ಚೆಂಬೂರು ಶ್ರೀ ಸುಬ್ರಹ್ಮಣ್ಯ ಮಠ: ಶ್ರೀಸ್ಕಂದ ಷಷ್ಠಿ
Team Udayavani, Nov 25, 2017, 4:55 PM IST
ಮುಂಬಯಿ: ಚೆಂಬೂರು ಛೆಡ್ಡಾ ನಗರದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀಸ್ಕಂದ ಷಷ್ಠಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನ. 23 ರಿಂದ ಪ್ರಾರಂಭಗೊಂಡಿದ್ದು, ನ. 25 ರವರೆಗೆ ಜರಗಲಿದೆ.
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದ ಹಾಗೂ ಮಾರ್ಗದರ್ಶನಗಳೊಂದಿಗೆ ಷಷ್ಠಿಉತ್ಸವವನ್ನು ಪ್ರತಿ ವರ್ಷದಂತೆಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದೇ ಪ್ರಕಾರ ನ. 23 ರಂದು ಮುಂಜಾನೆ 8ರಿಂದ ಪಂಚಾಮೃತ ಅಭಿಷೇಕ, ಪೂರ್ವಾಹ್ನ 9ರಿಂದ ಗಣಪತಿ ಹೋಮ, ಸ್ಕಂದಮಂತ್ರ ಹೋಮ, ಪವಮಾನ ಹೋಮ, ಕೂಷ್ಮಾಂಡ ಹವನ, ಮಹಾಪೂಜೆ ಇತ್ಯಾದಿ ಕಾರ್ಯಕ್ರಮಗಳು ನಡೆ ದವು. ಸಂಜೆ 5ರಿಂದ ಸ್ಕಂದ ಕಲಾಮಂಡಳಿಯವರಿಂದ ಭಜನ ಕಾರ್ಯ ಕ್ರಮ, ಸಂಜೆ 7.30 ರಿಂದ ಮಹಾಪೂಜೆ ಮತ್ತು ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.
ನ. 24ರಂದು ಮುಂಜಾನೆ 6ರಿಂದ ನೈರ್ಮಲ್ಯ ವಿಸರ್ಜನೆ, ಮುಂಜಾನೆ 8ರಿಂದ ಅಭಿಷೇಕ, ಪೂರ್ವಾಹ್ನ 9ರಿಂದ ಸಾಮೂಹಿಕ ಆಶ್ಲೇಷಾ ಬಲಿ, ಸಾಮೂಹಿಕ ಕಾಳಸರ್ಪಶಾಂತಿ, ಪೂರ್ವಾಹ್ನ 10 ರಿಂದ ಮಹಾಭಿಷೇಕ, ಮಧ್ಯಾಹ್ನ 12ರಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ತುಳು-ಕನ್ನಡಿಗರು ಸೇರಿದಂತೆ ನೂರಾರು ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕರಿಸಿ ನಾಗ ದೇವರ ಕೃಪೆಗೆ ಪಾತ್ರರಾದರು.
ಪೂರ್ವಾಹ್ನ 11ರಿಂದ ಸಂಜೆ 5ರವರೆಗೆ ಭಜನೆ, ಭರತನಾಟ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಸಂಜೆ 5ರಿಂದ ರಾಜಬೀದಿಯಲ್ಲಿ ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಭಜನ ವೃಂದ, ಪಂಚವಾದ್ಯ, ಚೆಂಡೆ, ನಾಗಸ್ವರವೇದ ಘೋಷಗಳೊಂದಿಗೆ ಪಲ್ಲಕ್ಕಿ ಉತ್ಸವ ಜರಗಿದ್ದು, ಭಕ್ತಾದಿಗಳು ಹೆಚ್ಚಿನಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಠದ ಕೃಷ್ಣರಾಜ್ ಉಪಾಧ್ಯಾಯ, ಶ್ರೀಪ್ರದಾದ್ ಭಟ್, ಶ್ರೀಧರ ಭಟ್, ವಿಷ್ಣು ಕಾರಂತ ನೇತೃತ್ವದಲ್ಲಿ ವಿವಿಧಪೂಜಾ ಕೈಂಕರ್ಯಗಳು ನೆರವೇರಿದವು.
ನ. 25ರಂದು ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಪಂಚವಿಶಂತಿ, ಕಲಶ ಪೂರ್ವಕ ಸಂಪ್ರೋಕ್ಷಣೆ ಮತ್ತು ಮಹಾಪೂಜೆ, ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕನಕ ಫರ್ಫಾರ್ಮೆನ್ಸ್ ಆರ್ಟ್ ಸೆಂಟರ್ ಮುಂಬಯಿ ಇದರ ಗುರು-ಶಿಷ್ಯವೃಂದದವರಿಂದ ಭರತ ನಾಟ್ಯಂ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ರಾತ್ರಿ 7.30ರಿಂದ ರಂಗಪೂಜೆ, ಪ್ರಸಾದ ವಿತರಣೆ ನೆರವೇರಲಿದ್ದು, ತುಳು-ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಮಠದ ಪ್ರಬಂಧಕರು ತಿಳಿಸಿದ್ದಾರೆ.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ