ಮಗನಿಗಾಗಿ ವಿಂಬಲ್ಡನ್‌, ಆಸ್ಟ್ರೇಲಿಯನ್‌ ಟೆನಿಸ್‌ ಬಿಟ್ಟ ಅಜರೆಂಕಾ


Team Udayavani, Jan 17, 2018, 11:48 AM IST

17-26.jpg

ಕ್ಯಾಲಿಫೋರ್ನಿಯಾ: ಟೆನಿಸ್‌ ಪ್ರಿಯರೆಲ್ಲ ಬೆಲಾರಸ್‌ನ ಈ ಟೆನಿಸ್‌ ಸುಂದರಿ ವಿಕ್ಟೋರಿಯಾ ಅಜರೆಂಕಾ ಹೆಸರು ಕೇಳಿರುತ್ತಾರೆ. ಮಾಜಿ ವಿಶ್ವ ನಂ.1 ಸಿಂಗಲ್ಸ್‌ ಆಟಗಾರ್ತಿ. ಆಕೆ ಏಳೆಂಟು ತಿಂಗಳಿಂದ ಟೆನಿಸ್‌ ಅಂಕಣಕ್ಕೆ ಇಳಿದಿಲ್ಲ. ವಿಂಬಲ್ಡನ್‌, ಆಸ್ಟ್ರೇಲಿಯನ್‌ ಓಪನ್‌ನಂತಹ ಗ್ರ್ಯಾನ್‌ಸ್ಲಾಮ್‌ಗಳನ್ನು ತಪ್ಪಿಸಿಕೊಂಡಿದ್ದಾರೆ.

ಇದಕ್ಕೆ ಕಾರಣವೇನು ಗೊತ್ತಾ? ತನ್ನ 1 ವರ್ಷದ ಪುತ್ರನನ್ನು ತನ್ನದೇ ಸುಪರ್ದಿಯಲ್ಲಿ ಉಳಿಸಿಕೊಳ್ಳಬೇಕೆಂಬ ತಾಯ್ತನದ ತುಡಿತ! ವಿಕ್ಟೋರಿಯಾ ಮತ್ತು ಬಿಲ್ಲಿ ಮೆಕ್‌ಕೀಗ್‌ ಸಂಬಂಧದ ಪರಿಣಾಮ ಹುಟ್ಟಿದ್ದು ಲಿಯೊ ಎಂಬ ಗಂಡುಮಗು. ಈ ಮಗುವಿನ ವಾರಸುದಾರರು ಯಾರು ಎಂಬ ಪ್ರಕರಣ ಅಮೆರಿಕದ ಲಾಸ್‌ ಏಂಜಲೀಸ್‌ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣ  ಇತ್ಯರ್ಥವಾಗುವರೆಗೆ ಕ್ಯಾಲಿ ಫೋರ್ನಿಯಾ ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದರಿಂದ ವಿಕ್ಟೋರಿಯಾ ಇಕ್ಕಟ್ಟಿಗೆ ಸಿಕ್ಕಿದ್ದರು.

ಮಗನಿಗಾಗಿ ಟೆನಿಸ್‌ ಕೂಟಗಳನ್ನೇ ತ್ಯಜಿಸಿದರು. ಇದೀಗ ನ್ಯಾಯಾಲಯ ವಿಕ್ಟೋರಿಯಾ ಪರ ತೀರ್ಪು ನೀಡಿದೆ. ಆದ್ದರಿಂದ ಆಕೆ ನಿರಾಳರಾಗಿದ್ದಾರೆ. ವಾಸ್ತವವಾಗಿ ವಿಕ್ಟೋರಿಯಾ ಬೆಲಾರಸ್‌ ದೇಶದವರು. ಆ ದೇಶದ ನ್ಯಾಯಾಲಯ, ಮಗುವನ್ನು ವಿಕ್ಟೋರಿಯಾ ನೋಡಿ ಕೊಳ್ಳಬೇಕು ಎಂದೇ ತೀರ್ಪು ನೀಡಿತ್ತು. ಆದರೆ ವಿಕ್ಟೋರಿಯಾ ಅಮೆರಿಕದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರಿಂದ ಮೆಕ್‌ಕೀಗ್‌ ಲಾಸ್‌ ಏಂಜಲೀಸ್‌ನಲ್ಲಿ ಪ್ರಕರಣ ಹೂಡಿದ್ದರು. ಈಗ ನ್ಯಾಯಾಲಯ, ಪ್ರಸ್ತುತ ಪ್ರಕರಣ ಅಮೆರಿಕದ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಬೆಲಾರಸ್‌ನಲ್ಲೇ ಇತ್ಯರ್ಥ ಮಾಡಿಕೊಳ್ಳಿ ಎಂದಿದೆ. ಅದು ವಿಕ್ಟೋರಿಯಾ ಸಂತೋಷಕ್ಕೆ ಕಾರಣ. ಹಾಗೆಂದೇ ಕೂಡಲೇ ಎಲ್ಲವೂ  ವಿಕ್ಟೋರಿಯಾ ಪರವಾಗಿದೆ ಎಂಬ ಸ್ಥಿತಿಯೇನಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೆಕ್‌ ಕೀಗ್‌ಗೆ 3 ವಾರಗಳ ಅವಕಾಶ ನೀಡಲಾಗಿದೆ. ಅಲ್ಲಿ ಏನೂ ಇಕ್ಕಟ್ಟು ಸಂಭವಿಸಲಿಕ್ಕಿಲ್ಲ ಎನ್ನುವುದು ಅಜರೆಂಕಾ ವಕೀಲರ ಭರವಸೆ.

ಟಾಪ್ ನ್ಯೂಸ್

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.