ರಬಾಡ: ವಿಶ್ವದ ನಂ.1 ಟೆಸ್ಟ್‌  ಬೌಲರ್‌


Team Udayavani, Jan 10, 2018, 1:00 PM IST

10-31.jpg

ದುಬಾೖ: ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೊ ರಬಾಡ ಮೊದಲ ಬಾರಿಗೆ ನಂಬರ್‌ ವನ್‌ ಟೆಸ್ಟ್‌ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಈ ವರೆಗೆ ನಂ.1 ಆಗಿದ್ದ ಇಂಗ್ಲೆಂಡಿನ ಜೇಮ್ಸ್‌ ಆ್ಯಂಡರ್ಸನ್‌ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕೇಪ್‌ಟೌನ್‌ ಟೆಸ್ಟ್‌ ಪಂದ್ಯ ಮುಗಿದೊಡನೆ ಐಸಿಸಿ ರ್‍ಯಾಂಕಿಂಗ್‌ ಯಾದಿಯನ್ನು ಪರಿಷ್ಕರಿಸಲಾಯಿತು.

22ರ ಹರೆಯದ ರಬಾಡ ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಒಟ್ಟು 5 ವಿಕೆಟ್‌ ಕಿತ್ತು ಐದಂಕ ಸಂಪಾದಿಸಿದರು. ಇದೇ ವೇಳೆ ಆ್ಯಶಸ್‌ ಸರಣಿಯ ಸಿಡ್ನಿ ಟೆಸ್ಟ್‌ನಲ್ಲಿ ಆ್ಯಂಡರ್ಸನ್‌ ಕಳಪೆ ಬೌಲಿಂಗ್‌ ಪ್ರದರ್ಶನದಿಂದಾಗಿ 5 ಅಂಕಗಳನ್ನು ಕಳೆದುಕೊಂಡರು. ಈ ಲೆಕ್ಕಾಚಾರದಂತೆ ರಬಾಡ ಈಗ “ಆ್ಯಂಡಿ’ಗಿಂತ ಕೇವಲ ಒಂದು ಅಂಕದ ಮುನ್ನಡೆ ಹೊಂದಿದ್ದಾರೆ. ಭಾರತದೆದುರಿನ ಮುಂದಿನೆರಡು ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಬಾಡ ಅಂಕದಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

“ವಿಶ್ವದ ನಂಬರ್‌ ವನ್‌ ಟೆಸ್ಟ್‌ ಬೌಲರ್‌ ಎನಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇದೊಂದು ವಿಶೇಷ ಗೌರವ. ಕ್ರಿಕೆಟ್‌ ಆಡಲಾ ರಂಭಿಸಿದ ವೇಳೆ ನಮ್ಮ ಕನಸುಗಳಿಗೆ ಬರವಿಲ್ಲ. ಅದರಲ್ಲೊಂದು ನಂಬರ್‌ ವನ್‌ ಪಟ್ಟ. ಇದೀಗ ನನಸಾಗಿದೆ. ಕ್ರಿಕೆಟ್‌ ಒಂದು ಟೀಮ್‌ ಗೇಮ್‌. ನನ್ನ ಯಶಸ್ಸಿನಲ್ಲಿ ತಂಡದ ಎಲ್ಲ ಸದಸ್ಯರ ಸಹಕಾರವಿದೆ’ ಎಂದು ರಬಾಡ ಪ್ರತಿಕ್ರಿಯಿಸಿದ್ದಾರೆ.

75 ರನ್ನಿಗೆ 9 ವಿಕೆಟ್‌ ಕಿತ್ತು ಭಾರತವನ್ನು ಕೇಪ್‌ಟೌನ್‌ನಲ್ಲಿ ಕಾಡಿದ ವೆರ್ನನ್‌ ಫಿಲಾಂಡರ್‌ ಕೂಡ ಬಹಳ ಮೇಲೇರಿದ್ದಾರೆ. ಈ ಸಾಧನೆಗಾಗಿ 67 ಅಂಕ ಪಡೆದ ಫಿಲಾಂಡರ್‌ ಈಗ 12ರಿಂದ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಟಾಪ್‌-20 ಆಚೆಗಿನ ಬೌಲಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಭಾರತದ ಭುವನೇಶ್ವರ್‌ ಕುಮಾರ್‌ (22) ಮತ್ತು ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ (28) ಜೀವನಶ್ರೇಷ್ಠ ರ್‍ಯಾಂಕಿಂಗ್‌ ಗಳಿಸಿದ್ದಾರೆ. ಇವರಿಬ್ಬರದೂ 8 ಸ್ಥಾನಗಳ ನೆಗೆತ.
 
ಸ್ಮಿತ್‌ ಅಗ್ರಸ್ಥಾನದಲ್ಲೇ…
ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ 947 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ವಿರಾಜಮಾನ ರಾಗಿದ್ದಾರೆ. ಆದರೆ ವರ್ಷಾಂತ್ಯದ ರ್‍ಯಾಂಕಿಂಗ್‌ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ವಿರಾಟ್‌ ಕೊಹ್ಲಿ ಈಗ ಮೂರಕ್ಕಿಳಿದಿದ್ದಾರೆ. ಜೋ ರೂಟ್‌ ಎರಡಕ್ಕೇರಿದ್ದಾರೆ. ರೂಟ್‌-ಕೊಹ್ಲಿ ನಡುವೆ ಕೇವಲ ಒಂದಂಕದ ವ್ಯತ್ಯಾಸವಷ್ಟೇ ಇದೆ. ಸಿಡ್ನಿ ಟೆಸ್ಟ್‌ ಸಾಧನೆಗಾಗಿ ರೂಟ್‌ 26 ಅಂಕ ಗಳಿಸಿದರೆ, ಕೇಪ್‌ಟೌನ್‌ ವೈಫ‌ಲ್ಯದಿಂದಾಗಿ ಕೊಹ್ಲಿ 13 ಅಂಕ ಕಳೆದುಕೊಂಡರು.

ಚೇತೇಶ್ವರ್‌ ಪೂಜಾರ ಕೂಡ ಕುಸಿತ ಕಂಡಿದ್ದು, ಮೂರರಿಂದ ಐದಕ್ಕೆ ಇಳಿದಿದ್ದಾರೆ. ದಕ್ಷಿಣ ಆಫ್ರಿಕಾದ ಡೀನ್‌ ಎಲ್ಗರ್‌, ಹಾಶಿಮ್‌ ಆಮ್ಲ ಕೂಡ 3 ಸ್ಥಾನ ಕೆಳಕ್ಕಿಳಿದಿದ್ದಾರೆ. 2014ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯ ಸರಣಿಶ್ರೇಷ್ಠ ಆಟಗಾರ ಐಡನ್‌ ಮಾರ್ಕ್‌ರಮ್‌, ಭಾರತದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಕ್ರಮವಾಗಿ 6 ಹಾಗೂ 24 ಸ್ಥಾನಗಳ ಜಿಗಿತ ಕಂಡಿದ್ದಾರೆ. ಇವರಿಬ್ಬರು ಕ್ರಮವಾಗಿ 48ನೇ ಹಾಗೂ 49ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ ಆಲ್‌ರೌಂಡರ್‌ಗಳ ಯಾದಿ ಯಲ್ಲಿ ಶಕಿಇಬ್‌ ಅಲ್‌ ಹಸನ್‌, ರವೀಂದ್ರ ಜಡೇಜ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೋತರೂ ಭಾರತದ ನಂ.1 ಸ್ಥಾನಕ್ಕೆ ಧಕ್ಕೆಯಾಗಿಲ್ಲ.

ಆಫ್ರಿಕಾದ 7ನೇ ಬೌಲರ್‌
ಕಾಗಿಸೊ ರಬಾಡ ನಂ.1 ಗೌರವಕ್ಕೆ ಪಾತ್ರರಾದ ದಕ್ಷಿಣ ಆಫ್ರಿಕಾದ 7ನೇ ಟೆಸ್ಟ್‌ ಬೌಲರ್‌. ಉಳಿದವರೆಂದರೆ ಯುಬ್ರೆ ಫಾಕ್ನರ್‌, ಹಗ್‌ ಟೆಫೀಲ್ಡ್‌, ಪೀಟರ್‌ ಪೋಲಾಕ್‌, ಶಾನ್‌ ಪೋಲಾಕ್‌, ಡೇಲ್‌ ಸ್ಟೇನ್‌ ಮತ್ತು ವೆರ್ನನ್‌ ಫಿಲಾಂಡರ್‌.

ಟಾಪ್‌-10
ಟೆಸ್ಟ್‌ ಬ್ಯಾಟ್ಸ್‌ಮನ್‌

1. ಸ್ಟೀವನ್‌ ಸ್ಮಿತ್‌ (947)
2. ಜೋ ರೂಟ್‌ (881) 
3. ವಿರಾಟ್‌ ಕೊಹ್ಲಿ (880) 
4. ಕೇನ್‌ ವಿಲಿಯಮ್ಸನ್‌ (855) 
5. ಚೇತೇಶ್ವರ್‌ ಪೂಜಾರ (848) 
6. ಡೇವಿಡ್‌ ವಾರ್ನರ್‌ (827) 
7. ಅಜರ್‌ ಅಲಿ (755) 
8. ದಿನೇಶ್‌ ಚಂಡಿಮಾಲ್‌ (743) 
9. ಅಲಸ್ಟೇರ್‌ ಕುಕ್‌ (742)
10. ಹಾಶಿಮ್‌ ಆಮ್ಲ (740).

ಟೆಸ್ಟ್‌ ಬೌಲರ್
1. ಕಾಗಿಸೊ ರಬಾಡ (888)
2. ಜೇಮ್ಸ್‌ ಆ್ಯಂಡರ್ಸನ್‌ (887)
3. ರವೀಂದ್ರ ಜಡೇಜ (861)
4. ಆರ್‌. ಅಶ್ವಿ‌ನ್‌ (830)
5. ಹ್ಯಾಝಲ್‌ವುಡ್‌ (814)
6. ವೆರ್ನನ್‌ ಫಿಲಾಂಡರ್‌ (806)
7. ರಂಗನ ಹೆರಾತ್‌ (799)
8. ನೀಲ್‌ ವ್ಯಾಗ್ನರ್‌ (784)
9. ಮಕಿಚೆಲ್‌ ಸ್ಟಾರ್ಕ್‌ (769)
10. ನಥನ್‌ ಲಿಯೋನ್‌ (769).

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.