ಕರ್ನಾಟಕ ಭರ್ಜರಿ ಬ್ಯಾಟಿಂಗ್‌


Team Udayavani, Nov 18, 2017, 12:51 PM IST

18-21.jpg

ಕಾನ್ಪುರ: ಉತ್ತರ ಪ್ರದೇಶ ಬೌಲರ್‌ಗಳಿಗೆ ಅವರ ಅಂಗಳದಲ್ಲೇ ಬೆವರಿಳಿಸಿದ ಕರ್ನಾಟಕ, 5ನೇ ಸುತ್ತಿನ ರಣಜಿ ಪಂದ್ಯದಲ್ಲಿ ಪ್ರಚಂಡ ಆರಂಭ ಕಂಡುಕೊಂಡಿದೆ. ಮೊದಲ ದಿನ ಕೇವಲ 3 ವಿಕೆಟಿಗೆ 327 ರನ್‌ ಪೇರಿಸಿ ಭಾರೀ ಮೊತ್ತದ ಮುನ್ಸೂಚನೆ ನೀಡಿದೆ.

“ಎ’ ಗುಂಪಿನ ಅಗ್ರಸ್ಥಾನಿಯಾಗಿರುವ ಕರ್ನಾಟಕ ಕಾನ್ಪುರದ “ಗ್ರೀನ್‌ ಪಾರ್ಕ್‌’ ಅಂಗಳದಲ್ಲಿ ಅದೃಷ್ಟದ ಟಾಸ್‌ ಗೆದ್ದು ಅಮೋಘ ಬ್ಯಾಟಿಂಗಿಗೆ ಮುಂದಾಯಿತು. ಮಾಯಾಂಕ್‌ ಅಗರ್ವಾಲ್‌ (90), ಡಿ. ನಿಶ್ಚಲ್‌ (ಬ್ಯಾಟಿಂಗ್‌ 90), ಕರುಣ್‌ ನಾಯರ್‌ (62) ಮತ್ತು ಮನೀಷ್‌ ಪಾಂಡೆ (63 ಬ್ಯಾಟಿಂಗ್‌) ಅರ್ಧ ಶತಕ ಬಾರಿಸಿ ಯುಪಿ ಬೌಲರ್‌ಗಳ “ಬಿಪಿ ಡೌನ್‌’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನವೇ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು 49 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಪರಾಕ್ರಮ ಮೆರೆದಿದ್ದಾರೆ. 8 ಮಂದಿ ದಾಳಿಗಿಳಿದರೂ ಕರ್ನಾಟಕಕ್ಕೆ ಕಡಿವಾಣ ಹಾಕಲು ಆತಿಥೇಯರಿಂದ ಸಾಧ್ಯವಾಗಿಲ್ಲ. ಮಧ್ಯಮ ವೇಗಿಗಳಾದ ಧ್ರುವ ಪ್ರತಾಪ್‌ ಸಿಂಗ್‌ 2, ಆಕಾಶ್‌ದೀಪ್‌ ನಾಥ್‌ ಒಂದು ವಿಕೆಟ್‌ ಉರುಳಿಸಲು ಶಕ್ತರಾದರು.

ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಸುರೇಶ್‌ ರೈನಾ ಸಾರಥ್ಯದ ಉತ್ತರ ಪ್ರದೇಶ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯವಾಗಿತ್ತು. ಆದರೆ ವಿನಯ್‌ ಬಳಗದ ಬ್ಯಾಟಿಂಗ್‌ ವೈಭವ ಕಂಡಾಗ ಯುಪಿ ಸ್ಥಿತಿ ಮತ್ತೆ ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಿದೆ.

ಕೈತಪ್ಪಿದ ಹ್ಯಾಟ್ರಿಕ್‌ ಸೆಂಚುರಿ
ಕರ್ನಾಟಕದ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚದಿದ್ದುದು ಆರಂಭಕಾರ ಆರ್‌. ಸಮರ್ಥ್ ಮಾತ್ರ. ಅವರು 45 ಎಸೆತಗಳಿಂದ 16 ರನ್‌ ಮಾಡಿ ಔಟಾದರು. ಆದರೆ ಅಗರ್ವಾಲ್‌ ಜತೆ ಮೊದಲ ವಿಕೆಟಿಗೆ 14.3 ಓವರ್‌ಗಳಿಂದ 66 ರನ್‌ ಸೇರಿಸಿ ಉತ್ತಮ ಅಡಿಪಾಯ ನಿರ್ಮಿಸುವಲ್ಲಿ ಸಹಕರಿಸಿದ್ದರು.

ಮಹಾರಾಷ್ಟ್ರ ವಿರುದ್ಧ 304, ದಿಲ್ಲಿ ವಿರುದ್ಧ 176 ರನ್‌ ರಾಶಿ ಹಾಕಿದ್ದ ಮಾಯಾಂಕ್‌ ಅಗರ್ವಾಲ್‌ “ಗ್ರೀನ್‌ ಪಾರ್ಕ್‌’ ಅಂಗಳದಲ್ಲೂ ಶತಕದತ್ತ ದೌಡಾಯಿಸಿದರು. “ಹ್ಯಾಟ್ರಿಕ್‌ ಸೆಂಚುರಿ’ ಒಲಿಯಿತೆಂದೇ ಭಾವಿಸಲಾಯಿತು. ಆದರೆ ಈ ನಿರೀಕ್ಷೆ 90 ರನ್ನಿಗೆ ಸೀಮಿತಗೊಂಡಿತು. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಅಗರ್ವಾಲ್‌ ಕೇವಲ 73 ಎಸೆತ ಎದುರಿಸಿ 16 ಬೌಂಡರಿ ಸಿಡಿಸಿದರು. ಅಗರ್ವಾಲ್‌-ನಿಶ್ಚಲ್‌ ಜತೆಯಾಟದಲ್ಲಿ 2ನೇ ವಿಕೆಟಿಗೆ 55 ರನ್‌ ಒಟ್ಟುಗೂಡಿತು.

ನಿಶ್ಚಲ್‌; ಚೊಚ್ಚಲ ಶತಕ ನಿಶ್ಚಿತ?
ಅಗರ್ವಾಲ್‌ಗೆ ಒಲಿಯದ ಶತಕ ಶನಿವಾರ ವನ್‌ಡೌನ್‌ ಬ್ಯಾಟ್ಸ್‌ಮನ್‌ ಡಿ. ನಿಶ್ಚಲ್‌ ಅವರಿಗೆ ಒಲಿಯುವ ಸಾಧ್ಯತೆ ಇದೆ. ಕೇವಲ 2ನೇ ರಣಜಿ ಪಂದ್ಯವಾಡುತ್ತಿರುವ ನಿಶ್ಚಲ್‌ ತಾಳ್ಮೆಯ ಆಟದ ಮೂಲಕ 90 ರನ್‌ ಮಾಡಿ ಅಜೇಯರಾಗಿ ಉಳಿದಿದ್ದಾರೆ. 221 ಎಸೆತಗಳನ್ನು ಎದುರಿಸಿದ್ದು, 13 ಬೌಂಡರಿ ಹೊಡೆದಿದ್ದಾರೆ. ಇದೇ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ ನಿಶ್ಚಲ್‌ 16 ರನ್‌ ಮಾಡಿ ಔಟಾಗಿದ್ದರು. ಕೆ.ಎಲ್‌. ರಾಹುಲ್‌ ಅನುಪಸ್ಥಿತಿಯಲ್ಲಿ ಅವರಿಗೆ ಈ ಅವಕಾಶ ಸಿಕ್ಕಿದೆ.

ಅಗರ್ವಾಲ್‌ ನಿರ್ಗಮನದ ಬಳಿಕ ನಿಶ್ಚಲ್‌ 2 ಉಪಯುಕ್ತ ಜತೆಯಾಟದಲ್ಲಿ ಭಾಗಿಯಾದರು. ನಾಯರ್‌ ಜತೆ 3ನೇ ವಿಕೆಟಿಗೆ 115 ರನ್‌, ಪಾಂಡೆ ಜತೆ ಮುರಿಯದ 4ನೇ ವಿಕೆಟಿಗೆ 91 ರನ್‌ ಪೇರಿಸಿದ್ದಾರೆ. 

ನಾಯರ್‌, ಪಾಂಡೆ ಪರಾಕ್ರಮ
ಮಧ್ಯಮ ಕ್ರಮಾಂಕದ ಕರುಣ್‌ ನಾಯರ್‌ ಮತ್ತು ಮನೀಷ್‌ ಪಾಂಡೆ ಕೂಡ ಬ್ಯಾಟಿಂಗ್‌ ಪರಾಕ್ರಮವನ್ನು ಮುಂದುವರಿಸಿದ್ದು ಕರ್ನಾಟಕದ ಪಾಲಿಗೆ ಭಾರೀ ಲಾಭವಾಗಿ ಪರಿಣಮಿಸಿತು. ನಾಯರ್‌ 123 ಎಸೆತಗಳಿಂದ 62 ರನ್‌ ಮಾಡಿದರೆ (8 ಬೌಂಡರಿ), ಪಾಂಡೆ 79 ಎಸೆತಗಳಿಂದ 63 ರನ್‌ ಗಳಿಸಿ ಆಡುತ್ತಿದ್ದಾರೆ. ಪಾಂಡೆ ಬ್ಯಾಟಿನಿಂದ 9 ಬೌಂಡರಿ ಹಾಗೂ ಸರದಿಯ ಏಕೈಕ ಸಿಕ್ಸರ್‌ ಒಳಗೊಂಡಿದೆ.

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.