ಶ್ರೀರಂಗಪಟ್ಟಣದಲ್ಲೊಂದು ಜನಸ್ನೇಹಿ ಪೊಲೀಸ್‌ ಠಾಣೆ


Team Udayavani, Jan 7, 2018, 5:55 PM IST

mandya.jpg

ಶ್ರೀರಂಗಪಟ್ಟಣ: ಸಾಮಾನ್ಯವಾಗಿ ಪೊಲೀಸ್‌ ಠಾಣೆ ಎಂದರೆ ಬೆಚ್ಚಿ ಬೀಳುವ ಈ ಕಾಲದಲ್ಲಿ ಠಾಣೆಗೆ ಬಂದವರನ್ನು ಅಕ್ಕರೆಯಿಂದ ಮಾತನಾಡಿಸಿ, ಸ್ನೇಹಪೂರ್ವಕವಾಗಿ ವರ್ತಿಸಿ ಮಾಹಿತಿ ಪಡೆಯುವ ಸಿಬ್ಬಂದಿ ಹೊಂದಿರುವ ಜನಸ್ನೇಹಿ ಪೊಲೀಸ್‌ ಠಾಣೆ ಇಲ್ಲೊಂದಿದೆ. ಅದುವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆ.

ದೂರುದಾರರಿಗೆ ಸಾಂತ್ವನ: ಕ್ಷುಲ್ಲಕ ಕಾರಣಕ್ಕೆ ಜಗಳ, ಗಲಾಟೆ ಮಾಡಿಕೊಂಡು, ಜಮೀನು ಒತ್ತುವರಿ ಸೇರಿದಂತೆ ಇತರೆ ಸಮಸ್ಯೆಗಳ ದೂರುಗಳನ್ನು ಹೊತ್ತು ಪೊಲೀಸ್‌ ಠಾಣೆಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ಠಾಣೆಗೆ ಬಂದ ವ್ಯಕ್ತಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಸಂದರ್ಶಕರೊಬ್ಬರು ಅವರನ್ನು ಆತ್ಮೀಯವಾಗಿ
ಸ್ವಾಗತಿಸಿ ಸಮಾಧಾನ ಹೇಳುವುದು ಈ ಠಾಣೆಯ ಮಾರ್ಗದರ್ಶಿ ಹಾಗೂ ವರಾಹಿತಿ ನೀಡುವ ಸಂದರ್ಶಕ ಸಿಬ್ಬಂದಿಯ ಕೆಲಸವಾಗಿದೆ. 

ಸೌಹಾರ್ದತೆ ಮೂಡಿಸುವ ಕೆಲಸ: ಮರುದಿನ ದಿನ ದೂರುದಾರ ಹಾಗೂ ಆರೋಪಿ ಇಬ್ಬರನ್ನೂ ಠಾಣೆಗೆ ಕರೆಸಿ ಸತ್ಯಾಂಶಗಳನ್ನು ಠಾಣೆಯ ಸಿಬ್ಬಂದಿಗಳೇ ತಿಳಿಸಿ, ಒಬ್ಬರಿಗೊಬ್ಬರು ದ್ವೇಷ-ಅಸೂಯೆ ಬಿಟ್ಟು ಪರಸ್ಪರ ಸೌಹಾರ್ದತೆ ಬೆಳೆಸಿಕೊಳ್ಳಲು ಸಮಾಲೋಚನೆ ನಡೆಸುವ ಠಾಣೆಯ ಸಿಬ್ಬಂದಿ ಈ ಭಾಗದ ಜನರಿಗೆ ಜನಸ್ನೇಹಿಯಾಗಿದೆ.

ಠಾಣೆ ಸೌಲಭ್ಯಗಳೇನು? ಠಾಣೆಗೆ ಬಂದ ಜನರಿಗೆ ನೆರಳಿನಿಂದ ಕೂಡಿದ ವಿಶ್ರಾಂತಿ ಹಾಗೂ ಸಂದರ್ಶಕರ ಕೊಠಡಿ, ಗಾಳಿ, ಬೆಳಕು ಸಿಗುವ ವಾತಾವರಣ, ಠಾಣೆಗೆ ಬಂದ ಸಂದರ್ಶಕರಿಗೆ ಶುದ್ಧ ಕುಡಿಯುವ ನೀರು, ಕುಳಿತು ವಿಶ್ರಾಂತಿ ಪಡೆಯಲು ಸುಸಜ್ಜಿತ ಆಸನಗಳು, ಫ್ಯಾನ್‌, ಓದಲು ಕಿರು ಗ್ರಂಥಾಲಯ, ಮನರಂಜನೆಗೆ ಟೀವಿ, ಓದಲು ದಿನಪತ್ರಿಕೆಗಳು, ಕಾನೂನು ಕುರಿತ ಮಾಹಿತಿ ಪುಸ್ತಕಗಳು, ಕಾನೂನು ಅರಿವಿನ ತಿಳಿವಳಿಕೆಯ ಸಂದೇಶಗಳು, ಇದಲ್ಲದೇ ವಿಶ್ರಾಂತ ಕೊಠಡಿಯ ಗೋಡೆ ಸುತ್ತಲೂ ಬರಹಗಳಲ್ಲಿ ವಿವಿಧ ಅಗತ್ಯವಾದ ಮಾಹಿತಿ ಪ್ರಕಟಣೆ, ಹೆಲ್ಮೆಟ್‌ ಧರಿಸುವುದು, ವಾಹನ ಚಾಲನೆ ಮಾಡುವಾಗ ಸೀಟ್‌ ಬೆಲ್ಟ್ ಹಾಕುವುದು ಈ ಬಗ್ಗೆ ಮಾಹಿತಿಗಳ ಬಿತ್ತಿ ಚಿತ್ರಗಳು ಸೇರಿದಂತೆ ಸಂದರ್ಶಕರ ಕೊಠಡಿ, ಠಾಣೆ ಮುಂದೆ ಕಿರು ಉದ್ಯಾನವನ ಸದ್ಯದಲ್ಲಿ ಹಸಿರು ಹಾಸಿನ ಹುಲ್ಲು ಬೆಳೆಯುತ್ತಿಗೆ ಸಣ್ಣ ಜಲಧಾರೆಯ ಮಧ್ಯೆ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಸಜ್ಜಾಗುತ್ತಿಗುತ್ತಿದೆ. ಜಿಲ್ಲೆಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆ.

ಠಾಣೆಗೆ ನೆರಳಾದವರು: ಠಾಣೆ ಪಕ್ಕದಲ್ಲಿರುವ ಎಂ.ಕೆ.ಆಗ್ರೋ ಇಂಡಸ್ಟ್ರೀಸ್‌, ಸನ್‌ ಪ್ಯೂರ್‌ ಆಯಲ್‌ ಕಂಪನಿಯ ವ್ಯವಸ್ಥಾಪಕರು ಈ ಠಾಣೆಗೆ ನೆರಳಾಗಿ, ಬಂದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಮಾಹಿತಿ ಕೇಂದ್ರವನ್ನು
ಇತರೆ ಸಂದೇಶಗಳನ್ನು ಅಳವಡಿಸಿಕೊಟ್ಟಿದ್ದಾರೆ. ಸಂದರ್ಶಕರ ಕೊಠಡಿಯನ್ನೂ ನಿರ್ಮಿಸಿ ಕೊಟ್ಟು ಇಲ್ಲಿನ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸೌಲಭ್ಯ ಕಲ್ಪಿಸಿಕೊಡುವಲ್ಲಿ ಪೊಲೀಸ್‌ ಇಲಾಖೆಯ ಪಾತ್ರವೂ ಇದೆ.

ಸಿಬ್ಬಂದಿ ಕಾಳಜಿಯಿಂದ ಜನಸ್ನೇಹಿ ಠಾಣೆ ಠಾಣೆಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಠಾಣೆಗೆ ಬರುವ ದೂರುದಾರರಿಗೆ ಸೂಕ್ತ ಮಾಹಿತಿ ನೀಡಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು. ಸಹಾಯವಾಣಿಯಂತೆ ದೂರು ಗಳನ್ನು ಪರಿಶೀಲಿಸಿ, ಸಂದರ್ಶಕರಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ. ದೂರುದಾರರಿಗೆ ಮಾಹಿತಿ ನೀಡಿ ಠಾಣೆಯಲ್ಲಿ ಪ್ರಕರಣಗಳನ್ನು ಆಯಾ ಸಿಬ್ಬಂದಿಗೆ ಒಪ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಚಾಲ್ತಿಗೆ ಬಂದಿದೆ. ಠಾಣೆಯಲ್ಲಿ ಮೂಲ ಸೌಲಭ್ಯಗಳಿಗೂ ಒತ್ತು ನೀಡಲಾಗಿದೆ. ಅಲ್ಲಿನ ಸಿಬ್ಬಂದಿಯ ಕಾಳಜಿಯಿಂದ ಉತ್ತಮ ಜನಸ್ನೇಹಿ ಠಾಣೆಯಾಗಿದೆ.
 ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಂಡ್ಯ

ಕಿ ಗಂಜಾಂ ಮಂಜು
 

ಟಾಪ್ ನ್ಯೂಸ್

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.