ಅಶೋಕ್ ಆರೋಪ ಸತ್ಯಕ್ಕೆ ದೂರ: ಬಿ.ಎಲ್. ಶಂಕರ್
Team Udayavani, Jan 4, 2018, 6:15 AM IST
ಬೆಂಗಳೂರು: ಲಾಲ್ಬಾಗ್ ಪಕ್ಕ ಸಿದ್ದಾಪುರದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಜಮೀನನ್ನು ಮುಖ್ಯಮಂತ್ರಿ ಡಿ ನೋಟಿಫೈ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಹೇಳಿದ್ದಾರೆ.
ಸರ್ವೆ ನಂಬರ್ 27/1, 28/4, 5, 6 ಭೂಮಿಯನ್ನು ಪ್ರೀತಿ ರಂಕ ಎಂಬುವವರು 2011 ರಲ್ಲಿ ಖಾಲಿ ಜಾಗ ಮತ್ತ ಪಾರ್ಕ್ ಭೂಮಿಯಲ್ಲಿ ಕೆಟಿಸಿಪಿ ಕಾಯ್ದೆ ಅನ್ವಯ 39 ಗುಂಟೆ ಜಾಗವನ್ನು ವಾಸಯೋಗ್ಯ ನಿವೇಶವನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದರು. 1948ರಲ್ಲಿ ಕನಕನ ಪಾಳ್ಯ ಬಡಾವಣೆಗೆ ಸೇರಿದ್ದ ಈ ಜಾಗವನ್ನು 1954 ರಲ್ಲಿ ಅಧಿಸೂಚನೆಯಿಂದ ವಾಪಸ್ ಪಡೆದು ಮೈಸೂರು ಗೆಜೆಟ್ನಲ್ಲಿ ಡಿನೋಟಿಫಿಕೇಶನ್ ಆದೇಶ ಹೊರಡಿಸಲಾಯಿತು. 1995 ರಲ್ಲಿ ಅದನ್ನು ವಾಸಯೋಗ್ಯ ನಿವೇಶನ ಎಂದು ಪರಿಗಣಿಸಲಾಯಿತು. ಆದರೆ 2015 ರಲ್ಲಿ ಅದನ್ನು ಉದ್ಯಾನ ಮತ್ತು ಖಾಲಿ ಜಾಗ ಎಂದು ಗುರುತಿಸಲಾಯಿತು.
2014 ರಲ್ಲಿ ಸರ್ಕಾರ ಭೂ ಪರಿವರ್ತನೆಗೆ ಆದೇಶ ನೀಡಿ 2015 ರಲ್ಲಿ ಆದೇಶವನ್ನು ಹಿಂಪಡೆದಿದೆ. ಭೂ ಪರಿವರ್ತನೆ ಆದೇಶ ಹಿಂಪಡೆದಿರುವ ಸರ್ಕಾರದ ಆದೇಶವನ್ನು ಪ್ರೀತಿಯವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಕೋರ್ಟ್ನಲ್ಲಿ ಅರ್ಜಿದಾರರ ಪರವಾಗಿ ಆದೇಶವಾಗಿದೆ. ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಆಕಾಶ್ ರಂಕಾ ಎನ್ನುವವರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಈಗ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಬಿಜೆಪಿ ಮುಖಂಡ ಆರ್. ಅಶೋಕ್ ಅವರು ಯಾವುದೇ ಆಧಾರ ಇಲ್ಲದೆ ಮೇಲ್ಮೋಟಕ್ಕೆ ದೊರೆತ ದಾಖಲೆಗಳನ್ನಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಅವರನ್ನು ಮೆಚ್ಚಿಸಲು ಅಶೋಕ್ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಬಿ.ಎಲ್. ಶಂಕರ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ