ಶಿರಾಡಿ – ಅಡ್ಡಹೊಳೆಯಲ್ಲಿ ನಕ್ಸಲರ ಸಂಚಾರ


Team Udayavani, Jan 16, 2018, 6:05 AM IST

n.jpg

ನೆಲ್ಯಾಡಿ: ಶಿರಾಡಿ ಗ್ರಾಮದ ಅಡ್ಡಹೊಳೆಯ ಅರಣ್ಯದಂಚಿನಲ್ಲಿರುವ ಮಿತ್ತಮಜಲಿನ ಮೂರು ಮನೆಗಳಿಗೆ  ರವಿವಾರ ಸಂಜೆ 6.30ರ ಸುಮಾರಿಗೆ ನಾಲ್ವರು ಇದ್ದ ಶಂಕಿತ ನಕ್ಸಲರ ತಂಡ ವೊಂದು ಭೇಟಿ ನೀಡಿ ಮರಳಿದೆ.

ತಂಡದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರಿದ್ದರು. ಅವರು ಕೋವಿ, ಗನ್‌ಗಳನ್ನು  ಹೊಂದಿದ್ದರು ಎನ್ನಲಾಗಿದೆ.
ಮಿತ್ತಮಜಲಿನ ಮೋಹನ್‌, ಅವರ ತಂಗಿ ಲೀಲಾ ಹಾಗೂ ತಮ್ಮ ಸುರೇಶ್‌ ಅವರ ಮನೆಗಳು ಮಾತ್ರ ಪರಿಸರದಲ್ಲಿದ್ದು, ಮೂರೂ ಮನೆಗಳಿಗೆ ಅಪರಿಚಿತರ ತಂಡ ಭೇಟಿ ನೀಡಿ ದಿನಸಿ  ಸಾಮಗ್ರಿಗಳನ್ನು ಕೇಳಿ ಪಡೆಕೊಂಡಿತು.

ದೋಸೆ ಮಾಡಿಸಿ ತಿಂದರು !
ಮನೆಯ ಹತ್ತಿರ ಬಂದವರೇ “ನಾವು ಕಾಡಿನಲ್ಲಿರುವ ನಕ್ಸಲರು; ನಮ್ಮ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗ್ಳನ್ನು ಚಾರ್ಜ್‌ ಮಾಡಿಕೊಡಿ’ ಎಂದು ಮನೆಯವರಲ್ಲಿ ಕೇಳಿಕೊಂಡಿದ್ದಾರೆ. ನಮಗೆ ಹಸಿವಾಗುತ್ತಿದ್ದು ಮನೆಯಲ್ಲಿ ತಿನ್ನುವುದಕ್ಕೆ ಏನಿದೆ ಎಂದೂ ಕೇಳಿದ್ದಾರೆ. ಅಕ್ಕಿ ಕಡೆದಿಟ್ಟಿರುವುದು ಇದೆ ಎಂದು ತಿಳಿದಾಗ ದೋಸೆ ಮಾಡಿಕೊಡಿ ಎಂದು ಹೇಳಿ ಮಾಡಿಸಿ ತಿಂದಿದ್ದಾರೆ.

ಬಳಿಕ ನಕ್ಸಲರು ಸುರೇಶ್‌ ಅವರ ಮನೆಯಲ್ಲಿ ಊಟ ಮಾಡಿ ಹೋಗಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಮೂರೂ ಮನೆಗಳಿಂದ ಅಕ್ಕಿ, ಸಕ್ಕರೆ, ತರಕಾರಿ, ನೀರುಳ್ಳಿ ಮುಂತಾದ ತಮ್ಮ ಅಗತ್ಯದ ಸಾಮಗ್ರಿಗಳನ್ನು ಕೇಳಿ ಪಡೆದು ರಾತ್ರಿ ವೇಳೆ ಕಾಡಿನತ್ತ ಮರಳಿದರು ಅನ್ನುವ ಮಾಹಿತಿಯೂ ತಿಳಿದು ಬಂದಿದೆ.

ಗೊಂದಲ – ಅಸ್ಪಸ್ಟ ಮಾಹಿತಿ
ಶಂಕಿತ ನಕ್ಸಲರ ತಂಡ ಲೀಲಾ ಅವರ ಮನೆಗೆ ಬಂದು ದೋಸೆ ಮಾಡಿಸಿ ತಿಂದ ಬಳಿಕ ಕೂಡಲೇ ಸುರೇಶ್‌ ಅವರ ಮನೆಗೆ ಹೋಗಿ ಊಟವನ್ನೂ ಮಾಡಿ ಹೋಗಿದ್ದಾರೆ ಎನ್ನುವ ಗೊಂದಲದ ಹೇಳಿಕೆಗಳು ಹಾಗೂ ಈ ಬಗ್ಗೆ ಹಲವು ವದಂತಿಗಳಿಂದಾಗಿ ಪ್ರಕರಣವು ಗೊಂದಲಮಯವಾಗಿದೆ. ಹಿಂದೊಮ್ಮೆ ಕೊಕ್ಕಡದ ಸಮೀಪದ ಹತ್ಯಡ್ಕಕ್ಕೆ ನಕ್ಸಲರು ಬಂದುಹೋಗಿದ್ದಾರೆ ಎಂಬ ಸುದ್ದಿ ಹರಡಿ ಬಳಿಕ ಅದು ಸುಳ್ಳು ಸುದ್ದಿ ಎಂದು ಸಾಬೀತಾಗಿತ್ತು. ಪ್ರಾರಂಭದಲ್ಲಿ ಇದೂ ಕೂಡ ಹಾಗೆಯೇ ಆಗಿರಬಹುದು ಎನ್ನುವ ಕಾರಣದಿಂದಲೇ ತಡವಾಗಿ ಬೆಳಕಿಗೆ ಬರಲು ಕಾರಣವಾಗಿದೆ.

ನಕ್ಸಲರು ತಮ್ಮ ತಂಡದ ಇತರ ಸದಸ್ಯರು ಮೇಲಿನ ಗುಡ್ಡದಲ್ಲಿದ್ದಾರೆ ಎಂದೂ ತಿಳಿಸಿದ್ದಾರೆ. ಮಲಯಾಳ, ತಮಿಳು, ತುಳುವಿನಲ್ಲಿ ಮಾತನಾಡು ತ್ತಿದ್ದರು ಎನ್ನಲಾಗಿದೆ.

ತಡವಾಗಿ ಬೆಳಕಿಗೆ
ಶಂಕಿತ ನಕ್ಸಲರು ಭೇಟಿ ನೀಡಿ ಹೋದ ಬಳಿಕ ಮರುದಿನ ಮಧ್ಯಾಹ್ನದ ವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ಶಂಕಿತ ನಕ್ಸಲರು ತಾವು ತೆಗೆದುಕೊಂಡು ಹೋದ ವಸ್ತುಗಳಿಗೆ ಹಣ ನೀಡಿರುವುದು ಹಾಗೂ ತಮಗೆ ಯಾವುದೇ ತೊಂದರೆ ಉಂಟು ಮಾಡದಿರುವುದರಿಂದ ಯಾರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಾರರು; ಅಥವಾ ಶಿಕಾರಿಗೆ ಹೋದ ತಂಡ ಇದಾಗಿರ ಬಹುದು ಎಂದು ಭಾವಿಸಿದ್ದರಿಂ ದಲೂ ವಿಷಯ ತಡವಾಗಿ ಬೆಳಕಿಗೆ ಬಂದಿರ ಬಹುದು ಎನ್ನಲಾಗಿದೆ.

ಇಲಾಖಾ ಮಾಹಿತಿ
ನಾಲ್ವರು ಅನುಮಾನಾಸ್ಪದ ವ್ಯಕ್ತಿ ಗಳು ಭೇಟಿ ನೀಡಿರುವ ಘಟನೆ ನಡೆದಿದ್ದು ಮನೆಗಳಿಂದ ದಿನಸಿ ಸಾಮಗ್ರಿ ಕೊಂಡೊಯ್ದಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರ ಪ್ರಕಾರ ನಕ್ಸಲರ ಆಗಮನವಾಗಿರಲು ಸಾಧ್ಯವಿಲ್ಲ, ಶಿಕಾರಿಗೆಂದು ಹೋದ ಯಾರೋ ಭೇಟಿ ನೀಡಿರುವ ಸಾಧ್ಯತೆಯೇ ಹೆಚ್ಚು. ಬಂದವರು ತಮ್ಮ ಹೆಸರನ್ನು ಲತಾ, ರಾಜೇಶ್‌, ಹಾಗೂ ಪುರುಷೋತ್ತಮ ಎಂದು ಹೇಳಿಕೊಂಡಿದ್ದಾರೆ. ಆದರೆ ಅಂತಹಾ ಹೆಸರಿನವರು ನಕ್ಸಲರ ಪಟ್ಟಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಶೋಧ: ಮಂಗಳವಾರ ಬೆಳಗ್ಗಿನಿಂದಲೇ ನಕ್ಸಲರಿಗೆ ಶೋಧ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.