ಗುಜರಾತಿ ಖಾದ್ಯ ಪ್ರೀತಿಯಿಂದಾಗಿ ನಾನೀಗ ಧಡಿಯ: ರಾಹುಲ್
Team Udayavani, Dec 5, 2017, 3:53 PM IST
ಅಂಜಾರ್ : “ನನ್ನ ಮನೆಯ ಅಡುಗೆ ಕೋಣೆ ಗುಜರಾತಿ ಖಾದ್ಯಗಳಿಂದ ತುಂಬಿ ಹೋಗಿದೆ; ಸ್ವಾದಿಷ್ಟ ಗುಜರಾತಿ ಖಾದ್ಯಗಳ ಮೇಲಿನ ಪ್ರೀತಿಯಿಂದಾಗಿ ನಾನೀಗ ಧಡಿಯನಾಗಿದ್ದೇನೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
“ನಿನ್ನೆಯುಷ್ಟೇ ನನ್ನ ತಂಗಿ ನನ್ನ ಮನೆಗೆ ಬಂದಿದ್ದಳು. ನನ್ನ ಅಡುಗೆ ಕೋಣೆ ಗುಜರಾತಿ ಆಹಾರಗಳಿಂದ (ಖಕ್ರಾ ಗುಜರಾತಿ, ಅಚಾರ್ ಗುಜರಾತಿ, ಮೂಂಗ್ಫಾಲಿ ಗುಜರಾತಿ) ತುಂಬಿರುವುದನ್ನು ಆಕೆ ಕಂಡಳು. ನಿಮ್ಮ ಗುಜರಾತಿ ಆಹಾರ ನನ್ನನ್ನು ಸಂಪೂರ್ಣವಾಗಿ ಕೆಡಿಸಿದೆ. ನನ್ನ ದೇಹ ತೂಕ ಜಾಸ್ತಿಯಾಗಿದೆ; ನಾನೀಗ ಧಡಿಯನಾಗಿದ್ದೇನೆ’ ಎಂದು ರಾಹುಲ್ ಜನಸಮೂಹವನ್ನು ಉದ್ದೇಶಿಸಿ ಹೇಳಿದರು.
ಗುಜರಾತ್ ಅಭಿವೃದ್ಧಿಗೆ ಒತ್ತು ಕೊಡುವುದನ್ನು ಬಿಟ್ಟು ಕಾಂಗ್ರೆಸ್ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ದೃಷ್ಟಿ ನೆಟ್ಟಿದ್ದಾರೆ ಎಂದು ರಾಹುಲ್ ಕೋಪ ವ್ಯಕ್ತಪಡಿಸಿದರು.
“ನಿನ್ನೆಯಷ್ಟೇ ನಾನು ಮೋದೀ ಜೀ ಅವರು ಭಾಷಣ ಕೇಳಿದೆ. ಅವರ ಭಾಷಣದ ಶೇ.60ರಷ್ಟು ಭಾಗ ನನ್ನ ಮತ್ತು ಕಾಂಗ್ರೆಸ್ ಬಗ್ಗೆಯೇ ಇತ್ತು. ಈ ಚುನಾವಣೆ ನಿಜಕ್ಕೂ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಂಬಂಧಿಸಿದ್ದಲ್ಲ; ಬದಲಾಗಿ ಗುಜರಾತ್ ಮತ್ತು ಅದರ ಜನರ ಭವಿಷ್ಯಕ್ಕೆ ಸಂಬಂಧಿಸಿದೆ’ ಎಂದು ರಾಹುಲ್ ಹೇಳಿದರು.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಗುಜರಾತ್ಗೆ ರಾಹುಲ್ ಅವರು ತಮ್ಮ 7ನೇ ಭೇಟಿಯಲ್ಲೀಗ ವ್ಯಸ್ತರಾಗಿದ್ದಾರೆ. ಈ ಭೇಟಿಗಳಲ್ಲಿ ಅವರು ಗುಜರಾತ್ನ ಪ್ರಸಿದ್ಧ ಸೋಮನಾಥ ದೇವಾಲಯ ಸೇರಿದಂತೆ ಹಲವು ದೇಗುಲಗಳನ್ನು ಸಂದರ್ಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ