ಭಯೋತ್ಪಾದಕ ಕೃತ್ಯಗಳಿಗೆ ಸರ್ಕಾರದಿಂದ ಪೋಷಣೆ
Team Udayavani, Dec 15, 2017, 6:25 AM IST
ಶಿರಸಿ: ಭಯೋತ್ಪಾದಕ ಕೃತ್ಯಗಳಿಗೆ ರಾಜ್ಯ ಸರಕಾರವೇ ಪೋಷಣೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ದುಷ್ಕೃತ್ಯಗಳಿಗೆ ಸರಕಾರವೇ ಬೆಂಬಲ ನೀಡುತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟ ಸರಕಾರವನ್ನು ಮನೆಗೆ ಕಳಿಸುವ ತನಕ ಅನಿರ್ದಿಷ್ಟ ಅವಧಿಯ ಜೈಲ್ ಭರೋ ಚಳವಳಿಯನ್ನು ಡಿ.19ರಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲೂ ಮಾಡಲಾಗುತ್ತದೆ ಎಂದರು. ಸಿದ್ದರಾಮಯ್ಯ ನೇತೃತ್ವವನ್ನು ಅವರ ಪಕ್ಷದ ಕೆಪಿಸಿಸಿ ಅಧ್ಯಕ್ಷರೇ ಸಹಿಸುತ್ತಿಲ್ಲ ಎಂದು ಹೇಳಿದರು. ಅನಂತಕುಮಾರ ಹೆಗಡೆ ಸಚಿವನಾಗಲು ಅನರ್ಹ ಎನ್ನುವ ಸಿದ್ದರಾಮಯ್ಯ ಅವರು ಮೊದಲು ಸಿಎಂ ಸ್ಥಾನದಲ್ಲಿ ಕುಳಿತುಕೊಳ್ಳಲು ಅರ್ಹರೇ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಬಿಜೆಪಿಗರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮೇಲೆ ಲೋಕಾಯುಕ್ತದ 57 ಮತ್ತು 27 ಪೊಲೀಸ್ ಪ್ರಕರಣಗಳಿವೆ. ಅತಿ ಹೆಚ್ಚು ಪ್ರಕರಣ ಇರುವ ಸಿಎಂ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Speed Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!
BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್ ಜಾಮ್
Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ
Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್ ಮಾಡಿಸಲು ಕ್ರಮ: ಪರಂ
Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫಲ್ಯ ಕಾರಣ: ಅಶೋಕ್