ಪರ್ಯಾಯದಲ್ಲಿ ಪಾಲ್ಗೊಳ್ಳಿ: ಪಲಿಮಾರು ಶ್ರೀ
Team Udayavani, Dec 31, 2017, 9:44 AM IST
ಕಟೀಲು: ಉಡುಪಿ ಪರ್ಯಾಯಕ್ಕೆ ಸರ್ವರೂ ಬಂದು ಕೃಷ್ಣನ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹೇಳಿದರು. ಅವರು ಡಿ. 30 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿಮಂತ್ರಾಕ್ಷತೆಯನ್ನು ನೀಡಿದರು. ಈ ಸಂದರ್ಭ ದೇಗುಲದಲ್ಲಿ ಭಕ್ತರಿಗೆ ಪರ್ಯಾಯದ ಆಹ್ವಾನ ನೀಡಿದರು.
ಜ.15ರಂದು ಕಟೀಲು ದೇಗುಲದಿಂದ ಹೊರಡಲಿರುವ ಹೊರಕಾಣಿಕೆಯ ಕಚೇರಿಯನ್ನು ಉದ್ಘಾಟಿಸಿದ ಸ್ವಾಮೀಜಿ, ಪರ್ಯಾಯದ ದಿನದ ಅನ್ನಸಂತರ್ಪಣೆಯ ಸಂಪೂರ್ಣ ವೆಚ್ಚವನ್ನು ಭರಿಸಲಿರುವ ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರನ್ನು ಅಭಿನಂದಿಸಿದರು. ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ವೇದವ್ಯಾಸ ತಂತ್ರಿ, ಕೊಡೆತ್ತೂರು ದೇವಿ ಪ್ರಸಾದ ಶೆಟ್ಟಿ, ಕೆ.ವಿ. ಶೆಟ್ಟಿ, ಅತ್ತೂರು ಪ್ರಸನ್ನ ಶೆಟ್ಟಿ, ಭುವನಾಭಿರಾಮ ಉಡುಪ, ತಿಮ್ಮಪ್ಪ ಕೋಟ್ಯಾನ್ ಮುಂತಾದವರಿದ್ದರು.