಳನ್ನು ಉತ್ತು, ಹದಮಾಡಿ, ಹೊಗೆ ಎರಚುವ ಕಾರ್ಯ ನಡೆದಿದೆ. ಆವರಣವೆಲ್ಲ ಸುಣ್ಣ ಬಣ್ಣ ಹೊಡೆಸಿಕೊಂಡಿದೆ. ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಮುಖ ಮಂಟಪಗಳು, ತೀರ್ಪುಗಾರರ ಗ್ಯಾಲರಿ, ಮಹಿಳೆಯರ ಗ್ಯಾಲರಿ, ಇತರ ವೀಕ್ಷಣಾ ಗ್ಯಾಲರಿ ವ್ಯವಸ್ಥೆ ಆಗಿದೆ. ಹತ್ತಿರದಲ್ಲೇ ಇರುವ ಅಯ್ಯಪ್ಪ ಗುಡಿಯ ಪಕ್ಕ ಅಲ್ಲಿನ ಅಭಿಮಾನಿಗಳು ಕೆರೆಕಾಡು ಮಕ್ಕಳ ಮೇಳದ ಬಯಲಾಟ ಈ ಬಾರಿಯೂ ನಡೆಯಲಿದೆ.

ಜಾನಪದ ಕ್ರೀಡಾ ಉತ್ಸವ
ಮೂಡಬಿದಿರೆ ಕಂಬಳವೆಂದರೆ ಅದು ಸರ್ವಧರ್ಮೀಯರು ಸೇರುವ ಜಾತ್ರೆ. ಜಾನಪದ ಕ್ರೀಡಾ ಉತ್ಸವ. ಶನಿವಾರ ಮುಂಜಾನೆ ಆರಂಭವಾಗುವ ಈ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದ ಕೋಣಗಳು ಬೆಳಗ್ಗೆ ಗಂ. 8.30ಕ್ಕೆ , ಹಗ್ಗ ಕಿರಿಯ ವಿಭಾಗದ ಕೋಣಗಳು 11 ಗಂಟೆಗೆ, ನೇಗಿಲು ಹಿರಿಯ ವಿಭಾಗದ ಕೋಣಗಳು ಮಧ್ಯಾಹ್ನ 12.30ಕ್ಕೆ, ಹಗ್ಗ ಹಿರಿಯ ವಿಭಾಗದ ಕೋಣಗಳು ಅಪರಾಹ್ನ 2.30 ಹಾಗೂ ಕನೆಹಲಗೆ ಮತ್ತು ಅಡ್ಡ ಹಲಗೆಯ ಕೋಣಗಳು ಅಪರಾಹ್ನ ಗಂ. 4ಕ್ಕೆ ಇಳಿಯಲಿವೆ.

ಹಿಂಸೆಗೆ ಎಲ್ಲೂ ಅವಕಾಶವಿಲ್ಲದೆ, ಜಿಲ್ಲಾ ಕಂಬಳ ಸಮಿತಿ 2017-18ನೇ ಸಾಲಿನಲ್ಲಿ ಕೈಗೊಂಡಿರುವ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಕಂಬಳ ನಡೆಯಲಿದೆ. ಶುಕ್ರವಾರ ಸಂಜೆ ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಎಸ್‌. ಕೋಟ್ಯಾನ್‌, ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರ. ಕಾರ್ಯದರ್ಶಿ ವಿಜಯಕುಮಾರ್‌ ಕಂಗಿನಮನೆ, ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಶಾಸಕ ಕೆ. ಅಭಯಚಂದ್ರ ಸಹಿತ ಜಿಲ್ಲೆಯ ಸರ್ವ ಕಂಬಳ ಸಮಿತಿಗಳ, ವ್ಯವಸ್ಥಾಪಕರ ತುರ್ತು ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.

ಬಹುಮಾನಗಳು
ಕನೆಹಲಗೆಯಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಹಗ್ಗ, ನೇಗಿಲು ಹಿರಿಯ ವಿಭಾಗದ ಕೋಣಗಳಿಗೆ
ಕ್ರಮವಾಗಿ ಪ್ರಥಮ 2 ಪವನ್‌, ದ್ವಿತೀಯ 1 ಪವನ್‌ ಚಿನ್ನ, ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್‌, ದ್ವಿತೀಯ ಅರ್ಧ ಪವನ್‌ ಬಹುಮಾನಗಳಿವೆ. ಇದಲ್ಲದೆ, ವಿಶೇಷವಾಗಿ, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್‌ ಚಿನ್ನ ಹಾಗೂ ಸಹಾಯಕ ತಂಡದವರಿಗೆ ರೂ. 1,000 ನಗದು ಬಹುಮಾನ ನೀಡಿ ಗೌರವಿಸುವ ಕ್ರಮ ಕೋಟಿ ಚೆನ್ನಯ ಕಂಬಳದಲ್ಲಿ ಮಾತ್ರ ರೂಢಿಯಲ್ಲಿದೆ.

ಕೇಂದ್ರ-ರಾಜ್ಯ ಸಚಿವರು, ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಪುರಸಭೆ, ಗ್ರಾಮ ಪಂಚಾಯತ್‌ ಸದಸ್ಯರು, ಉದ್ಯಮಿಗಳು, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ವಕ್ತಾರರು, ದಾನಿಗಳು ಅಲ್ಲದೆ ವಿಶೇಷ ಆಹ್ವಾನಿತರಾಗಿ ತುಳು ನಾಟಕ-ಚಲನಚಿತ್ರ ಕಲಾವಿದರೂ ಕಂಬಳ ಉಳಿಸುವ ಹೋರಾಟದಲ್ಲಿ ಜತೆಗೂಡಿದವರೂ ಆಗಿರುವ ದೇವದಾಸ್‌ ಕಾಪಿಕಾಡ್‌, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ನವೀನ್‌ ಡಿ. ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌, ಅರ್ಜುನ್‌ ಕಾಪಿಕಾಡ್‌ ಇವರೇ ಮೊದಲಾದವರೂ ಈ ಕಂಬಳಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದಾರೆ.

ಸಿದ್ಧತೆ ಪೂರ್ಣ
ವರ್ಷದಿಂದ ವರ್ಷಕ್ಕೆ ಇಲ್ಲಿ ಪಾಲ್ಗೊ ಳ್ಳುವ ಕೋಣಗಳ ಸಂಖ್ಯೆ ಏರುತ್ತಿದ್ದು, ಈ ಬಾರಿ 200ರಷ್ಟು ಜತೆ ಕೋಣಗಳು, ಓಟಗಾರರು, ಯಜಮಾನರು, ಪರಿವಾರ ವರ್ಗದೊಂದಿಗೆ ಪಾಲ್ಗೊಳ್ಳುವ ನಿರೀಕ್ಷೆ ಇದೆ. 146 ಮೀ. ಉದ್ದ, 6 ಮೀ. ಅಗಲದ ಜೋಡುಕರೆಗಳು, 110 ಅಡಿ ಉದ್ದ, 80 ಅಡಿ ಅಗಲದ ಬೃಹತ್‌ ವೇದಿಕೆ, ಕೋಣಗಳಿಗೆ ಪ್ರಾಕೃತಿಕ ಈಜುಕೊಳ, ಸಾಕಷ್ಟು ನೀರಿನ ಪೂರೈಕೆ, 30,000 ಲೀ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅನುಭವಿ ತೀರ್ಪುಗಾರರು, ಲೇಸರ್‌ ಬೀಮ್‌ ಜೋಡಿಸಿದ ಟೈಮರ್‌ನಿಂದ ಕರಾರುವಕ್ಕಾದ ತೀರ್ಮಾನ ಇಲ್ಲಿನ ವಿಶೇಷತೆ.

2016 ಮಾರ್ಚ್‌2ರಂದು ಕಂಬಳಕ್ಕೆ ತಡೆಯಾಜ್ಞೆ, ಬಂದಿದ್ದು, ಬಳಿಕ ಕಂಬಳ ನಡೆದಿರಲಿಲ್ಲ. ಸುಮಾರು 1 ವರ್ಷ 8ತಿಂಗಳ ಬಳಿಕ ಮತ್ತೆ ಆಚರಣೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ಸಹಜವಾಗಿಯೇ ಕಂಬಳ ಅಭಿಮಾನಿಗಳ ಮನದಲ್ಲಿ ಸಂತಸ ತಂದಿದೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.