ರಣಜಿ ಫೈನಲ್‌: ಶೋರೆ ಶತಕ ಶೌರ್ಯ; ದಿಲ್ಲಿ ಚೇತರಿಕೆ


Team Udayavani, Dec 30, 2017, 6:20 AM IST

Ranji-Trophy-final,Delhi-vs.jpg

ಇಂದೋರ್‌: ವನ್‌ಡೌನ್‌ ಬ್ಯಾಟ್ಸ್‌ಮನ್‌ ಧ್ರುವ ಶೋರೆ ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಸಾಹಸದಿಂದ ದೊಡ್ಡ ಆತಂಕದಿಂದ ಪಾರಾದ ದಿಲ್ಲಿ ತಂಡ, ವಿದರ್ಭ ಎದುರಿನ ರಣಜಿ ಫೈನಲ್‌ ಪಂದ್ಯದ ಮೊದಲ ದಿನ 6 ವಿಕೆಟಿಗೆ 271 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿದೆ. ಶತಕ ಶೌರ್ಯ ಮೆರೆದ ಶೋರೆ 123 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಟಾಸ್‌ ಗೆದ್ದ ವಿದರ್ಭ ಮೊದಲು ಬೌಲಿಂಗ್‌ ಆಕ್ರಮಣವನ್ನೇ ನೆಚ್ಚಿಕೊಂಡಿತು. ಇದರಲ್ಲಿ ಭರ್ಜರಿ ಯಶಸ್ಸನ್ನೂ ಸಾಧಿಸಿತು. 99 ರನ್ನಿಗೆ ದಿಲ್ಲಿಯ 4 ವಿಕೆಟ್‌ ಉರುಳಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ ಧ್ರುವ ಶೋರೆ ಮತ್ತು ಹಿಮ್ಮತ್‌ ಸಿಂಗ್‌ ಅವರ ಜವಾಬ್ದಾರಿಯುತ ಜತೆಯಾಟದಿಂದ ದಿಲ್ಲಿ ಚೇತರಿಕೆಯ ಹಾದಿ ಹಿಡಿಯಿತು. ಇವರು 5ನೇ ವಿಕೆಟಿಗೆ 105 ರನ್‌ ಪೇರಿಸಿದರು. ಸಾಹಸಮಯ ಆಟವಾಡಿದ ಹಿಮ್ಮತ್‌ ಕೊಡುಗೆ 66 ರನ್‌.

ಬಲಗೈ ಬ್ಯಾಟ್ಸ್‌ಮನ್‌ ಧ್ರುವ ಶೋರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಾರಿಸಿದ 3ನೇ ಶತಕ ಇದಾಗಿದೆ. ಜತೆಗೆ ಇದು ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಕೂಡ ಹೌದು. 256 ಎಸೆತಗಳನ್ನು ದಿಟ್ಟತನದಿಂದ ನಿಭಾಯಿಸಿರುವ ಶೋರೆ 17 ಬೌಂಡರಿಗಳ ನೆರವಿನಿಂದ ಈ ಅತ್ಯಮೂಲ್ಯ ಇನ್ನಿಂಗ್ಸ್‌ ಕಟ್ಟಿದ್ದಾರೆ.

21ರ ಹರೆಯದ, ಕೇವಲ 5ನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವ ಹಿಮ್ಮತ್‌ ಸಿಂಗ್‌ ಆಟ ಬಹಳ ಆಕ್ರಮಣಕಾರಿ ಆಗಿತ್ತು. ವಿದರ್ಭ ಬೌಲರ್‌ಗಳ ಮೇಲೆರಗಿ ಹೋದ ಅವರು ಕೇವಲ 72 ಎಸೆತಗಳಿಂದ 66 ರನ್‌ ಸಿಡಿಸಿದರು. 8 ಬೌಂಡರಿ ಜತೆಗೆ 2 ಸಿಕ್ಸರ್‌ ಇದರಲ್ಲಿ ಸೇರಿತ್ತು.

ಇವರಿಬ್ಬರನ್ನು ಹೊರತುಪಡಿಸಿದರೆ ದಿಲ್ಲಿ ಸರದಿಯಲ್ಲಿ ಯಾರೂ ದೊಡ್ಡ ಮೊತ್ತ ದಾಖಲಿಸಲಿಲ್ಲ. ಭರವಸೆಯ ಆಟಗಾರ ನಿತೀಶ್‌ ರಾಣ, ನಾಯಕ ರಿಷಬ್‌ ಪಂತ್‌ ತಲಾ 21 ರನ್‌ ಮಾಡಿದರು. ಟೀಮ್‌ ಇಂಡಿಯಾದ ಮಾಜಿ ಆರಂಭಕಾರ ಗೌತಮ್‌ ಗಂಭೀರ್‌ ಗಳಿಕೆ ಕೇವಲ 15 ರನ್‌. ಶೋರೆ ಜತೆ 5 ರನ್‌ ಮಾಡಿರುವ ವಿಕಾಸ್‌ ಮಿಶ್ರ ಕ್ರೀಸಿನಲ್ಲಿದ್ದಾರೆ.

ಮೊದಲ ಓವರಲ್ಲೇ ಆಘಾತ
ವಿದರ್ಭದ ಪ್ರಧಾನ ಬೌಲರ್‌ ರಜನೀಶ್‌ ಗುರ್ಬಾನಿ ಆರಂಭದಲ್ಲಿ ಯಶಸ್ಸು ಕಾಣಲಿಲ್ಲ. ಬಳಿಕ ಪಂತ್‌ ಹಾಗೂ ಹಿಮ್ಮತ್‌ ಸಿಂಗ್‌ ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾದರು. ಆರಂಭಿಕ ಆಘಾತವಿಕ್ಕಿದ ಆದಿತ್ಯ ಠಾಕ್ರೆ ಕೂಡ 2 ವಿಕೆಟ್‌ ಕಿತ್ತರು. ಇದು ಠಾಕ್ರೆ ಅವರ ಪಾದಾರ್ಪಣಾ ಪ್ರಥಮ ದರ್ಜೆ ಪಂದ್ಯ. ವಿದರ್ಭ ಪರ ದಾಳಿ ಆರಂಭಿಸಿದ ಅವರು 4ನೇ ಎಸೆತದಲ್ಲೇ ಕುಣಾಲ್‌ ಚಾಂಡೇಲ (0) ವಿಕೆಟ್‌ ಹಾರಿಸಿ ಮೆರೆದರು. ರಾಣ ವಿಕೆಟ್‌ ಕೂಡ ಠಾಕ್ರೆ ಪಾಲಾಯಿತು.

ಉಳಿದೆರಡು ವಿಕೆಟ್‌ಗಳನ್ನು ಸಿದ್ದೇಶ್‌ ನೆರಾಲ್‌ ಮತ್ತು ಅಕ್ಷಯ್‌ ವಖಾರೆ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ದಿಲ್ಲಿ ಪ್ರಥಮ ಇನ್ನಿಂಗ್ಸ್‌-6 ವಿಕೆಟಿಗೆ 271 (ಶೋರೆ ಬ್ಯಾಟಿಂಗ್‌ 123, ಹಿಮ್ಮತ್‌ ಸಿಂಗ್‌ 66, ರಾಣ 21, ಪಂತ್‌ 21, ಗಂಭೀರ್‌ 15, ಮನನ್‌ ಶರ್ಮ 13 (ಗುರ್ಬಾನಿ 44ಕ್ಕೆ 2, ಠಾಕ್ರೆ 65ಕ್ಕೆ 2).

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.