ಬಾಲಿವುಡ್‌ ದಂತಕತೆ ಶಶಿಕಪೂರ್‌ ಇನ್ನಿಲ್ಲ


Team Udayavani, Dec 5, 2017, 6:00 AM IST

Shashi-Kapoor.jpg

ಮುಂಬೈ: ಮನೆತನದ ಮತ್ತೂಂದು ಧ್ರುವತಾರೆ ಸೋಮವಾರ ಅಸ್ತಂಗತವಾಗಿದೆ. ಹಿರಿಯ ನಟ, ಬಾಲಿವುಡ್‌ ದಂತಕತೆ ಹಾಗೂ 2015ರ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಶಶಿಕಪೂರ್‌ (79) ನಿಧನರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, 2014ರಲ್ಲಿ ಹೃದಯ ಸೋಂಕಿಗೆ ಒಳಗಾಗಿದ್ದರು. ಇದು ಉಲ್ಬಣಗೊಂಡಿದ್ದರಿಂದ ಇತ್ತೀಚೆಗೆ ಅವರು ಬೈಪಾಸ್‌ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. 166 ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅವರು, ಕೆಲವು ಇಂಗ್ಲಿಷ್‌ ಚಿತ್ರಗಳಲ್ಲೂ ಅಭಿನಯಿಸಿದ್ದರು.

ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದ ಅವರು, 2011ರಲ್ಲಿ ಪದ್ಮಭೂಷಣ, 2015ರಲ್ಲಿ ದಾದಾ ಸಾಹೇಬ್‌ ಫಾಲ್ಕೆ ಪಡೆದಿದ್ದರು.

ಹಿನ್ನೋಟ:
ಹಿಂದಿ ಚಿತ್ರರಂಗದ ಮೇರು ಪರ್ವತಗಳಲ್ಲೊಂದಾದ ಪೃಥ್ವಿರಾಜ್‌ ಕಪೂರ್‌  (ಕನ್ನಡದ “ಸಾûಾತ್ಕಾರ’ ಚಿತ್ರದಲ್ಲಿ ಡಾ.ರಾಜ್‌ ಅವರ ತಂದೆಯ ಪಾತ್ರ ಮಾಡಿದ್ದರು)ಗರಡಿಯಲ್ಲಿ ಪಳಗಿದ ಅವರ ಮೊದಲಿಬ್ಬರು ಮಕ್ಕಳಾದ ರಾಜ್‌ ಕಪೂರ್‌ ಹಾಗೂ ಶಮಿ ಕಪೂರ್‌ ಅಕ್ಷರಶಃ ಬಾಲಿವುಡ್‌ ಚಿತ್ರರಂಗವನ್ನು ಆಳಿದವರು. ಅವರ ನೆರಳಿನಲ್ಲೇ ಬಂದ ಶಶಿಕಪೂರ್‌, ಪೃಥ್ವಿರಾಜ್‌ ಅವರ ಮೂರನೇ ಹಾಗೂ ಕಿರಿಯ ಪುತ್ರ. ಅಷ್ಟೇ ಅಲ್ಲ, 1960, 70ರ ದಶಕದಲ್ಲಿ ಆಗಿನ ಹುಡುಗಿಯರ ಡ್ರೀಮ್‌ ಬಾಯ್‌ ಆಗಿದ್ದ ಶಶಿಕಪೂರ್‌, ಹಿಂದಿಯ ಮೊದಲ ಚಾಕ್ಲೇಟ್‌ ಹೀರೋ ಇಮೇಜ್‌ ಪಡೆದವರು.

ಸಿನಿಮಾ ವಾತಾವರಣದಲ್ಲೇ ಬೆಳೆದ ಅವರು, ತಮ್ಮ ಮೂರನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. 40ರ ದಶಕದ ಆರಂಭದಲ್ಲಿ ಅವರು ತಮ್ಮ ತಂದೆಯ ನಿರ್ಮಾಣದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಆನಂತರ, 1950ರಲ್ಲಿ ತೆರೆಕಂಡ ಸಂಗ್ರಾಮ್‌, 1953ರಲ್ಲಿ ತೆರೆಕಂಡ ದಾನಾ ಪಾನಿ ಚಿತ್ರಗಳ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಾಲನಟನಾಗಿ ಅವರಿಗೆ ಹೆಸರು ತಂದಿದ್ದು ಆಗ್‌ (1948) ಹಾಗೂ ಆವಾರಾ (1951).

ಚಿತ್ರಗಳಲ್ಲಿ ನಾಯಕರಾಗಿ ಮಿಂಚುವುದಕ್ಕೂ ಮೊದಲು ಅವರು ಸಹಾಯಕ ನಿರ್ದೇಶಕರಾಗಿ ತಮ್ಮ ಸಂಸ್ಥೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅವುಗಳಲ್ಲಿ ಪೋಸ್ಟ್‌ ಬಾಕ್ಸ್‌ 999, ಗೆಸ್ಟ್‌ ಹೌಸ್‌ ಪ್ರಮುಖವಾದವು. ಆನಂತರ, ಧರ್ಮಪುತ್ರ (1961) ಚಿತ್ರದ ಮೂಲಕ ಅವರು ನಾಯಕರಾಗಿ ಕಾಣಿಸಿಕೊಳ್ಳಲಾರಂಭಿಸಿದರು. 116 ಚಿತ್ರಗಳ ಅವರ ಸಿನಿಜೀವನದಲ್ಲಿ “ನಮಕ್‌ ಹಲಾಲ್‌’, “ಸತ್ಯಂ ಶಿವಂ ಸುಂದರಂ’, “ದೀವಾರ್‌’ ಹಾಗೂ “ವಖ್‌¤’ ಚಿತ್ರಗಳು ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ ಚಿತ್ರಗಳು.

1958ರಲ್ಲಿ ಇಂಗ್ಲೆಂಡ್‌ ಮೂಲದ ಜೆನ್ನಿಫ‌ರ್‌ ಕೆಂದಾಲ್‌ ಅವರನ್ನು ವಿವಾಹವಾಗಿದ್ದ ಶಶಿಕಪೂರ್‌, ಕುನಾಲ್‌ ಕಪೂರ್‌, ಕರಣ್‌ ಕಪೂರ್‌ ಹಾಗೂ ಸಂಜನಾ ಕಪೂರ್‌ ಎಂಬ ಮಕ್ಕಳನ್ನು ಅಗಲಿದ್ದಾರೆ. ಜೆನ್ನಿಫ‌ರ್‌ 1984ರಲ್ಲೇ ನಿಧನರಾಗಿದ್ದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.