ಚಿರತೆ ದಾಳಿಗೆ ಮಹಿಳೆ ಬಲಿ
Team Udayavani, Jan 19, 2018, 6:30 AM IST
ರಾಮನಗರ: ಹಸು ಮೇಲೆ ದಾಳಿ ಮಾಡಿದ ಚಿರತೆಗೆ ಪ್ರತಿರೋಧ ಒಡ್ಡಿದ ಮಹಿಳೆಯ ಮೇಲೆ ಎರಗಿದ ಚಿರತೆಯೊಂದು ಆಕೆಯನ್ನು ಬಲಿತೆಗೆದುಕೊಂಡ ಘಟನೆ ತಾಲೂಕಿನ ಚಿಕ್ಕಸೂಲಿಕರೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಗ್ರಾಮದ ಪುಟ್ಟಹಲಗಮ್ಮ (40) ಚಿರತೆ ದಾಳಿಗೆ ಬಲಿಯಾಗಿರುವ ಮಹಿಳೆ. ಹಸುಗಳನ್ನು ಮೇಯಿಸಲು ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಹಸುವೊಂದರ ಮೇಲೆ ಎರಗಿದ ಚಿರತೆಯನ್ನು ಕಂಡ ಪುಟ್ಟಹಲಗಮ್ಮ ಕೂಗಿಕೊಂಡು ಚಿರತೆಗೆ ಪ್ರತಿರೋಧ ಒಡ್ಡಿದರು. ಇದರಿಂದ ಆಕ್ರೋಶಗೊಂಡ ಚಿರತೆ ಹಸುವನ್ನು ಬಿಟ್ಟು ಪುಟ್ಟಹಲಗಮ್ಮನ ಮೇಲೆ ಎರಗಿತು. ತಕ್ಷಣ ಅಲ್ಲೇ ಇದ್ದ ಈಕೆಯ ಪತಿ ಶಿವಪ್ಪಕಿರುಚಾಡಿದರು. ಕೂಗಾಟ ಕೇಳಿ ಗ್ರಾಮಸ್ಥರು ಆಗಮಿಸಿದರಾದರೂ ಅಷ್ಟರಲ್ಲಾಗಲೆ ಚಿರತೆ ಪುಟ್ಟಹಲಗಮ್ಮ ಅವರ ದೇಹವನ್ನು ಕಚ್ಚಿಕೊಂಡು ಕರಡಿ ಹಳ್ಳದ ಬಳಿಯ ಗವಿಯ ಬಳಿಗೆ ಎಳೆದೊಯ್ದಿತ್ತು. ಬಳಿಕ, ಜನರ ಕೂಗಾಟ ಕೇಳಿ ಚಿರತೆ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ