ಎಗ್ಗಿಲ್ಲದೆ ಸಾಗುತ್ತಿದೆ ಆಧಾರ್‌ ಸುಲಿಗೆ


Team Udayavani, Nov 22, 2017, 12:49 PM IST

m4-aadhar.jpg

ನಂಜನಗೂಡು: ಈಗ ಆಧಾರ್‌ ಕಾಲ ಪ್ರಸ್ತುತ ಸಮಾಜದ ಎಲ್ಲ ವ್ಯವಹಾರಗಳೀಗೂ ಆಧಾರ್‌ ಕಡ್ಡಾಯ ಮಾಡಿ ನಮ್ಮನ್ನಾಳುವ ಸರ್ಕಾರವೇ ಆದೇಶ ಹೊರಡಿಸಿರುವುದು ಜನರ ಸುಲಿಗೆಗೆ ದಾರಿಯಾಗಿದೆ.

ಆಧಾರ್‌ ನೋಂದಣಿ ಉಚಿತವಾಗಿದ್ದು ತಿದ್ದುಪಡಿಯಾದಲ್ಲಿ 25 ರೂ ಶುಲ್ಕ ಪಡೆಯಬಹುದು ಎಂಬ ನಿಯಮಾವಳಿಯೂ ಜಾರಿಯಲ್ಲಿದೆ
ಆದರೆ ಆಧಾರ್‌ ಈ ರಿಯಾಯಿತಿ ಪಡೆಯಬೇಕಾದ ಗ್ರಾಹಕ ಸುಲಿಗೆಗೆ ಒಳಗಾಗುತ್ತಿರುವುದು ನಮ್ಮ ವ್ಯವಸ್ಥೆಯ ದುಧೈವ.

ನಂಜನಗೂಡಿನಲ್ಲಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ 100 ಸುಲಿಗೆ ಮಾಡಲಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದಲ್ಲಿ ಅಂಚೆ ಕಚೇರಿಯಲ್ಲಿ ತಿದ್ದುಪಡಿಗೆ ಮಾತ್ರ ಅವಕಾಶವಿದ್ದು ರೂ 25 ಮಾತ್ರ ಪಡೆಯಲಾಗುತ್ತಿದೆ .ಆದರೆ ಖಾಸಗಿಯವರಲ್ಲಿ ಇದಕ್ಕೆ 100 ವಸೂಲಿ ಮಾಡಲಾಗುತ್ತಿದೆ.

ಸೇವೆಗೆ ಉಚಿತ ಜಾಗ ಆದರೆ ನಡೆಯುತ್ತಿರುವದು ಸುಲಿಗೆ. ಬ್ಯಾಂಕಿನ ಗ್ರಾಹಕರೂ ಸೇರಿದಂತೆ ಸಾರ್ವಜನಿಕರಿಗೆ ಆಧಾರ್‌ ನೋಂದಣಿ ಅಥವಾ ತಿದ್ದು ಪಡಿಯ ಸೇವೆ ಸುಗಮವಾಗಲಿ ಎಂಬ ಸದುದ್ದೇಶದಿಂದ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಜಾಗ ನೀಡಲಾಗಿದೆ ಆದರೆ ಬ್ಯಾಂಕಿನಿಂದ ಉಚಿತವಾಗಿ ಜಾಗ ಪಡಿದಿದ್ದರೂ ಇಲ್ಲಿ ಆಧಾರ್‌ ಫ‌ಲಾನುಭವಿಗಳಿಂದ ತಲಾ 100 ಪೀಕಲಾಗುತ್ತಿದೆ.

ಸೇವೆಗಾಗಿ ಜಾಗ ಸುಲಿಗೆಗಲ್ಲ: ಕೆನಾರಾ ಬ್ಯಾಂಕ್‌ ವ್ಯವಸ್ಥಾಪಕಿ ಭ್ಯಾಗ್ಯಲಕ್ಷ್ಮೀ ಬ್ಯಾಂಕಿನ ಆವರಣದಲ್ಲೇ ಸುಲಿಗೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇಲ್ಲಿ ಸೇವೆಗೆ ಮಾತ್ರ ಅವಕಾಶ ಸುಲಿಗೆಗೆ ಅಲ್ಲ ಎಂದು ಆಧಾರ್‌ ಸಿಬ್ಬಂದಿ ಕರೆದು ಛಿಮಾರಿ ಹಾಕಿದರು. ಗ್ರಾಹಕರಿಂದ 100 ರೂ. ಪಡೆಯುತ್ತಿರುವುದು ನಿಜ ರಸೀದಿ ಎಲ್ಲಿ ಎಂದಾಗ,

100 ರೂಗಳಲ್ಲಿ 25 ರೂ ಶುಲ್ಕ ಹಾಗೂ ಜಿ ಎಸ್‌ ಟಿ 5 ರೂ ಯಂತೆ ಲೆಕ್ಕ ಹಾಕಿ ಕಂಪನಿಯ ಖಾತೆ ಗೆ ಆಯಾ ದಿನದಲ್ಲೆ ಜಮಾ ಮಾಡಲಾಗುತ್ತಿದೆ ಎಂದಾಗ ಉಳಿದ 70 ರೂ ಎಲ್ಲಿ ಎಂದು ಅವರೆಂದಾಗ ಮಾಲಿಕರನ್ನೇ ಕೇಳಿ ಎಂಬ ಉತ್ತರ ಹೊರಬಿತ್ತು. ಯಾಕೆ ಈ ಪಾಟಿ ವಸೂಲಿ ಸುಲಿಗೆ ಎಂದು ಸಿಬ್ಬಂದಿಗೆ ದಬಾಯಿಸಿದರು. ಮೆಲಧಿಕಾರಿಯನ್ನು ವಿಚಾರಿಸುವುದಾಗಿ ತಿಳಿಸಿದರು.

ತಬ್ಬಿಬಾದ ಉಸ್ತುವಾರಿ: ತಕ್ಷಣ ಆಧಾರ್‌ದ ಉಸ್ತುವಾರಿ ವೀರಭದ್ರ ಸ್ವಾಮಿ ಸ್ಥಳಕ್ಕೆ ದೌಡಾಯಿಸಿ ಬಂದವರೆ ನಿಜ 100 ರೂ ಪಡೆಯಲಾಗಿದೆ ಅದು ತಪ್ಪು ನಾಳೆಯಿಂದ ಹೀಗಾಗಲು ಬಿಡುವುದಿಲ್ಲ ಎಂದರು. ಸರ್ಕಾರದ ಕೆಲಸಕ್ಕೂ ಜಿಎಸ್‌ಟಿ ಇದೆಯೇ ಎಂದು ಭಾಗ್ಯಲಕ್ಷ್ಮೀ ಪ್ರಶ್ನಿಸಿದಾಗ, ವೀರಭದ್ರಸ್ವಾಮಿ ತಡಬಡಾಯಿಸಿ ಕಲರ್‌ ಪ್ರಿಂಟ್‌ 50 ರೂ ಲ್ಯಾಮಿನೇಷನ್‌ ಗೆ 20 ರೂ ಸೇರಿಸಿ ಪಡೆಯಲಾಗುತ್ತಿದೆ, ಹಾಗದರೆ ಆ 70 ರೂಗಳಿಗೆ ಜಿ ಎಸ್‌ಟಿ ಯಾರು ಕಟ್ಟುತ್ತಾರೆ ಎಂಬ ಪ್ರಶ್ನೆಗೆ ನಿರುತ್ತರರಾದರು.

ಪರವಾನಗಿ ರದ್ದು: ಆಧಾರ್‌ ಗ್ರಾಹಕರಿಂದ 25 ರೂ ಪಡೆಯುವಲ್ಲಿ 100 ಪಡೆಯಲಾಗಿದೆ ಎಂಬ ದೂರು ಬಂದಲ್ಲಿ ಅವರ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಆಧಾರ್‌ದ ಜಿಲ್ಲಾ ಸಂಯೋಜಕಿ ಲಕ್ಷ್ಮೀ ಉದಯವಾಣಿಗೆ ತಿಳಿಸಿದರು ಹಾಗಾದರೆ ನಂಜನಗೂಡು ಗ್ರಾಹಕರಿಂದ ನಿಮ್ಮ ಏಜನ್ಸಿಯವರು ತಲಾ 100 ವಸೂಲಿ ಮಾಡಿದ್ದಾರೆ  ಅವರ ಹಣ ಹಿಂತಿರುಗಿಸಿ ಎಂಬ ಪಶ್ನೆಗೆ ಮೌನವಹಿಸಿದರು.

ಟಾಪ್ ನ್ಯೂಸ್

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.