ಡಿವೈನ್‌ ಸ್ಪಾರ್ಕ್‌ ವಿವೇಕ ಜಾಗೃತ ಬಳಗ:ಸಾಮೂಹಿಕ ಕುಂಕುಮಾರ್ಚನೆ


Team Udayavani, Nov 15, 2017, 3:47 PM IST

6.jpg

ಮುಂಬಯಿ: ಡಿವೈನ್‌ ಸ್ಪಾರ್ಕ್‌ ಇದರ ಮಹಾ ನಗರದ ಎಲ್ಲಾ ವಿವೇಕ ಜಾಗೃತ ಬಳಗದ ಆಶ್ರಯ ದಲ್ಲಿ  ಬಾಂದ್ರಾ ಪೂರ್ವದ ನ್ಯೂ ಇಂಗ್ಲಿಷ್‌ ಹೈಸ್ಕೂಲ್‌ ನಲ್ಲಿ ಸಾಮೂಹಿಕ  ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸ ಲಾಗಿತ್ತು.  

ಡಿವೈನ್‌   ಪಾರ್ಕ್‌ ಸಾಲಿಗ್ರಾಮದ ಗುರೂಜೀ ಡಾ| ಚಂದ್ರಶೇಖರ ಉಡುಪ ಅವರ ಉಪಸ್ಥಿತಿ ಹಾಗೂ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಈ ವಿಶಿಷ್ಟ ಸಾಮೂಹಿಕ ಕುಂಕುಮಾರ್ಚನೆಯ ವೈಶಿಷ್ಟé ಹಾಗೂ ಪ್ರಾಧಾನ್ಯತೆಯ ಬಗ್ಗೆ ಡಾ| ಚಂದ್ರಶೇಖರ್‌ ಗುರೂಜೀ ಅವರು ಮಾತನಾಡಿ, ನಮ್ಮೆಲ್ಲರ ರಕ್ತದ ಬಣ್ಣ ಕೆಂಪಾಗಿದ್ದು, ನಾನು, ನನ್ನದು ಹಾಗೂ ನನ್ನಿಂದ ಎಂಬೀ ಜನ್ಮ ಜನ್ಮಾಂತರದ ಅಹಂ ಭಾವದ ಕೊಳೆ ಸಹಿತವಾದ ಅಶುದ್ಧ ರಕ್ತವನ್ನು ಶ್ರದ್ಧೆ, ಭಕ್ತಿಯಿಂದ ಜಗನ್ಮಾತೆಯ ಪಾದ ತಳದಲ್ಲಿ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಹಿರಿಯ ಮನುಷ್ಯರ ಶರೀರದಲ್ಲಿ ಐದು ಲೀಟರ್‌ ರಕ್ತ ಇರುತ್ತದೆ. ಹಾಗೆಂದೇ ಕನಿಷ್ಠ ಐದು ಚಮಚದಷ್ಟಾದರೂ ರಕ್ತ ಬಣ್ಣದ ತಾಜಾ ಕುಂಕುಮವನ್ನು ಈ ಕುಂಕುಮಾರ್ಚನೆಯಲ್ಲಿ ಉಪಯೋಗಿಸಲಾಗುತ್ತದೆ ಎಂದು ನುಡಿದರು.

ಪ್ರಾರಂಭದಲ್ಲಿ ಶ್ರೀ ರಾಮರಕ್ಷಾ ಸ್ತೊÅàತ್ರ ಪಠ ಣದೊಂದಿಗೆ ಧಾರ್ಮಿಕ ಕಾರ್ಯಕ್ರಮವು ಪ್ರಾರಂಭ ಗೊಂಡಿತು. ಜಗನ್ಮಾತೆಗೆ ಅಭಿಷೇಕ ಅಲಂಕಾರವನ್ನು ಮಾಡುತ್ತಿದ್ದಂತೆ ಡಾ| ಚಂದ್ರಶೇಖರ ಗುರೂಜಿ ಅವರು ಕಾರ್ಯಕ್ರಮದ ವೈಶಿಷ್ಟéದ ಬಗ್ಗೆ ವಿವರಿಸಿದರು. 

ಕುಂಕುಮಾರ್ಚನೆ ಆದ ಬಳಿಕ ಮಹಾಮಂಗಳಾರತಿ ನಡೆಯಿತು. ಈ ವೈಶಿಷ್ಟÂಪೂರ್ಣ ಕುಂಕುಮಾರ್ಚನೆಯಲ್ಲಿ ಸಾವಿರಾರು ತುಳು-ಕನ್ನಡಿಗರು ಭಾಗವಹಿಸಿದ್ದು, ನಗರದ ಹಿರಿಯ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಕ್ತಾದಿಗಳು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಮಹಾದಾನಿಗಳನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಡಾಕ್ಟರ್‌ಜೀ ಅವರು ಪ್ರಸಾದವನ್ನಿತ್ತು ಆಶೀರ್ವದಿಸಿ ಶುಭಹಾರೈಸಿದರು. ಡಿವೈನ್‌ ಸ್ಪಾರ್ಕ್‌ ಮುಂಬಯಿ ಸೆಂಟ್ರಲ್‌ ಸಮಿತಿಯ ಪದಾಧಿಕಾರಿಗಳಾದ ಎಂ. ಟಿ. ಶೆಟ್ಟಿ, ಜಯರಾಮ ಶೆಟ್ಟಿ, ಎಂ. ಬಿ. ಸನಿಲ್‌, ಡಾ| ಪಿ. ಎಸ್‌. ರಾವ್‌, ವಿಶ್ವನಾಥ ತೋನ್ಸೆ ಅವರು ಡಾ| ಚಂದ್ರಶೇಖರ ಗುರೂಜೀ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು. ಅಪರಾಹ್ನ 4 ರಿಂದ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕುಂಕುಮಾರ್ಚನೆಗೈದು  ಮಹಾಮಂಗಳಾರತಿಯ ಆನಂತರ ಪ್ರಸಾದ ವಿತರಣೆ ನಡೆಯಿತು.                

ಚಿತ್ರ-ವರದಿ : ಸುಭಾಷ್‌  ಶಿರಿಯಾ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.